ಕುಂದಾಪುರ : ನಕಲಿ ದಾಖಲೆ ಸೃಷ್ಟಿಸಿ ಕಂದಾಯ ಇಲಾಖೆಯ ನೌಕರನ ಜಾಗ ಮಾರಟ

JANANUDI.COM NETWORK

ಕುಂದಾಪುರ ಮಾ.9: ನಕಲಿ ದಾಖಲೆ ಸೃಷ್ಟಿಸಿ ಕಂದಾಯ ಇಲಾಖೆಯ ನೌಕರರಾದ.
ಬಿ ಶಿವಮಲ್ಲುರವರ ಜಾಗ ಮಾರಾಟ ಮಾಡಿ ವಂಚನೆ ಮಾಡಿರುವ ಕುರಿತು ಕುಂದಾಪುರ ಠಾಣೆಯಲ್ಲಿ ದೂರೊಂದು
ದಾಖಲಾಗಿದೆ. / ಬಿ ಶಿವಮಲ್ಲು ಅವರು ಬ್ರಹ್ಮಾವರ ತಾಲೂಕಿನ ದ್ವಿತೀಯ ದರ್ಜೆ ಸಹಾಯಕ ನೌಕರರಾಗಿದ್ದು, ಇವರಿಗೆ 2000 ಇಸವಿಯ ಮಾ.16 ರಂದು ತಲ್ಲೂರು ಗ್ರಾಮದ ಸರಕಾರಿ ನೌಕರರ ಬಡಾವಣೆಯಲ್ಲಿ ಸರ್ವೇ ನಂ 162/285 ರಲ್ಲಿ 11ನೆಯ ಮನೆ ನಿವೇಶನವು ಮಂಜೂರಾಗಿರುತ್ತು. / ಈ ಜಾಗವನ್ನು ಮಾರಾಟದ ಉದ್ದೇಶದಿಂದ ಜಾಗದ ಋಣಬಾರ ಪತ್ರವನ್ನು ಪಡೆಯಲು ಕುಂದಾಪುರ ಸಬ್‌
ರಿಜಿಸ್ಟ್ರಾರರನ್ನು ಸಂಪರ್ಕಿಸಿದಾಗ ಜಾಗವು ಈಗಾಗಲೇ ಮಾರಾಟವಾಗಿರುವ ವಿಷಯ ಗಮನಕ್ಕೆ ಬಂದಿದೆ.
ಈ ವಿಚಾರವಾಗಿ ಬಿ ಶಿವಮಲ್ಲುರವರು ಕ್ರಯಪತ್ರದ ಧೃಢೀಕೃತ ನಕಲನ್ನು ಪರಿಶೀಲಿಸಿದಾಗ ಬಿ ಶಿವಮಲ್ಲು ರವರ
ಕುಂದಾಪುರ ಪೋರ್ಜರಿ ಸಹಿ ಹಾಗೂ ನಕಲಿ ದಾಖಲೆ ಸೃಷ್ಟಿಸಿ ವಂಚಿಸಿರುವುದು ಗಮನಕ್ಕೆ ಬಂದಿದೆ. /ಕುಂದಾಪುರದ ಪ್ರೇಮಾ ಲಕ್ಷ್ಮಣ ನಾಯಕ್‌ ಹಾಗೂ ಜೋನ್‌ ಮಿನೇಜಸ್‌ ಎಂಬಿಬ್ಬರು ಸೇರಿಕೊಂಡು ಬಿ.
ಶಿವಮಲ್ಲುರವರ ಹೆಸರಿನಲ್ಲಿರುವ ನಿವೇಶನದ ನಕಲಿ ದಾಖಲೆ ಸೃಷ್ಟಿಸಿ. ಶಿವಮಲ್ಲು ಅವರಿಗೆ ತಿಳಿಯದಂತೆ.
ಜಾಗವನ್ನು ಮಾರಾಟ ಮಾಡಿ ವಂಚಿಸಿರುವುದಾಗಿ ನೀಡಿದ ದೂರಿನಂತೆ ಕುಂದಾಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.