ನೂತನ ಸಚಿವರ ಪಟ್ಟಿ ಸಿದ್ದ; ಕುಂದಾಪುರದವರಿಗೆ 1956 ರಿಂದಲೂ ಸಚಿವ ಸ್ಥಾನ ಮರಿಚೀಕೆ

JANANUDI.COM NETWORK

ಬೆಂಗಳೂರು, ಅ.4: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮ್ಮ ನೂತನ ಸಂಪುಟಕ್ಕೆ ಸೇರ್ಪಡೆಯಾಗಲಿರುವ ಸಚಿವರ ಪಟ್ಟಿಯನ್ನು ಪ್ರಕಟಿಸಿದ್ದಾರೆ. ನೂತನ ಸಚಿವರು ಅಪರಾಹ್ನ 2.15ಕ್ಕೆ ರಾಜಭವನದ ಗಾಜಿನ ಮನೆಯಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ ಸಲವೂ ಕುಂದಾಪುರ ಕ್ಷೇತ್ರಕ್ಕೆ ಮನ್ನಣೆ ಇಲ್ಲ.


[1956 ರಲ್ಲಿ ರಾಜ್ಯ ಸ್ಥಾಪನೆ ಆದನಿಂದಲೂ, ಕುಂದಾಪುರ ಕ್ಷೇತ್ರಕ್ಕೆ ಸಚಿವ ಸ್ಥಾನ ಮರಿಚೀಕೆಯಾಗಿದ್ದುದು, ವಿಪರ್ಯಸವೆ ಸರಿ. ಕುಂದಾಪುರದ ಕ್ಷೇತ್ರ ಎಲ್ಲ ರೀತಿಯಿಂದಲೂ ಸರ್ವ ಸರ್ಕಾರಗಳಿಂದ ಕಡೆಕಾಣಿಸಲಾಗಿದೆ. ಇಲ್ಲಿ ರಾಜ್ಯದ ಅಥವ ಕೇಂದ್ರದ ಯಾವುದೇ
ಯೋಜನೆಗಳು ಕಾಣುತ್ತಿಲ್ಲ, ಸರ್ಕಾರದ ಯಾವ ಪದವಿ ಕಾಲೇಜುಗಳು ಇಲ್ಲ, ಇಂಜಿನಿಯರಿಂಗ್, ವೈದ್ಯಕೀಯ ಅಥವ ಇನ್ನಾವುದೇ ಕಾಲೇಜು, ಕಾರ್ಖಾನೆಗಳಾಗಲಿ, ಜನರ ಏಳಿಗೆಗಾಗಿ ಯಾವುದೇ ಸಂಸ್ಥೆಗಳಾಗಲಿ, ಯೋಜನೆಗಳಿಲ್ಲ. ಕುಂದಾಪುರದ ಅಭಿವ್ರದ್ದಿ ಕುಂದಾಪುರದ ಜನತೆಯಿಂದಲೇ ಆಗಿದೆ ವಿನಹ, ಇದರಲ್ಲಿ ಯಾವುದೇ ಸರ್ಕಾರಗಳ ಪಾತ್ರ ಕಡಿಮೆ ಎಂದೇ ಹೇಳ ಬೇಕಾಗುತ್ತದೆ]


ಇವತ್ತು ಬೆಳಿಗ್ಗೆ ನೂತನ ಸಚಿವರ ಪಟ್ಟಿ ಅಂತಿಮವಾಗಿದ್ದು, ಇಂದು 29 ಮಂದಿ ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ, ಉಪ ಮುಖ್ಯಮಂತ್ರಿ ಹುದ್ದೆ ಇರುವುದಿಲ್ಲ ಎಂದು ಹೈಕಮಾಂಡ್ ತೀರ್ಮಾನಿಸಿದೆ. ರಾಜ್ಯದ ಏಳಿಗೆ, ಪ್ರದೇಶವಾರು, ಜಾತೀಯವಾರು ಸಮಾನತೆ ನೋಡಿಕೊಂಡು ಹಾಗೂ ಮುಂಬರುವ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಹೈಕಮಾಂಡ್ ಸಚಿವರ ಪಟ್ಟಿಯನ್ನು ಅಂತಿಮಗೊಳಿಸಿದೆ ಎಂದರು.
ಇಂದು ಸುದ್ದಿಗೋಷ್ಠಿಯಲ್ಲಿ ಸಿಎಂ ಹೇಳಿದ್ದು: ನನ್ನ ನೂತನ ಮಂತ್ರಿ ಮಂಡಲ ವಿಸ್ತರಣೆಗೆ ದೆಹಲಿಗೆ ಹೋಗಿ ವರಿಷ್ಠರ ಜೊತೆ ಚರ್ಚೆ ನಡೆಸಿ ನಿನ್ನೆ ರಾತ್ರಿ ಅಂತಿಮ ಸುತ್ತಿನ ಮಾತುಕತೆಯಾಗಿ ಇಂದು ಬೆಳಗ್ಗೆ ಪಟ್ಟಿ ಅಂತಿಮವಾಯಿತು. ರಾಜ್ಯಪಾಲರ ಜೊತೆ ಮಾತನಾಡಿ ನೂತನ ಸಚಿವರ ಪಟ್ಟಿ ಕಳುಹಿಸಿದ್ದೇನೆ ಎಂದರು.
29 ಸಚಿವರು ಪ್ರಮಾಣವಚನ: ಇಂದು ಒಟ್ಟು 29 ಸಚಿವರು ಪ್ರಮಾಣ ವಚನ ತೆಗೆದುಕೊಳ್ಳುತ್ತಾರೆ, ಈ ಬಾರಿ ಉಪ ಮುಖ್ಯಮಂತ್ರಿ ಹುದ್ದೆ ಇರುವುದಿಲ್ಲ ಎಂದು ಹೈಕಮಾಂಡ್ ಸೂಚನೆ ನೀಡಿದೆ. ಮಂತ್ರಿ ಮಂಡಲದಲ್ಲಿ ಶಾಸಕರ ಅನುಭವ ಮತ್ತು ಹೊಸ ಶಕ್ತಿಯ ಸಮ್ಮಿಶ್ರಣದ ಸಚಿವ ಸಂಪುಟದಲ್ಲಿರುತ್ತದೆ ಎಂದರು.
ಈ ಬಾರಿ ಸಂಪುಟದಲ್ಲಿ 7 ಮಂದಿ ಒಬಿಸಿ, ಮೂರು ಮಂದಿ ಎಸ್ಸಿ, ಒಬ್ಬ ಎಸ್ ಟಿ ಶಾಸಕರಿಗೆ ಮಂತ್ರಿ ಸ್ಥಾನ ನೀಡಲಾಗುತ್ತಿದೆ. 7 ಮಂದಿ ಒಕ್ಕಲಿಗರು, 8 ಮಂದಿ ಲಿಂಗಾಯತರು, ಒಬ್ಬ ಮಹಿಳೆ, ಒಬ್ಬ ರೆಡ್ಡಿ ಸಮುದಾಯದವರು ಇರುತ್ತಾರೆ.
ಇಂದು ಮಧ್ಯಾಹ್ನ 2.15ಕ್ಕೆ ರಾಜಭವನದಲ್ಲಿ ನೂತನ ಸಚಿವರ ಪದಗ್ರಹಣ ನಡೆಯಲಿದೆ.

ಸಿಎಂ ನೇರವಾಗಿ ಕರೆ ಮಾಡಿ ಪ್ರಮಾಣ ವಚನಕ್ಕೆ ಆಹ್ವಾನ ನೀಡಿರುವ ಶಾಸಕರ ಪಟ್ಟಿ


1.ಕೆ.ಎಸ್.ಈಶ್ವರಪ್ಪ –ಶಿವಮೊಗ್ಗ 2.ಆರ್.ಅಶೋಕ್- ಪದ್ಮನಾಭ ನಗರ 3.ಅರವಿಂದ ಲಿಂಬಾವಳಿ- ಮಹದೇವಪುರ 4.ಡಾ.ಸಿ.ಎನ್.ಅಶ್ವತ್ಥ ನಾರಾಯಣ – ಮಲ್ಲೇಶ್ವರ 5.ಬಿ.ಶ್ರೀ ರಾಮುಲು- ಮೊಳಕಾಲುಮ್ಮೂರು6.ಉಮೇಶ್ ಕತ್ತಿ- ಹುಕ್ಕೇರಿ
7.ಎಸ್.ಟಿ.ಸೋಮಶೇಖರ್- ಯಶವಂತಪುರ 8.ಡಾ.ಕೆ.ಸುಧಾಕರ್ – ಚಿಕ್ಕಬಳ್ಳಾಪುರ 9.ಬೈರತಿ ಬಸವರಾಜ – ಕೆ ಆರ್ ಪುರಂ, 10.ಮುರುಗೇಶ್ ನಿರಾಣಿ – ಬಿಳಿಗಿ 11.ಶಿವರಾಂ ಹೆಬ್ಬಾರ್- ಯಲ್ಲಾಪುರ 12.ಶಶಿಕಲಾ ಜೊಲ್ಲೆ- ನಿಪ್ಪಾಣಿ 13.ಕೆಸಿ ನಾರಾಯಣ್ ಗೌಡ – ಕೆಆರ್ ಪೇಟೆ 14.ಸುನೀಲ್ ಕುಮಾರ್ – ಕಾರ್ಕಳ 15.ಅರಗ ಜ್ಞಾನೇಂದ್ರ – ತೀರ್ಥ ಹಳ್ಳಿ 16.ಗೋವಿಂದ ಕಾರಜೋಳ-ಮುಧೋಳ 17.ಮುನಿರತ್ನ- ಆರ್ ಆರ್ ನಗರ 18.ಎಂ.ಟಿ.ಬಿ ನಾಗರಾಜ್ – ಎಂ ಎಲ್ ಸಿ 19.ಗೋಪಾಲಯ್ಯ- ಮಹಾಲಕ್ಷ್ಮಿ ಲೇಔಟ್ 20.ಮಾಧುಸ್ವಾಮಿ- ಚಿಕ್ಕನಾಯಕನಹಳ್ಳಿ 21.ಹಾಲಪ್ಪ ಆಚಾರ್ – ಯಲ್ಬುರ್ಗ 22.ಶಂಕರ್ ಪಾಟೀಲ್ ಮುನೇನಕೊಪ್ಪ – ನವಲುಗುಂದ 23.ಕೋಟಾ ಶ್ರೀನಿವಾಸ ಪೂಜಾರಿ – ಎಂ ಎಲ್ ಸಿ 24.ಪ್ರಭು ಚೌವ್ಹಾಣ್ – ಔರಾದ್ 25.ವಿ ಸೋಮಣ್ಣ – ಗೋವಿಂದ್ ರಾಜನಗರ 26 ಎಸ್ ಅಂಗಾರ-ಸುಳ್ಯ 27 ಆನಂದ್ ಸಿಂಗ್ – ಹೊಸಪೇಟೆ 28.ಸಿ ಸಿ ಪಾಟೀಲ್ – ನರಗುಂದ, 29.ಬಿ.ಸಿ. ನಾಗೇಶ್ – ತಿಪಟೂರ


ಸಚಿವ ಸ್ಥಾನ ಕೈ ತಪ್ಪಿದವರು


ಆರ್ ಶಂಕರ್, ಸಿಪಿ ಯೋಗೇಶ್ವರ್, ಅರವಿಂದ್ ಲಿಂಬಾವಳಿ, ಶ್ರೀಮಂತ ಪಾಟೀಲ್, ಸುರೇಶ್ ಕುಮಾರ್, ಜಗದೀಶ್ ಶೆಟ್ಟರ್ ಮತ್ತು ಲಕ್ಷಣಸವದಿ