ದೇಶದ ರಾಜಧಾನಿಯಲ್ಲಿ ಕ್ರೈಸ್ತ ಪಾದರ್ ಅವರಿಗೆ ವಿಭಜಕಕ್ಕೆ ಕಟ್ಟಿ ಹಾಕಿ ದೌರ್ಜನ್ಯ

JANANUDI.COM NETWORK

ನವದೆಹಲಿ ಮಾ.4: ಒರ್ವ ಕ್ರೈಸ್ತ ಪಾದರ್ ಅವರನ್ನು ವಿಭಜಕಕ್ಕೆ ಕಟ್ಟಿ ಹಾಕಿ ‘ಜೈ ಶ್ರೀರಾಮ್ ಘೋಷಣೆ’ ಕೂಗುವಂತೆ ಬಲವಂತಪಡಿಸಿ ಗಂಭೀರವಾಗಿ ಹಲ್ಲೆ ನಡೆಸಿರುವ ಆಘಾತಕಾರಿ ಘಟನೆ ದೆಹಲಿಯ ಫಹೇಹ್ ಪುರಿಯಲ್ಲಿ ನಡೆದಿದೆ‌.
ಸಂಘಪರಿವಾರದ ಕಾರ್ಯಕರ್ತರು ಮತಾಂತರದ ಆರೋಪ ಹೊರಿಸಿ ಕ್ರೈಸ್ತ ಪಾದರ್ ಅವರನ್ನು ಒಂದು ವಿಭಜಕಕ್ಕೆ ಕಟ್ಟಿ ಹಾಕಿ ದೌರ್ಜನ್ಯ ನಡೆಸಿದ್ದಾರೆ‌. ಈ ಕುರಿತ ಭಯಾನಕ ವಿಡಿಯೋ ಒಂದು ವೈರಲ್ ಆಗಿದೆ.
ಘಟನೆಗೆ ಸಂಬಂಧಿಸಿದಂತೆ ಮೈದಾನ ಗರ್ಹಿ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.