ಉಕ್ರೇನ್‌ಲ್ಲಿ ಯುದ್ಧದ ಸ೦ದರ್ಭದಲ್ಲಿ ಮ್ರತಪಟ್ಟ ನವೀನ್‌ ಪಾರ್ಥಿವ ಶರೀರ ತಾಯಿನಾಡಿಗೆ ತಲುಪಿತು : ಮಗನ ಮ್ರತ ದೇಹವನ್ನು ಆಸ್ಪತ್ರೆಗೆ ದಾನ ಮಾಡಲಾಗುವುದು -ಶೇಖರ ಗೌಡ

JANANUDI.COM NETWORK

ಬೆಂಗಳೂರು; ಉಕ್ರೇನ್‌ ಮತ್ತು ರಷ್ಯಾ ನಡುವಿನ ಯುದ್ಧದ ಸ೦ದರ್ಭದಲ್ಲ ಮ್ರತಪಟ್ಟ ಕನ್ನಡಿಗ ವಿದ್ಯಾರ್ಥಿ ನವೀನ್‌ ಪಾರ್ಥಿವ ಶರೀರ 21 ದಿನಗಳ ನಂತರ ತಾಯ್ನಾಡಿಗೆ ತಲುಪಿದೆ. ಕೆ೦ಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ಮಾಣದ ಕಾರ್ಗೋ ವಿಭಾಗದಲ್ಲಿ ಪಾರ್ಥಿವ ಶರೀರವನ್ನು
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿದ್ಯಾರ್ಥಿಯ ಕುಟುಂಬಕ್ಕೆ ಹಸ್ತಾಂತರಿಸಿದರು.
ದುಬೈ ಮೂಲಕ ಸೋಮವಾರ ಮುಂಜಾನೆ 3 ಗ೦ಟಿ ವೇಳೆ ನವೀನ್‌ ಪಾರ್ಥಿವ ಶರೀರ ಬೆಂಗಳೂರು ಕೆ೦ಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ಕಾಣಕ್ಕೆ ಆಗಮಿಸಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಂಸದಶಿವಕುಮಾರ್‌ ಉದಾಸಿ, ಸಚಿವ ಡಾ.ಕೆ.ಸುಧಾಕರ್‌, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಇತರರು ಪಾರ್ಥಿವ ಶರೀರ! ಅಂತಿಮ ದರ್ಶನ ಪಡದರು. ಮೃತ ನವೀನ್‌ ಸಹೋದರ ಹರ್ಷ ಸೇರಿದಂತೆ ಗ್ರಾಮಸ್ಮರು ಪಾರ್ಥಿವ ಶರೀರವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದ ಪಡೆದುಕೊಂಡು ಆಂಬ್ಯುಲೆನ್ಸ್‌ನಲ್ಲಿ ಹಾವೇರಿ ಜಿಲ್ಲೆಯ ಸ್ವಗ್ರಾಮಕ್ಕೆ ತೆರಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ನವೀನ್‌ ತಂದೆ, ತಾಯಿ ಆತ ಮೆಡಿಕಲ್‌ ಮುಗಿಸಿ ಬಂದ ನಂತರ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತಮ್ಮ ಮಗನನ್ನು ಸ್ವಾಗತಿಸಬೇಕಿತ್ತು. ಆದರೆ, ಇ೦ದು ಆತನ ಪಾರ್ಥಿವ ಶರೀರ ಬೆ೦ಗಳೂರಿಗೆ ಬಂದಿರುವುದು ಬಹಳ ನೋವಿನ ಸಂಗತಿ. ಯೋಚನೆ ಮಾಡುವುದಕ್ಕೂ ಕಷ್ಟವಾಗುತ್ತದೆ ಎಂದರು.
ರಷ್ಯಾ ಮತ್ತು ಉಕ್ರೇನ್‌ ನಡುವಿನ ಯುದ್ಧವು ಇಡೀ ಪ್ರಪಂಚವನ್ನೇ ತಲ್ಲಣಗೊಳಿಸಿದ. ನಮ್ಮ ದೇಶದ ಹಲವಾರು
ವಿದ್ಯಾರ್ಥಿಗಳು ಮಡಿಕಲ್‌ ಓದುತ್ತಿರುವುದು ಗೊತ್ತಿರುವ ವಿಷಯ. ಅನೇಕ ಮಂದಿ ಸುರಕ್ಕಿತವಾಗಿ ವಾಪಸ್‌ ಬಂದಿದ್ದಾರೆ. ಆದರೆ ದುರ್ದೈವವೆಂದರೆ ನವೀನ್‌ ಮಿಸೈಲ್‌ ದಾಳಿಯಿಂದ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಎಂದುನವೀನ್‌ ಪಾರ್ಥಿವ ಶರೀರಕ್ಕೆ ನಮನ ಸಲ್ಲಿಸಿದರು.


ಮ್ರತ ನವೀನ್ ತಂದೆ ಶೇಖರ ಗೌಡ ತಮ್ಮ ಪುತ್ರನ ಪಾರ್ಥಿವ ಶರೀರವನ್ನುಹಾವೇರಿ ಜಿಲ್ಲೆಯ ರಾಣಿ ಬೆನ್ನುರು ತಾಲೂಕಿನ ಚಳಗೇರಿಗೆ ಕೊಂಡು ಹೋಗಿ ವೀರ ಶೈವ ಸಂಪ್ರಾದಾಯದಂತೆ, ಪೂಜೆ ಸಲ್ಲಿಸಿ ಅಂತೀಮ ವಿಧಿ ವಿಧಾನಗಳ ನೇರವೆರಿಸಿದ ಬಳಿಕ ಉರಲ್ಲಿ ಪಾರ್ಥೀವ ಶರೀರದ ಮೆರವಣಿಗೆಯ ತರುವಾಯ ನವೀನ್ ಮ್ರತ ದೇಹವನ್ನು ಎಸ್.ಎಸ್. ಆಸ್ಪತ್ರೆಗೆ ದಾನ ಮಾಡಲಾಗುವುದೆಂದು ತಿಳಿಸಿದರು.