ಕುಂದಾಪುರ ಖಾರ್ವಿಕೇರಿ ನಿವಾಸಿ ಶಂಕರ ಖಾರ್ವಿ ನಿಧನ

ವರದಿ : ಮಝರ್, ಕುಂದಾಪುರ


ಸ್ಥಳೀಯ ಖಾರ್ವಿಕೇರಿ ನಿವಾಸಿ ಶಂಕರ ಖಾರ್ವಿ (53) ಅವರು ಅಲ್ಪಕಾಲದ ಅಸೌಖ್ಯದಿಂದ ಮಾರ್ಚ್ 14 ರ ಸೋಮವಾರ ನಿಧನರಾದರು.
ಪ್ರಮುಖ ಬಸ್ ಏಜೆಂಟರಾಗಿ ಗುರುತಿಸಲ್ಪಟ್ಟಿದ್ದ ಇವರು ಬಿಜೆಪಿ ಪಕ್ಷದ ಧುರೀಣರಾಗಿದ್ದಲ್ಲದೇ ಕುಂದಾಪುರ ಪುರಸಭೆಯ ಮಾಜಿ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು.
ಮೃತತು ಪತ್ನಿ, ಎರಡು ಹೆಣ್ಣುಮಕ್ಕಳ ಸಹಿತ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.