ನಗರಾಭಿವೃದ್ಧಿ ಇಲಾಖೆಯ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲು : ಕರ್ನಾಟಕ ಲೋಕಯುಕ್ತ

ಕೋಲಾರ : ಗೌರವಾನ್ವಿತ ಲೋಕಾಯುಕ್ತರು , ಕರ್ನಾಟಕ ಲೋಕಾಯುಕ್ತ , ಬೆಂಗಳೂರು ರವರು ದಿನಾಂಕ : 05-08-2022 ರಂದು ಕೋಲಾರ ನಗರಾಭಿವೃದ್ಧಿ ಪ್ರಾಧಿಕಾರದಿಂದ ನಿರ್ಮಾಣ ಮಾಡಿರುವ ಶ್ರೀ ದೇವರಾಜ ಅರಸು ಬಡಾವಣೆಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವಲ್ಲಿ ವಿಫಲವಾಗಿರುವ ಬಗ್ಗೆ ವಿಚಾರಣೆ ನಡೆಸಿ ಬಡಾವಣೆ ನಿರ್ಮಾಣಗೊಂಡು ಸುಮಾರು 30 ವರ್ಷಗಳು ಕಳೆದಿದ್ದರೂ , ಸಮರ್ಪಕ ಮೂಲಭೂತ ಸೌಕರ್ಯಗಳನ್ನು ಓದಗಿಸುವಲ್ಲಿ ವಿಫಲಾಗಿರುವ ಕೋಲಾರ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರು ಹಾಗೂ ಸರ್ಕಾರದ ಕಾರ್ಯದರ್ಶಿಗಳು , ನಗರಾಭಿವೃದ್ಧಿ ಇಲಾಖೆ , ವಿಕಾಸ ಸೌಧ , ಬೆಂಗಳೂರು ರವರುಗಳ ವಿರುದ್ಧ ಸ್ವಯಂ ಪ್ರೇರಿತರಾಗಿ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಕರ್ನಾಟಕ ಲೋಕಾಯುಕ್ತದ ಅವರು ತಿಳಿಸಿದ್ದಾರೆ .