*ಜನಾಗ್ರಹ* ಬಿಜಿಪಿ ವಿರೋಧಿಸುವ ಪಕ್ಷಗಳಿಂದ ಕುಂದಾಪುರದಲ್ಲಿ ಶಾಸಕರ ಕಛೇರಿ ಎದುರು ಪ್ರತಿಭಟನೆ

JANANUDI.COM NETWORK

ಕುಂದಾಪುರ, ಜೂ, 22:  ಕೋವಿಡ್ ಮಹಾಮಾರಿಯನ್ನು ನಿಯಂತ್ರಿಸುವಲ್ಲಿ ಸಂಪೂರ್ಣವಾಗಿ ವಿಫಲತೆ ಕಂಡು ಇದೀಗ ಲಸಿಕೆ ಒದಗಿಸುವುದರಲ್ಲಿಯೂ ಕೇಂದ್ರ ಮತ್ತು ರಾಜ್ಯ ಸರ್ಕಾರ ವಿಫಲವಾಗಿದಕ್ಕೆ ಈ ವರ್ಗದ ಜನರಿಗೆ ಮಾಡಿದ ವಂಚನೆಯಾಗಿರುತ್ತದೆ. ಸರ್ಕಾರದ ಈ ಎಲ್ಲ ವೈಫಲ್ಯತೆಯನ್ನು ಖಂಡಿಸಿ ಸಮಾನ ಮನಸ್ಕ ಜಾತ್ಯಾತೀತ ಪಕ್ಷಗಳಾದ ಕಮ್ಯುನಿಸ್ಟ್ ಪಾರ್ಟಿ (ಸಿ.ಪಿ.ಎಂ), ಜಾತ್ಯಾತೀತ ಜನತಾ ದಳ, ವಿವಿಧ ಪ್ರಗತಿಪರ ಸಂಘಟನೆಗಳು ಮತ್ತು ಸಾರ್ವಜನಿಕರ ಸಹಯೋಗದೊಂದಿಗೆ ಇಂದು ಬೆಳಿಗ್ಗೆ, ಕುಂದಾಪುರ ಶಾಸಕರ ಕಚೇರಿಯ (ತಾಲೂಕು ಪಂಚಾಯತ್ ಕಛೇರಿ ,ಶಾಸ್ತ್ರಿ ಸರ್ಕಲ್‌ ಬಳಿ ) ಮುಂದೆ ಪ್ರತಿಭಟಿಸಿ ಅವ್ಯವ್ಯಸ್ಥೆಯನ್ನು ಸರಿಪಡಿಸುವಂತೆ ಭಾರತೀಯ ಕಾಂಗ್ರೆಸ್ ಪಕ್ಷ, ಜನತಾದಳ, ಕಮ್ಯುನಿಷ್ಟ್ ಪಕ್ಶ, ಮತ್ತು ಬಿಜಿಪಿ ವಿರೋಧಿಸುವ ಪಕ್ಷಗಳಿಂದ  ಕುಂದಾಪುರದಲ್ಲಿ ಶಾಸಕರ ಕಛೇರಿ ಎದುರು ಪ್ರತಿಭಟನೆ ನಡೆಯಿತು.

   ಲಸಿಕಾ ಕೇಂದ್ರದಲ್ಲಿಯೂ ರಾಜಕೀಯ ಮೇಳೈಸುತ್ತಿದ್ದು ತಾರತಮ್ಯತೆ ಧೋರಣೆಯನ್ನು ಅನುಸರಿಸಲಾಗುತ್ತಿರುವುದರ ಬಗ್ಗೆ ಸಾರ್ವಜನಿಕರಿಂದ ದೂರುಗಳು ಕೇಳಿ ಬರುತ್ತಿವೆ. ಎಲ್ಲಾ ವಯೋ ವರ್ಗದವರಿಗೂ ಲಸಿಕೆ ನೀಡುವುದಾಗಿ ಭರವಸೆ ನೀಡಿರುವ ಸರ್ಕಾರ 45 ವರ್ಷಕ್ಕಿಂತ ಮೇಲ್ಪಟ್ಟವರಿಗೆ ನೀಡಬೇಕಾದ ಮೊದಲ ಡೋಸನ್ನೇ ಇನ್ನೂ ಕೂಡ ನೀಡುವಲ್ಲಿ ಅಸಮರ್ಥವಾಗಿದೆ. ಎಂದು  ರಾಜ್ಯ ಸರ್ಕಾರವು ಲಾಕ್ದೌನ್ ನಿಂದ ಸಂತ್ರಸ್ತರಾದ ಕಾರ್ಮಿಕ, ಶ್ರಮಿಕ ವರ್ಗದವರಿಗೆಂದು ಘೋಷಿಸಿರುವ ಪ್ಯಾಕೆಜ್ ಪಡೆಯಲು ವಿಧಿಸಲಾಗಿರುವ ಕಠಿಣ ಷರತ್ತುಗಳು ಮತ್ತು ನಿಯಮಗಳಿಂದಾಗಿ ಅರ್ಹರ ಕೈಸೇರದೆ ಘೋಷಿತ ಪ್ಯಾಕೇಜ್ “ಊಟಕ್ಕಿಲ್ಲದ ಉಪ್ಪಿನ ಕಾಯಿಯಂತಾಗಿದೆ” ಎಂದು ಪ್ರತಿಭಟನೆಯಲ್ಲಿ ಆಕ್ರೋಷ ವ್ಯಕ್ತಪಡಿಸಲಾಯಿತು.

      ಮೊದಲು ಲಾಖ್ ಡೌನ್ ಮಾಡಿದಾಗ ಘೋಶಿಸಿದ ಪರಿಹಾರವೇ ಕಾರ್ಮಿಕರಿಗೆ, ವಾಹನ ಚಾಲಕರಿಗೆ, ಶ್ರಮಿಕರಿಗೆ ದೊರಕಿಲ್ಲ, ಇನ್ನೂ ಈ ಲಾಖ್ ಡೌನಲ್ಲಿ ಬಡವರು ಉಣ್ಣುವುದಾದರೂ ಹೇಗೆ ಎಂದು ಕೇಂದ್ರ ಸರಕಾರಕ್ಕೆ ತರಾಟೆ ತೆಗೆದುಕೊಂಡರು.

  ಪ್ಯಾಕೇಜ್ ನಿಂದ ಕೈಬಿಡಲಾಗಿದ್ದ ಇತರ ಹಲವು ಶ್ರಮಿಕ ವರ್ಗ ಮತ್ತು ಕುಲ ಕಸುಬಾಧಾರಿತ ವೃತ್ತಿ ಬಾಂಧವರಿಗೆ ಪ್ಯಾಕೇಜ್ ನೀಡುವಂತೆ ಈಗಾಗಲೇ ನಾವು ಆಗ್ರಹಿಸಿದ್ದರೂ ಯಾವುದೇ ಪ್ರತಿಕ್ರಿಯೆ ನೀಡದೆ ಕಡೆಗಣಿಸಿರುವುದು ಆಗ್ರಹಿಸಲಾಗುವುದು.

    ಆ ಪ್ರಯುಕ್ತ, ವಿವಿಧ ರಾಜಕೀಯ ಪಕ್ಷಗಳ ನಾಯಕರು ಮತ್ತು ಕಾರ್ಯಕರ್ತರು, ಸಾರ್ವಜನಿಕರು ಹಾಗೂ ಕಾಂಗ್ರೆಸ್ ಪಕ್ಷದ ರಾಜ್ಯ, ಜಿಲ್ಲಾ ಮತ್ತು ಬ್ಲಾಕ್ ಮಟ್ಟದ ಪದಾಧಿಕಾರಿಗಳು ಮತ್ತು ಮುಖಂಡರು,ಮಹಿಳಾ ಕಾಂಗ್ರೆಸ್, ಯುವ ಕಾಂಗ್ರೆಸ್, ಸೇವಾದಳ, ಎನ್.ಎಸ್. ಯೂ. ಐ, ಕಿಸಾನ್ ಕಾಂಗ್ರೆಸ್, ಅಲ್ಪಸಂಖ್ಯಾತರ ಘಟಕ, ಹಿಂದುಳಿದ ವರ್ಗಗಳ ಘಟಕ, ಎಸ್.ಸಿ.ಎಸ್. ಟಿ ಘಟಕ, ಕಾನೂನು ಘಟಕ ಮತ್ತು ಎಲ್ಲ ಗ್ರಾಮೀಣ ಕಾಂಗ್ರೆಸ್ ಸಮಿತಿ,ಬೂತ್ ಸಮಿತಿ ಅಧ್ಯಕ್ಷರು, ಪದಾಧಿಕಾರಿಗಳು, ಎಲ್ಲಾ ಸ್ತರದ ಸ್ಥಳೀಯಾಡಳಿತ ಸಂಸ್ಥೆಗಳ ಹಾಲಿ ಹಾಗೂ ಮಾಜಿ ಸದಸ್ಯರು, ಮತ್ತು ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು.

    ಕಾಂಗ್ರೆಸ್ ಪಕ್ಷದ ಮುಖಂಡರಾದ ಮಲ್ಯಾಡಿ ಶಿವರಾಮ ಶೆಟ್ಟಿ,  ವಿನೋದ್ ಕ್ರಾಸ್ಟೊ, ದೇವಕಿ ಸಣ್ಣಯ್ಯ, .ರೋಶಿನಿ ಒಲಿವೆರಾ ಆರ್ಪಿಜಿಎಸ್ ಡಿಸ್ಟ್ರಿಕ್ಟ್ ಪ್ರೆಸಿಡೆಂಟ್. ಗಣೇಶ್ ಶೆರಿಗಾ ರ್ ಪಟ್ಟಣದ ಅಧ್ಯಕ್ಷರು, ಚಂದ್ರಶೇಖರ್ ಖಾರ್ವಿ ಕೌನ್ಸಿಲರ್, ಅಬ್ಬು ಮೊಹಮ್ಮದ್ ಕೌನ್ಸಿಲರ್, ಕುಮಾರ್ ಖಾರ್ವಿ ಅಧ್ಯಕ್ಷ ಸೇವಾದಳ, ಅಶ್ಪಕ್ ಕೋಡಿ ಕೌನ್ಸಿಲರ್, ಚಂದ್ರ ಅಮೀನ್ ಅಧ್ಯಕ್ಷ ಐಎನ್‌ಟಿಯುಸಿ, ರೋಶನ್ ಶೆಟ್ಟಿ ಅಧ್ಯಕ್ಷ ಜಿಲ್ಲಾ ಸಾಮಾಜಿಕ ಮಾಧ್ಯಮ ಕಾಂಗ್ರೆಸ್, ಆಶಾ ಕಾರ್ವಾಲ್ಹೋ ಶೋಭಾ ಸಚಿದಂದ, ಅಶ್ವತ್ ಕುಮಾರ್ , ಅರುಣ್ ಪಟೇಲ್, .ಗಂಗಾದರ್ ಶೆಟ್ಟಿ ಹೆರಿಕುಡ್ರು,  ಅಶೋಕ್ ಸುವರ್ಣ, ಅಶೋಕ್ ಸುವರ್ಣ, ಶಶಿ ಕುಮಾರ್, ಅಭಿ ಹೆರಿಕುದ್ರು, ಪ್ರಭಾಕರ್ ಕಡ್ಗಿಮನೆ, ಸುರೇಶ್ .ಕೆ, ಅಬ್ದುಲ್ಲಾ ಕೋಡಿ, ಡೋಲ್ಫಿ ಡಿಕೋಸ್ತಾ ಮುಂತಾದವರು ಉಪಸ್ಥಿತರಿದ್ದರು. ಹಾಗೇ ಜನತಾದಳದ ಜಿಲ್ಲಾ ಅಧ್ಯಕ್ಷ ಮಾನ್ಸೂರ್, ಮುಸ್ಲಿಂ ಒಕ್ಕೂಟದ ಅಧ್ಯಕ್ಷ ರಫಿಕ್ ಕೋಡಿ, ಕುಂದಾಪುರ ಪತ್ರಕರ್ತ ಸಂಘದ ಅಧ್ಯಕ್ಷ  ಶಶಿಧರ್ ಹೆಮ್ಮಾಡಿ, ಕಮ್ಯುನಿಷ್ಟ್ ಪಕ್ಷದ ಗಣೇಶ್ ಮೆಂಡನ್ ಮುತಾಂದವರು ಪ್ರತಿಭಟನೆಯಲ್ಲಿ ಭಾಗಿಯಾಗಿ ಮಾತನಾಡಿದರು.