ಜೇಸಿಐ ಸಿಟಿ, ಮಹಿಳಾ ವೇದಿಕೆ ಹಾಗೂ ಡಾಕ್ಟರ್ ಬಿ ಬಿ ಹೆಗ್ಡೆ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ಮಹಿಳಾ ದಿನಾಚರಣೆ

JANANUDI.COM NETWORK

ಕುಂದಾಪುರ, ಮಾ. ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಜೇಸಿಐ ಕುಂದಾಪುರ ಸಿಟಿ, ಮಹಿಳಾ ವೇಡಿಕೆ ಹಾಗೂ ಡಾಕ್ಟರ್ ಬಿ ಬಿ ಹೆಗ್ಡೆ ಕಾಲೇಜು ಕುಂದಾಪುರ ಇವರ ಸಂಯುಕ್ತ ಆಶ್ರಯದಲ್ಲಿ ನಮನ ಎಂಬ ಶೀರ್ಷಿಕೆಯಡಿ ಸಾಧನೆಗೈದವರನ್ನು ಸನ್ಮಾನಿಸಲಾಯಿತು.
ಶೈಕ್ಷಣಿಕವಾಗಿ, ಸಾಧನೆಗೈದ ಕುಮಾರಿ ಅಕ್ಷತಾ, ಕ್ರೀಡಾ ಕ್ಷೇತ್ರದಲ್ಲಿ ಸಾಧನೆಗೈದ ಕುಮಾರಿ ನವ್ಯ ಪಿ, ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಕುಮಾರಿ ಸೌಜನ್ಯ ಮೂವರು ವಿದ್ಯಾರ್ಥಿನಿಯರನ್ನು ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆಗೈದ ಶ್ರೀಮತಿ ಸವಿತಾ ಮಾಧವ ಶಾಸ್ತ್ರಿ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸನ್ಮಾನ ಸ್ವೀಕರಿಸಿ ಶ್ರೀಮತಿ ಸವಿತಾ ಮಾಧವ ಶಾಸ್ತ್ರಿಯವರು ತಮ್ಮ ಸಾಧನೆಯ ಹಾದಿಯ ಮಾತುಗಳ ಮೂಲಕ ಇತರ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಿದರು.
ಸಭೆಯ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಉಮೇಶ್ ಶೆಟ್ಟಿ ಅವರು ವಹಿಸಿದ್ದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಜೇಸಿಐ ಕುಂದಾಪುರ ಸಿಟಿ ಅಧ್ಯಕ್ಷ ಜೇಸಿ ಅಭಿಲಾಷ್ ಬಿ ಎ, ಉಪ ಪ್ರಾಂಶುಪಾಲರಾದ ಶ್ರೀ ಚೇತನ್ ಶೆಟ್ಟಿ, ನಿಕಟಪೂರ್ವ ಅಧ್ಯಕ್ಷರಾದ ಜೆ ಸಿ ವಿಜಯ ಭಂಡಾರಿ, ಲೇಡಿ ಜೇಸಿ ಸಂಯೋಜಕಿಯಾದ ಜೆಸಿ ರೇಖಾ ಕೆ ಯು,ಶ್ರೀಮತಿ ಶುಭಾ ಅಡಿಗ ಕುಮಾರಿ ಅಮೃತಾ ರವರು ಸಾಧಕರನ್ನು ಸನ್ಮಾನಿಸಿ ಗೌರವಿಸಿದರು .
ಘಟಕದ ಕಾರ್ಯದರ್ಶಿ ಜೆಸಿ ಲೋನಾ ಲೆವಿಸ್ ರವರು ವಂದಿಸಿದರು .