“ಆರೋಗ್ಯ ರಕ್ಷಾ ಫಲಾನುಭವಿಗಳಿಗೆ ಚೆಕ್ ವಿತರಣೆ ಕಾರ್ಯಕ್ರಮ ”

ಶ್ರೀನಿವಾಸಪುರ: “ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆವತಿಯಿಂದ ಪ್ರಗತಿಬಂಧು ಸ್ವ-ಸಹಾಯ ಸಂಘಗಳ ಸದಸ್ಯರಿಗೆ 2021-22ನೇ ಸಾಲಿನಲ್ಲಿ ಆರೋಗ್ಯ ವಿಮಾ ಯೋಜನೆಯಡಿಯಲ್ಲಿ ಆರೋಗ್ಯ ರಕ್ಷಾ ಕ್ಲೈಂ ಆದ ಫಲಾನುಭವಿಗಳಿಗೆ ಚೆಕ್ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಈ ಕಾರ್ಯಕ್ರಮವನ್ನು ಕೋಲಾರ ಜಿಲ್ಲಾ ಕಛೇರಿಯ ಮಾನ್ಯ ನಿರ್ದೇಶಕರಾದ ಶ್ರೀಯುತ ಮುರಳಿಧರ ಶೆಟ್ಟಿ.ಕೆ ರವರು ಉದ್ಘಾಟಿಸಿಮಾತನಾಡುತ್ತಾ ಇದುವರೆಗೂ ಶ್ರೀನಿವಾಸಪುರ ತಾಲೂಕಿನಲ್ಲಿ ಒಟ್ಟು-102 ಸದಸ್ಯರಿಗೆ9 ಲಕ್ಷ30 ಸಾವಿರದ655 ರೂಗಳನ್ನು ವಿತರಣೆ ಮಾಡಲಾಗಿರುತ್ತದೆ ಎಂದು ತಿಳಿಸಿದರು ಹಾಗೂ ಯೋಜನೆ ಹಲವು ಕಾರ್ಯಕ್ರಮಗಳಲ್ಲಿ ಒಂದಾದ ಆರೋಗ್ಯ ವಿಮೆಯು ಸಂಘದ ಸದಸ್ಯರಿಗೆ ಆರೋಗ್ಯಕ್ಕೆ ಒಂದು ಭದ್ರತೆ ಎಂದು ತಿಳಿಸಿದರು ಹಾಗೂ ಯೋಜನೆಯ ಕಾರ್ಯಕ್ರಮಗಳಲ್ಲಿ ಸಮಾಜದ ಹಿತದೃಷ್ಠಿಯಿಂದ ಪೂಜ್ಯರು ದುಶ್ಚಟಗಳ ಮುಕ್ತ ಸಮಾಜವನ್ನಾಗಿಸಲು ವಿಶ್ವ ತಂಬಾಕು ವಿರೋಧಿ ದಿನಾಚರಣೆ ಹಾಗೂ ಮದ್ಯವರ್ಜನ ಶಿಬಿರಗಳನ್ನು ಆಯೋಜಿಸುತ್ತಾ ಜನರ ಕೆಟ್ಟ ಚಟಗಳನ್ನು ಹೋಗಲಾಡಿಸುವಲ್ಲಿ ಮುಂದಾಗಿರುತ್ತಾರೆ ಇದರಿಂದ ಅನೇಕ ಹೆಣ್ಣು ಮಕ್ಕಳ ಜೀವನ ಸುಧಾರಣೆ ಆಗುತ್ತಿದೆ ಎಂದು ತಿಳಿಸಿದರು.
ನಂತರ ಮಾಜಿ ತಾಲ್ಲೂಕು ಪಂಚಾಯ್ತಿಸದಸ್ಯರಾದ ನಾಗವೇಣಿರೆಡ್ಡಿ ರವರು ಮಾತನಾಡುತ್ತಾ, ಯೋಜನೆಯಕಾರ್ಯಕ್ರಮಗಳಲ್ಲಿ ಸಮಾಜದ ಹಿತದೃಷ್ಠಿಯಿಂದಪೂಜ್ಯರು ಗ್ರಾಮೀಣ ಮಟ್ಟದ ಮಹಿಳೆಯರಿಗೆ ಸರ್ವಾಂಗೀಣ ಅಭಿವೃದ್ಧಿಗಾಗಿ ಜ್ಞಾನವಿಕಾಸ ಕಾರ್ಯಕ್ರಮಗಳ ಮೂಲಕ ಸಿರಿ ಧಾನ್ಯಗಳ ಉಪಯೋಗದ ಬಗ್ಗೆ ಅರಿವು ಮೂಢಿಸಿ ಸಿರಿ ಧಾನ್ಯಗಳನ್ನು ಪ್ರತಿಯೊಬ್ಬ ಮಹಿಳೆಯು ಅಳವಡಿಕೆ ಮಾಡಿಕೊಳ್ಳುವಂತೆ ಮಾಹಿತಿ ನೀಡುತ್ತಿದ್ದಾರೆ ಹಾಗೂ ದುಶ್ಚಟಗಳ ಮುಕ್ತ ಸಮಾಜವನ್ನಾಗಿಸಲು ಮದ್ಯವರ್ಜನ ಶಿಬಿರಗಳನ್ನು & ಶಾಲಾ ವಿದ್ಯಾರ್ಥಿಗಳಿಗೆ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮಗಳಲ್ಲಿ ಚಟ ಮುಕ್ತರಾಗಲು ಮಾಹಿತಿನೀಡುತ್ತಿದ್ದಾರೆ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಹಲವಾರು ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡುತ್ತಾ ಜನ ಸಾಮಾನ್ಯರ ಎಲ್ಲಾ ಕ್ಷೇತ್ರಗಳಲ್ಲಿಯೂ ಅಭಿವೃದ್ಧಿ ಪಡಿಸುವಲ್ಲಿ ಗ್ರಾಮಾಭಿವೃದ್ಧಿ ಯೋಜನೆಯು ಮಹತ್ತರವಾದ ಪಾತ್ರವನ್ನು ವಹಿಸಿದೆ ಎಂದು ತಿಳಿಸಿದರು.
ನಂತರ ಐIಅಅಭಿವೃದ್ಧಿ ಅಧಿಕಾರಿಯಾದ ಶ್ರೀಯುತ ಬಾಲಚಂದ್ರನ್ ರವರು ಮಾತನಾಡುತ್ತಾ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ನೀಡುತ್ತಿರುವ ಆರೋಗ್ಯ ರಕ್ಷಾ ಕ್ಲೈಂ ಒಂದು ಮಂಜುನಾಥಸ್ವಾಮಿಯ ಪ್ರಸಾದ ಎಂದು ಸ್ವೀಕರಿಸಿ ನಿಮಗೆ ಈ ಪ್ರಸಾದ ಸಿಕ್ಕಿರುವ ಭಾಗ್ಯ ನಿಮ್ಮ ಪಾಲಿಗೆ ಬಂದಿದೆ ಎಂದರು ಹಾಗೂಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಎಲ್ಲಾ ಕ್ಷೇತ್ರಗಳಲ್ಲಿ ತಮ್ಮ ಅಮೃತಹಸ್ತವನ್ನು ಜೋಡಿಸುತ್ತಾ ಸಮಾಜಕ್ಕೆ ಒಳ್ಳೆಯದನ್ನು ಮಾಡುತ್ತಿದೆ ಎಂದು ತಿಳಿಸಿದರು. ಹಾಗೂವಿಷೇಶವಾಗಿ ಬಡವರಿಗೆ ಹಾಗೂ ಗ್ರಾಮೀಣ ಮಹಿಳೆಯರಿಗೆ ಆರ್ಥಿಕವಾಗಿ ಅಭಿವೃದ್ಧಿಯಾಗಲು ಗ್ರಾಮಾಭಿವೃದ್ಧಿ ಯೋಜನೆಯು ಮುಂದಾಗುತ್ತಿದೆ ಹಾಗೂ ಸರ್ಕಾರದ ಪರ್ಯಾಯವಾಗಿ ಈ ರೀತಿ ಮಂಜುನಾಥಸ್ವಾಮಿ ಕೃಪಾರ್ಶೀವಾದದಿಂದ ಸಮಾಜ ಮುಖಿ ಕಾರ್ಯಕ್ರಮಗಳನ್ನು ಮಾಡುತ್ತಿದ್ದಾರೆ, ಹಾಗೂ ಆರೋಗ್ಯ ರಕ್ಷಾ ಕ್ಲೈಂಗಳನ್ನು ನೀಡುತ್ತಾ ಆರೋಗ್ಯದ ಕಡೆಯು ನೆರೆವಾಗುತ್ತಿದೆ ಎಂದು ತಿಳಿಸಿದರು.
ಉಪಸ್ಥಿತಿ: ಶ್ರೀನಿವಾಸಪುರ ತಾಲೂಕಿನ ಮಾನ್ಯ ಯೋಜನಾಧಿಕಾರಿಗಳಾದ ಶ್ರೀಯುತ ಸುರೇಶ್ ಗೌಡ ಎಸ್, ರವರು ಹಾಗೂಆರಕ್ಷಕ ವೃತ್ತ ನಿರೀಕ್ಷಕರಾದ ಶ್ರೀಯುತ ನಾರಾಯಣಸ್ವಾಮಿ ರವರು ಹಾಗೂ ಉದಯವಾಣಿ ಪತ್ರಕರ್ತರಾದ ಶ್ರೀಯುತ ನಾಗರಾಜ್ ರವರು ಹಾಗೂಆರೋಗ್ಯ ರಕ್ಷಾ ವಿಮಾ ಕ್ಲೈಂನ ಫಲಾನುಭವಿಗಳು ಹಾಗೂ ಪ್ರಗತಿ ಬಂಧು ಸ್ವಸಹಾಯಸಂಘದ ಸದಸ್ಯರು ಉಪಸ್ಥಿತರಿದ್ದರು.