ಕುಂದಾಪುರ ಜನ ಔಷಧಿ ಸಪ್ತಾಹದ ನಾಲ್ಕನೇ ದಿನ:ಬಾಲಮಿತ್ರ ಅಭಿಯಾನ

JANANUDI.COM NETWORK


ಕುಂದಾಪುರ, ಮಾ:5: ಜನ ಔಷಧಿ ಸಪ್ತಾಹದ ನಾಲ್ಕನೇ ದಿನ ತಾ: 04-03-2022. ಬಾಲಮಿತ್ರ ಅಭಿಯಾನ. ಸರಕಾರಿ ಆಸ್ಪತ್ರೆ ಆವರಣದಲ್ಲಿ ಹನ್ನೆರಡು ವರ್ಷ ಕೆಳಗಿನ ಸುಮಾರು 50 ಮಂದಿ ವಿದ್ಯಾರ್ಥಿಗಳಿಗೆ ಈ ಕಾರ್ಯಕ್ರಮವನ್ನು ಆಯೋಜಿಸ ಲಾಯಿತು. ರೆಡ್ ಕ್ರಾಸ್ ಸಭಾಪತಿ ಶ್ರೀ ಎಸ್. ಜಯಕರ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು. ಚಿನ್ಮಯಿ ಆಸ್ಪತ್ರೆಯ ನಿರ್ದೇಶಕ ರಾದ ಶ್ರೀಮತಿ ಸುಮಾ ಉಮೇಶ್ ಪುತ್ರನ್ ಈ ಕಾರ್ಯಕ್ರಮ ಉದ್ಘಾಟಿಸಿದರು ಮತ್ತು ಉದ್ಘಾಟನಾ ಭಾಷಣ ಮಾಡಿದರು. ಉಪಸ್ಥಿತ ಮಕ್ಕಳಿಗೆ ಗಿಫ್ಟ್ ಹೇಂಪರ್ ಮತ್ತು ಉಪಹಾರ ನೀಡಲಾಯಿತು. ಕಾರ್ಯಕಾರಿ ಸಮಿತಿಯ ಸದಸ್ಯ ರಾದ ಡಾ. ಸೋನಿ ಕಾರ್ಯಕ್ರಮ ನಿರೂಪಣೆ ಮಾಡಿದರು ಮತ್ತು ಕಾರ್ಯದರ್ಶಿ ವೈ. ಸೀತಾರಾಮ ಶೆಟ್ಟಿ ವಾದಿಸಿದರು.
ಕಾರ್ಯಕ್ರಮ ದಲ್ಲಿ ರೆಡ್ ಕ್ರಾಸ್ ಖಜಾಂಚಿ ಶಿವರಾಮ ಶೆಟ್ಟಿ, ಕಾರ್ಯಕಾರಿ ಸಮಿತಿಯ ಸದಸ್ಯರು ಗಳಾದ ಗಣೇಶ್ ಆಚಾರ್ಯ, ಎ. ಮುತ್ತಯ್ಯ ಶೆಟ್ಟಿ, ಸೀತಾರಾಮ ನಕ್ಕತ್ತಾಯ, ಮತ್ತು ನಾರಾಯಣ ದೇವಾಡಿಗ ಉಪಸ್ಥಿತ ರಿದ್ದರು