ಅನುಪಮಾ ಪ್ರಸಾದ್, ಕಾಸರಗೊಡು ಅವರ ‘ಪಕ್ಕಿಹಳ್ಳದ ಹಾದಿಗುಂಟ’ ಕಾದಂಬರಿಗೆ ಡಾ.ಹೆಚ್.ಶಾಂತಾರಾಮ್ ಸಾಹಿತ್ಯ ಪ್ರಶಸ್ತಿ

JANANUDI.COM NETWORK

ಕುಂದಾಪುರ: ಈ ವರ್ಷದ ಡಾ.ಹೆಚ್.ಶಾಂತಾರಾಮ್ ಸಾಹಿತ್ಯ ಪ್ರಶಸ್ತಿಯು 2019ರಲ್ಲಿ ಮೊದಲ ಆವೃತ್ತಿಯಾಗಿ ಬಂದ ಅನುಪಮಾ ಪ್ರಸಾದ್ ಕಾಸರಗೊಡು ಅವರ ‘ಪಕ್ಕಿಹಳ್ಳದ ಹಾದಿಗುಂಟ’ಕಾದಂಬರಿಗೆ ದೊರಕಿದೆ.
ಕನ್ನಡ ಸಾಹಿತ್ಯ ಲೋಕದಲ್ಲಿ ಈಗಾಗಲೇ ತಮ್ಮ ಕತೆಗಳ ಮೂಲಕ ಪ್ರಸಿದ್ಧರಾಗುರುವ ಅನುಪಮಾ ಪ್ರಸಾದ್ ಅವರ ಚೊಚ್ಚಲ ಕಾದಂಬರಿ ಇದಾಗಿದೆ.
ಕನ್ನಡದ ಪ್ರಮುಖ ಲೇಖಕರಾದ ಓ.ಎಲ್.ನಾಗಭೂಷಣ ಸ್ವಾಮಿ, ದೇವು ಪತ್ತಾರ್, ಮತ್ತು ನರೇಂದ್ರ ರೈ ದೇರ್ಲರವರು ನಿರ್ನಾಯಕರಾಗಿ ಸಹಕರಿಸಿರುತ್ತಾರೆ. ಪ್ರಶಸ್ತಿಯು ಹದಿನೈದು ಸಾವಿರ ರೂಪಾಯಿ ನಗದಿನೊಂದಿಗೆ ಪ್ರಶಸ್ತಿ ಫಲಕವನ್ನೊಳಗೊಂಡಿರುತ್ತದೆ.

ಲೇಖಕಕಿಯ ಪರಿಚಯ

ಮೂಲತಃಉತ್ತರ ಕನ್ನಡಜಿಲ್ಲೆಯವರಾದ ಅನುಪಮಾ ಪ್ರಸಾದ್ ಬಾಲ್ಯದಲ್ಲಿಯೇ ದಕ್ಷಿಣಕನ್ನಡದ ಉಜಿರೆಗೆ ಬಂದು ಅಲ್ಲಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವಿದ್ಯಾಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮುಗಿಸಿ, ಗಡಿನಾಡು ಕಾಸರಗೋಡಿನಲ್ಲಿ ತಮ್ಮ ವೈದ್ಯ ವೃತ್ತಿಯ ಪತಿಯೊಂದಿಗೆ ನೆಲೆಸಿದ್ದಾರೆ.
ಅನುಪಮಾ ಅವರು ತಮ್ಮ ಸಾಹಿತ್ಯಕೃಷಿಯನ್ನು ಕಥಾರಚನೆಯ ಮೂಲಕ ಆರಂಭಿಸಿದರು. ಕನ್ನಡದ ದಿನಪತ್ರಿಕೆಗಳಾದ ಪ್ರಜಾವಾಣಿ, ವಿಜಯವಾಣಿ ಇವರ ಕಥೆಗಳು ಪ್ರಕಟವಾಗಿವೆ. ಚೇತನಾ, ಕರವೀರದ ಗಿಡ, ದೂರತೀರ, ಜೋಗತಿ ಜೋಳಿಗೆ ಇವರಕಥಾ ಸಂಕಲನಗಳಾಗಿವೆ. ಎಮ್ ವ್ಯಾಸರ ಕುರಿತಾದ ನಿರೂಪಣಾಕೃತಿ“ಅರ್ಧಕಥಾನಕ” ಇವರ ಕೃತಿಗಳಲ್ಲಿ ಒಂದಾಗಿದೆ.ಇವರ ಕಿರುನಾಟಕಗಳು, ಬಿಡಿ ಕವಿತೆಗಳು ಮತ್ತು ಹಲವಾರು ಲೇಖನಗಳು ಪ್ರಕಟಗೊಂಡಿವೆ. ಪಕ್ಕಿಹಳ್ಳದ ಹಾದಿಗುಂಟ ಇವರ ಮೊದಲ ಕಾದಂಬರಿಯಾಗಿದೆ.
ಇವರ ಸಾಹಿತ್ಯ ಕೃಷಿಗೆ ಸಾಕಷ್ಟು ಪ್ರಶಸ್ತಿ ಪುರಸ್ಕಾರಗಳು ಬಂದಿವೆ. ಇವರ ಅತ್ಯತ್ತಮ ಕಥಾಸಂಕಲನ ಜೋಗತಿ ಜೋಳಿಗೆ ಕೃತಿಗೆ 2015ನೇ ಸಾಲಿನ ಕರ್ನಾಟಕ ಸಾಹಿತ್ಯಅಕಾಡೆಮಿ ಪುಸ್ತಕ ಬಹುಮಾನ, ಕರಾವಳಿ ಲೇಕಕಿಯರ ಸಂಘದ ‘ಸಾರಾಅಬೂಬಕರ್’ ಪ್ರಶಸ್ತಿ ಮತ್ತುಅಡ್ವೈಸರ್ ಪ್ರಶಸ್ತಿ ಸಂದಿದೆ.
ದೂರತೀರ ಕೃತಿಗೆ 2012ನೇ ಬೆಸಗದ ಹಳ್ಳಿ ರಾಮಣ್ಣಕಥಾ ಪ್ರಶಸ್ತಿ, ಮಾಸ್ತಿ ಕಥಾ ಪ್ರಶಸ್ತಿ, ‘ವಸುದೈವ ಭೂಪಾಲಂ’ಕಥಾ ಪ್ರಶಸ್ತಿ, ಕರ್ನಾಟಕಲೇಖಕಿಯರ ಸಂಘದದತ್ತಿ‘ತ್ರಿವೇಣಿ’ ಪುರಸ್ಕಾರದೊರೆತಿದೆ. ಕರವೀರದಗಿಡ ಕೃತಿಗೆ 2010ನೇ ಸಾಲಿನ ಬೇಂದ್ರೆಗ್ರಂಥ ಬಹುಮಾನ ಬಂದಿದೆ.
ಮುಂಬೆಳಕು ಕಥಾ ಪುರಸ್ಕಾರ, ಅತ್ತಿ ಮಬ್ಬೆ ಕಥಾ ಪುರಸ್ಕಾರ, ಅರ್ಧಕಥಾನಕ ಕೃತಿಗೆ ಕರ್ನಾಟಕ ಲೇಖಕಿಯರ ಸಂಘದ ‘ನೀಳಾದೇವಿ’ ಪ್ರಶಸ್ತಿ, ಕನ್ನಡದ ದಿನಪತ್ರಿಕೆಗಳಾದ ಪ್ರಜಾವಾಣಿ, ವಿಜಯವಾಣ ದೀಪಾವಳಿ ಕಥಾ ಸ್ಪರ್ಧೆಗಳ ಬಹುಮಾನಗಳು, ತಿಂಗಳು, ತುಷಾರ, ತರಂಗ ಕಥಾಸ್ಪರ್ಧೆಗಳ ಬಹುಮಾನಗಳು ಸಂದಿವೆ.