ರಾಜ್ಯದಲ್ಲಿ ಕೋವಿಡ್ ಮೂರನೇ ಅಲೆಗೆ ಹೆಚ್ಚು ಪುಟ್ಟ ಮಕ್ಕಳು ಬಲಿಯಾಗಿರುವುದು ಬಹಿರಂಗ

JANANUDI.COM NETWORK

ಬೆಂಗಳೂರು,10: ರಾಜ್ಯದಲ್ಲಿ ಕೋವಿಡ್ ಮೂರನೇ ಅಲೆಗೆ ವಯ್ಸ್ಕರಲ್ಲಿ ಹೆಚ್ಚು ಜನ ಸಾವನ್ನಪ್ಪದೆ, ಜನ ಸಾಮಾನ್ಯರಲ್ಲಿ ಆತಂಕ ಕಡಿಮೆಯಾದರೂ, ಇದೀಗ ಆತಂಕಕಾರಿ ಅಂಕಿ-ಅಂಶಗಳು ಬಹಿರಂಗವಾಗಿದೆ.
ರಾಜ್ಯದಲ್ಲಿ ಕೋವಿಡ್ ಮೂರನೇ ಅಲೆಯಲ್ಲಿ ಪುಟ್ಟ ಮಕ್ಕಳು ಹೆಚ್ಚು ಬಲಿಯಾಗಿದ್ದು ಬಹಿರಂಗವಾಗಿದ್ದು ಕಳೆದ 23 ದಿನದಲ್ಲಿ ಬರೋಬ್ಬರಿ 25 ಮಕ್ಕಳು ಕೋವಿಡ್ ಮೂರನೇ ಅಲೆಗೆ ಬಲಿಯಾಗಿದ್ದಾರೆ. ಇದರಲ್ಲಿ, 7 ಮಕ್ಕಳು ಒಂದು ವರ್ಷ ಕ್ಕಿಂತ ಕಡಿಮೆ ಪ್ರಾಯದ ಮಕ್ಕಳು ಎನ್ನುವುದನ್ನು ಅಂಕಿ-ಅಂಶಗಳು ತಿಳಿಸಿದೆ.ರಾಜ್ಯದಲ್ಲಿ 4 ದಿನದ ಹಸುಗೂಸೂ ಸೇರಿದಂತೆ 18 ವರ್ಷದವರೆಗಿನ ಮಕ್ಕಳು ಕೋವಿಡ್ ಗೆ ಬಲಿಯಾಗಿದ್ದಾರೆ. 1 ರಿಂದ 12 ವರ್ಷದವರೆಗಿನ ಅಧಿಕ ಮಕ್ಕಳು ಕೋವಿಡ್ ಗೆ ತುತ್ತಾಗುತ್ತಿದ್ದಾರೆ.
ಹೀಗಾಗಿ ಪೋಷಕರು ತಮ್ಮ ಮಕ್ಕಳ ಬಗ್ಗೆ ಜಾಗ್ರತೆ ವಹಿಸುವುದು ಅಗತ್ಯ ಎದ್ದು ಕಾಣುತ್ತದೆ.