ಶ್ರೀನಿವಾಸಪುರ ತಾಲ್ಲೂಕಿನ ಹಿರಿಯ ದಲಿತ ಮುಖಂಡ ಶ್ರೀನಿವಾಸನ್ 61 ನೇ ರವರ ಹುಟ್ಟು ಹಬ್ಬ

ಶ್ರೀನಿವಾಸಪುರ: ತಾಲ್ಲೂಕಿನ ಹಿರಿಯ ದಲಿತ ಮುಖಂಡ ದೃವ ನೇತಾರ ಜಿಲ್ಲಾ ಪಂಚಾಯಿತಿ ಮಾಜಿ ಅದ್ಯಕ್ಷ ಎಂ. ಶ್ರೀನಿವಾಸನ್ 61 ನೇ ರವರ ಹುಟ್ಟು ಹಬ್ಬವನ್ನು ವಿದಾನ ಪರಿಷತ್ ಸದಸ್ಯ ಎಂ.ಎಲ್. ಅನೀಲ್ ಕುಮಾರ್ ಹಾದಿಯಾಗಿ ಸ್ಥಳಿಯ ದಲಿತ ಸಂಘಟನೆ ಮುಖಂಡರು ಸಂಘ ಸಂಸ್ಥೆಗಳ ಪದಾದಿಕಾರಿಗಳು ಚುನಾಯಿತ ಪ್ರತಿನಿಧಿಗಳು ಸರ್ಕಾರಿ ನೌಕರರು ಹಾಗು ಎಂ. ಶ್ರೀನಿವಾಸನ್ ಯುವ ಬಳಗದಿಂದ ಸಂಬ್ರಮವಾಗಿ ಹುಟ್ಟು ಹಬ್ಬವನ್ನು ಕೇಕ್ ಕತ್ತರಿಸುವ ಮೂಲಕ ಆಚರಿಸಿ ಶುಭಾಷಯಗಳನ್ನು ತಿಳಿಸಿದ್ದಾರೆ.
ಪಟ್ಟಣದ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಎಂ. ಶ್ರೀನಿವಾಸನ್ ಅಭಿಮಾನಿಗಳ ಯುವ ಬಳಗದಿಂದ ಹುಟ್ಟು ಹಬ್ಬದ ಕಾರ್ಯಕ್ರಮ ಆಯೋಜಿಸಲಾಗಿದ್ದು ಇದರ ಪ್ರಯುಕ್ತ ಕಾರ್ಯಕ್ರಮದ ಕೇಂದ್ರ ಬಿಂದುವಾದ ಶ್ರೀನಿವಾಸನ್ ರನ್ನು ಆತ್ಮೀಯವಾಗಿ ವೇದಿಕೆಗೆ ಬರಮಾಡಿಕೊಂಡು ಕೇಕ್ ಕತ್ತರಿಸಿ ಗೌರವಿಸಿ ಸಂಬ್ರಮ ಸಡಗರದಿಂದ ಹಬ್ಬವನ್ನು ಆಚರಿಸಿ ಮುಂದಿನ ಭವಿಷ್ಯದಲ್ಲಿ ಆಯಸ್ಸು ಆರೋಗ್ಯ ವೃದ್ದಿಯಾಗಿ ಉನ್ನತ ಸ್ಥಾನಗಳನ್ನು ಅಲಂಕರಿಸಬೇಕೆಂದು ಶುಭ ಕೋರಿ ಎಲ್ಲಾ ಗಣ್ಯರು ಶುಭಾಷಯಗಳನ್ನು ತಿಳಿಸಿದ್ದಾರೆ.
ಈ ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯಿತಿ ಸಾಮಾಜಿಕ ಸ್ಥಾಯಿ ಸಮಿತಿ ಮಾಜಿ ಅದ್ಯಕ್ಷ ಆರ್.ಜಿ ನರಸಿಂಹಯ್ಯ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಕೆ.ಕೆ ಮಂಜುನಾಥ್, ರಾಯಲ್ಪಾಡು ಬ್ಲಾಕ್ ಕಾಂಗ್ರೇಸ್ ಮಾಜಿ ಅದ್ಯಕ್ಷ ಸಂಜಯ್‍ರೆಡ್ಡಿ, ದಲಿತ ಮುಖಂಡರಾದ ಉಪ್ಪರಪಲ್ಲಿ ತಿಮ್ಮಯ್ಯ, ರಾಮಾಂಜನಮ್ಮ, ಆವಲಕುಪ್ಪ ಹನುಮಂತಪ್ಪ, ಕೊರ್ನಹಳ್ಳಿ ಟಿ. ನಾರಾಯಣಸ್ವಾಮಿ, ಡಿಪಿಎಸ್ ವೆಂಕಟೇಶ್, ಕಲ್ಲೂರು ವೆಂಕಟೇಶ್, ಯುವ ಕಾಂಗ್ರೇಸ್ ಮುಖಂಡರು, ಪುರಭಾಸದಸ್ಯರಾದ ಉನಿಕಿಲಿ ನಾಗರಾಜ್, ಬಾಸ್ಕರ್, ನೀಲಾವತಿ ಶ್ರೀನಿವಾಸ್, ಮಾಜಿ ಸದಸ್ಯ ಶಂಕರ್, ಅಗ್ರಹಾರ ಮಣಿ, ಆರ್.ವಿ.ಆರ್. ವೆಂಕಟರವಣ, ನರಸಿಂಹ(ಬದ್ರಿ) ಅನೇಕರು ಬಾಗವಹಿಸಿದ್ದರು.