ಚಿನ್ಮಯಿ ಆಸ್ಪತ್ರೆಯ ಮಾಲಕ ಉದ್ಯಮಿ ಕಟ್ಟೆ ಭೋಜಣ್ಣ ರಿವಾಲ್ವರ್‌ನಲ್ಲಿ ಗುಂಡು ಹಾರಿಸಿಕೊಂಡು  ಆತ್ಮಹತ್ಯೆ..!! ಕೋಟಿಗಟ್ಟಲೆ ವ್ಯವಹಾರವೇ ಮುಳುವಾಯಿತಾ!!? 

JANANUDI.COM NETWORK

ಕುಂದಾಪುರ: ಉಡುಪಿ ಜಿಲ್ಲೆಯ ಕುಂದಾಪುರದ ಹಿರಿಯ ಉದ್ಯಮಿ ಚಿನ್ಮಯಿ ಆಸ್ಪತ್ರೆಯ ಮಾಲಕ ಕಟ್ಟೆ ಭೋಜಣ್ಣ (80) (ಕಟ್ಟೆ ಅವರ ಹಿರಿಯರಿಂದ ಬಂದ ಹೆಸರು)  ಪುರಾಣಿಕ ರಸ್ತೆಯಲ್ಲಿರುವ ಮೊಳಹಳ್ಳಿ ಗಣೇಶ್ ಶೆಟ್ಟಿ ಎಂಬವರ ಮನೆಯ ಸಿಟೌಟ್‌ನಲ್ಲಿ ರಿವಾಲ್ವರ್‌ನಲ್ಲಿ ಗುಂಡು ಹಾರಿಸಿಕೊಂಡು ಅನುಮಾನಾಸ್ಪದ ರೀತಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.  ಕೋಟೇಶ್ವರ ಬಳಿ ಇಂದು ಗುರುವಾರ ಬೆಳಗ್ಗೆ 6.15ರ ಸುಮಾರಿಗೆ ಈಘಟನೆ ನಡೆದಿದೆ.  ಆದರೆ ಆತ್ಮಹತ್ಯೆ ಮಾಡಿಕೊಂಡವರು ಬೇರೆಯವರ ಮನೆಯ ಸಿಟೌಟ್‌ನಲ್ಲಿ ಕುಳಿತು ಗುಂಡು ಹಾರಿಸುವುದು ಏಕೆ ಎಂಬ ಅನುಮಾನ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
    ಕೋಟ್ಯಾಧಿಪತಿಯಾಗಿರುವ ಕಟ್ಟೆ ಭೋಜಣ್ಣ ಬೆಂಗಳೂರಿನಲ್ಲಿ ಹಲವು ಹೋಟೆಲ್, ಬಟ್ಟೆ ಅಂಗಡಿಗಳನ್ನು ನಡೆಸುತ್ತಿದ್ದರು. ಕುಂದಾಪುರದ ಚಿನ್ಮಯಿ ಆಸ್ಪತ್ರೆ, ಉಡುಪಿ ಹಾಗೂ ಉ.ಕ ಜಿಲ್ಲೆಯಲ್ಲಿಯೇ ಪ್ರಸಿದ್ಧಿ ಪಡೆದಿದೆ.

ಜಮೀನು ಮತ್ತು ಹಣಕಾಸಿನ ವ್ಯವಹಾರ, ವ್ಯವಹಾರದಲ್ಲಿ ಮೋಸವಾಗಿ ಕೋಟಿಗಟ್ಟಲೆ ಹಣದ ಅವಶ್ಯೆಕತೆಗಾಗಿ ಕೊನೆಗೆ ಹತಾಶಾರಾಗಿ ಆತ್ಮಹತ್ಯೆಗೆ ಶರಣಾಗಿದ್ದಾರೆಂದು  ಎಂದು ಶಂಕಿಸಲಾಗಿದೆ

ಶಿಸ್ತಿಗೆ ಹೆಸರಾಗಿದ್ದ ಕಟ್ಟೆ ಭೋಜಣ್ಣ ಅವರು  ಪತ್ನಿ ಭಾಗೀರಥಿ, ಸುಧಿ, ಗುಂಡ ಮತ್ತು ಸುಮಾ ಪುತ್ರನ್ (ಡಾ. ಉಮೇಶ್ ಅವರ ಪುತ್ರ ಪತ್ನಿಯನ್ನು ಅಗಲಿದ್ದಾರೆ. ಕುಂದಾಪುರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಘಟನಾ ಸ್ಥಳಕ್ಕೆ ಬೆರಳಚ್ಚು ತಜ್ಞರು, ಫೊರೆನ್ಸಿಕ್ ತಜ್ಞರು ಆಗಮಿಸಲಿದ್ದು ಪರಿಶೀಲನೆ ನಡೆಸಲಿದ್ದಾರೆ. ಉಡುಪಿ ಎಸ್ಪಿ, ಕುಂದಾಪುರ ಡಿವೈಎಸ್ಪಿ,  ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಕುಂದಾಪುರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.