ಸರ್ಕಾರಿ ಕೆಲಸ ದೇವರ ಕೆಲಸ ಎಂಬ ಭಾವನೆಯೊಂದಿಗೆ ನಾನು ಕಳೆದ 31 ವರ್ಷಗಳ ಕಾಲ ನಿರ್ವಹಿಸಿದ್ದೇನೆ. ಕೃಷ್ಣಮೂರ್ತಿ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದರು.

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ರಾಯಲ್ಪಾಡು : ಸರ್ಕಾರಿ ಕೆಲಸ ದೇವರ ಕೆಲಸ ಎಂಬ ಭಾವನೆಯೊಂದಿಗೆ ನಾನು ಕಳೆದ 31 ವರ್ಷಗಳ ಕಾಲ ನಿರ್ವಹಿಸಿದ್ದೇನೆ. ನನಗೆ ಕೆಲಸ ಸಮಯದಲ್ಲಿ ಸಹಕರಿಸಿದ ಎಲ್ಲಾ ಹಿರಿಯ ಅಧಿಕಾರಿಗಳಿಗೆ ಹಾಗು ಸಹುದ್ಯೋಗಿ ಮಿತ್ರರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಕೃಷ್ಣಮೂರ್ತಿ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದರು.
ರಾಯಲ್ಪಾಡಿನ ಪೋಸ್ಟ್ ಆಫೀಸ್‍ನ ಕೃಷ್ಣಮೂರ್ತಿಯವರು ಎಬಿಪಿಎಂ ಆಗಿ 31ವರ್ಷ ಕಾರ್ಯನಿರ್ವಹಿಸಿರುವ ನಿವೃತ್ತರಾಗಿರುವ ಹಿನ್ನೆಲೆಯಲ್ಲಿ ಇಲಾಖೆವತಿಯಿಂದ ಹಾಗು ಗ್ರಾಮದ ಮುಖಂಡರು ಸನ್ಮಾನಿಸಿದರು.
ಅಧೀಕ್ಷಕರಾದ ಅವದೇಶ್‍ಸಿಂಗ್,ಮೆಲ್ವರಿಸಿಗಳಾದ ರಘುನಾಥ್,ಕೃಷ್ಣಪ್ಪ ಹಾಗು ಪೋಸ್ಟ್‍ಮಾಸ್ಟರ್ ಎಂ.ಕರುಣಾಕರ ಹಾಗು ಗ್ರಾ.ಪಂ. ಸದಸ್ಯರಾದ ಆರ್.ಗಂಗಾದರ್,ಅಶೋಕ್,ನಾಗೇಶ್,ಗ್ರಾಮದ ಮುಖಂಡರಾದ ಮದನಮೋಹನರೆಡ್ಡಿ,ಬ್ರಹ್ಮಯ್ಯ,ದೇವರಾಜ್, ವೆಂಕಟೇಶ್,ಸತೀಶ್, ಮಂಜುನಾಥರೆಡ್ಡಿ ಸುರೇಶ್ ಇದ್ದರು