ಶ್ರೀನಿವಾಸಪುರ: ಬಹಳ ದಿನಗಳಿಂದ ನೆನೆಗುದಿಗೆ ಬಿದ್ದಿದ್ದ  ಕಾಮಗಾರಿಗೆ ಶಾಸಕರಿಂದ ಭೂಮಿ ಪೂಜೆ

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ: ಬಹಳ ದಿನಗಳಿಂದ ನೆನೆಗುದಿಗೆ ಬಿದ್ದಿದ್ದ  ಕಾಮಗಾರಿಗೆ ಶಾಸಕರಿಂದ ಭೂಮಿ ಪೂಜೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಪಟ್ಟಣದ ಚಿಂತಾಮಣಿ  ಶ್ರೀನಿವಾಸಪುರ  ರಸ್ತೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಹಾಗೂ ಚರಂಡಿ ಒಂದೇ ಪ್ಯಾಕೇಜ್ ನಡಿಯಲ್ಲಿ ಮಂಜೂರಾಗಿದ್ದು ಸುಮಾರು ಒಂದು ವರ್ಷದ ಹಿಂದೆಯೇ ರಸ್ತೆ ಕಾಮಗಾರಿ ಪೂರ್ಣಗೊಳಿಸಲಾಗಿದೆ ಆ  ಸಮಯದಲ್ಲಿ ಪಟ್ಟಣದಲ್ಲಿ ಎರಡು ಬದಿಗಳಲ್ಲಿ ಚರಂಡಿ ನಿರ್ಮಾಣ ಮಾಡಲು ಗುತ್ತಿಗೆದಾರರು ಮುಂದಾಗಿದ್ದರು  ರಸ್ತೆ ಬದಿಯ ಅಂಗಡಿ ಮಾಲೀಕರು ಹಾಗೂ ಅಕ್ಕಪಕ್ಕದ ಮನೆ ಮಾಲೀಕರು ತಕರಾರು ಮಾಡಿ ಚರಂಡಿ ಕಾಮಗಾರಿಯನ್ನು ನಿಲ್ಲಿಸಲಾಗಿತ್ತು ಕಳೆದ ಕೆಲವು ತಿಂಗಳಿಗಳಿಂದ ವ್ಯವಸ್ಥಿತವಾಗಿ ಚರಂಡಿ ಗಳಿಲ್ಲದೆ ಪರದಾಡುತ್ತಿದ್ದ ಅಂಗಡಿ ಮಾಲೀಕರು ಪುರಸಭೆ ಕಚೇರಿ ಮುಂದೆ ಪ್ರತಿಭಟನೆ ಸಹ ಮಾಡಿ ಪುರಸಭೆಯ ಅಧಿಕಾರಿಗಳು ಹಾಗೂ ಅಧ್ಯಕ್ಷರು ತಾಲ್ಲೂಕಿನ ಶಾಸಕರಾದ ಕೆ ಅರ್ ರಮೇಶ್ ಕುಮಾರ್ ಗಮನಕ್ಕೂ ತರಲಾಗಿತ್ತು ಶಾಸಕರು ಕೇಂದ್ರ ಸಚಿವರ ಜೊತೆ ಮಾತನಾಡಿ ಪಟ್ಟಣದ ಚರಂಡಿ ಕಾಮಗಾರಿ ವಿಚಾರಗಳನ್ನು ಪ್ರಸ್ತಾಪ ಮಾಡಿ ಸಮಸ್ಯೆಯನ್ನು ಅರಿವು ಮೂಡಿಸಿ ಪುನಃ ನಿನ್ನೆ ಚರಂಡಿ ಕಾಮಗಾರಿಗೆ ಭೂಮಿಪೂಜೆಯನ್ನು ತಾಲೂಕಿನ ಹಾಲಿ ಶಾಸಕರಾದ ಕೆ ಆರ್ ರಮೇಶ್ ಕುಮಾರ್ ಪುರಸಭೆ ಅಧ್ಯಕ್ಷೆ ಲಲಿತಾ ಶ್ರೀನಿವಾಸ್ ನೆರವೇರಿಸಿದರು ಇನ್ನು ಈ ಸಮಯದಲ್ಲಿ ಪುರಸಭೆ ಮುಖ್ಯಾಧಿಕಾರಿ ಸತ್ಯನಾರಾಯಣ, ಇ ಓ ಆನಂದ್,ಹುಸೇನ್ ಸಾಬ್,  ಪುರಸಭೆ ಉಪಾಧ್ಯಕ್ಷೆ ಆಯಿಷಾ ನಯಾಜ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್ ಅಕ್ಬರ್ ಷರೀಫ್  ಪುರಸಭೆ ಸದಸ್ಯ ಕೆ ಅನೀಸ್ ಅಹ್ಮದ್ ಇಫ್ತೆಖಾರ್ ಅಹ್ಮದ್ ಶಬ್ಬೀರ್ ಖಾನ್ ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ ಜಿ  ಖಾದರ್, ಪುರಸಭೆಯ ಮಾಜಿ ಸದಸ್ಯ ಶಂಕರ್ ಜಾಮಿಯಾ ಮಸೀದಿ ಮುತುವಲ್ಲಿ ಝಹೀದ್ ಅನ್ಸಾರಿ ,ಗುತ್ತಿಗೆದಾರರಾದ ಭಕ್ತವತ್ಸಲರೆಡ್ಡಿ, ಹರೀಶ್ , ಅಶೋಕ್ ಇದ್ದರು.