ಹಿಜಾಬ್ ಕುಂದಾಪುರ : ಪ್ರಾಂಶುಪಾಲರಿಗೆ ಬೆದರಿಕೆಯ ಆರೋಪದಲ್ಲಿ ಯುವಕನ ಬಂಧನ

JANANUDI.COM NETWORK

ಕುಂದಾಪುರ,ಮಾ.3:: ಹಿಜಾಬ್ ವಿಚಾರದಲ್ಲಿ ಕುಂದಾಪುರದ ಆರ್.ಎನ್.ಶೆಟ್ಟಿ ಕಾಲೇಜಿನ ಪ್ರಾಂಶುಪಾಲರಿಗೆ ಬೆದರಿಕೆ ಹಾಕಿದ ಅರೋಪದಲ್ಲಿ ಒರ್ವ ಯುವಕನನ್ನು ಬಂಧಿಸಲಾಗಿದೆ.
ಬಂದಿತ ಯುವಕ ಕೋಲಾರ ಕೆಜಿಎಫ್ ರಾಬರ್ಟ್ಸನ್ ಪೇಟೆ ನಿವಾಸಿ ಮೊಹಮ್ಮದ್ ಶಬೀರ್ ಎಂದು ತಿಳಿದು ಬಂದಿದೆ. ಬಂಧಿತ ಆರೋಪಿ. ಮೊಹಮ್ಮದ್ ಶಬೀರ್ ಇಂಟರ್ನೆಟ್ ಮೂಲಕ ಪ್ರಾಂಶುಪಾಲರಿಗೆ ಕರೆ ಮಾಡಿ ನಿನ್ನ ಹೆಂಡತಿ ಮಕ್ಕಳನ್ನು ಕೊಲ್ಲುತ್ತೇನೆ ಎಂದು ಬೆದರಿಕೆ ಹಾಕಿದ್ದ ಎಂದು ಆರೋಪ ಕೇಳಿಬಂದಿತ್ತು.
ಕುಂದಾಪುರದ ಕಾಲೇಜಿನಲ್ಲಿ ಉಡುಪಿ ಹಿಜಾಬ್ ವಿವಾದದ ಬಳಿಕ ಎಕಾಎಕಿ ಹಿಜಾಬ್ ಹಾಕಿದ ವಿದ್ಯಾರ್ಥಿನಿಯರಿಗೆ ಪ್ರಾಂಶುಪಾಲರು ಪ್ರವೇಶ ನಿರಾಕರಿಸಿದ್ದರು. ಇದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಬೆದರಿಕೆ ಹಾಕಿರುವ ಕುರಿತು ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.