ರಿ. ಪಾರ್ಟಿ ಆಫ್ ಇಂಡಿಯಾ ಕಾರ್ಯಕರ್ತರ ರಾಜ್ಯ ಸಮ್ಮೇಳನಕ್ಕೆ ಅಂಬೇಡ್ಕರ್ ಪುತ್ತಳಿಗೆ ಮಾಲಾರ್ಪಣೆ ಮಾಡಿ ರಾಜ್ಯ ಸಮ್ಮೇಳನಕ್ಕೆ ತೆರಳಿದರು

ಶ್ರೀನಿವಾಸಪುರ: ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಬೃಹತ್ ಕಾರ್ಯಕರ್ತರ ರಾಜ್ಯ ಸಮ್ಮೇಳನವು ಬೆಂಗಳೂರು ಗ್ರಾಮಾಂತರದ ಶ್ರೀ ಚನ್ನ ಬೈರೇಗೌಡ ಕ್ರೀಡಾಂಗಣ, ಹೊಸಕೋಟೆಯಲ್ಲಿ ನಡೆಯುತ್ತಿರುವ ಕಾರ್ಯಕ್ರಮಕ್ಕೆ ಶ್ರೀನಿವಾಸಪುರ ತಾಲ್ಲೂಕು ಆರ್.ಪಿ.ಐ. ಮತ್ತು ಎಸ್.ಎಸ್.ಡಿ. ಸಂಘಟನೆಯ ಮುಖಂಡರಾದ ಒಳಗೇರನಹಳ್ಳಿ ರಾಮಾಂಜನಮ್ಮ, ಚಲ್ದಿಗಾನಹಳ್ಳಿ ಈರಪ್ಪ, ಮಲ್ಲಗಾನಹಳ್ಳಿ ಪಾಪಣ್ಣ, ನೇತೃತ್ವದಲ್ಲಿ ತಾಲ್ಲೂಕಿನ ಅನೇಕ ಕಾರ್ಯಕರ್ತರು ಸಂಘಟಿತರಾಗಿ ಪಟ್ಟಣದ ತಾಲ್ಲೂಕು ಕಚೇರಿ ಮುಂಬಾಗ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ರವರ ಪುತ್ತಳಿಗೆ ಮಾಲಾರ್ಪಣೆಯನ್ನು ಸಲ್ಲಿಸಿ ರಾಜ್ಯ ಸಮ್ಮೇಳನಕ್ಕೆ ತೆರಳಿದರು. ಈ ವೇಳೆಯಲ್ಲಿ ಉಪ್ಪರಪಲ್ಲಿ ತಿಮ್ಮಯ್ಯ, ಆರ್.ಪಿ.ಐ. ಮುಖಂಡ ಬಸನಪಲ್ಲಿ ಬಿ.ಐ. ನರಸಿಂಹಯ್ಯ, ರೆಡ್ಡೆಪ್ಪ, ಅನೇಕ  ಕಾರ್ಯಕರ್ತರು ಹಾಜರಿದ್ದರು.