ಜಗತ್ತಿನಾದ್ಯಂತ ರಕ್ತ ದಾನಿಗಳ ದಿನಾಚರಣೆ. ಕುಂದಾಪುರ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯಿಂದಲೂ ಅಚರಣೆ

JANANUDI.COM NETWORK

ಕುಂದಾಪುರ, ಜೂ.15:ಈ ದಿನ 14-06-2021 ಜಗತ್ತಿನಾದ್ಯಂತ ರಕ್ತ ದಾನಿಗಳ ದಿನಾಚರಣೆ. ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕುಂದಾಪುರ, ತನ್ನ ರಕ್ತ ನಿಧಿ ಕೇಂದ್ರ ದಲ್ಲಿ ಆಚರಿಸಿತು.
ಈ ಸಂದರ್ಭದಲ್ಲಿ ಖ್ಯಾತ ವಕೀಲರಾದ ರಾಘವೇಂದ್ರ ಚರಣ ನಾವುಡಾ ಇವರು 80ನೇ ಸಲ ರಕ್ತದಾನ ಮಾಡಿದರು. ಹಾಗೇ ಒಟ್ಟು 20 ಜನರು ರಕ್ತದಾನ ಮಾಡಿದರು.

ಸಮಾರಂಭದಲ್ಲಿ ಸಭಾಪತಿ ಶ್ರೀ ಜಯಕರ ಶೆಟ್ಟಿ, ಕಾರ್ಯದರ್ಶಿ ವೈ. ಸೀತಾರಾಮ ಶೆಟ್ಟಿ, ಖಜಾಂಚಿ ಶಿವರಾಮ ಶೆಟ್ಟಿ, ಡಾ. ಸೋನಿ ಮತ್ತು ಗಣೇಶ್ ಆಚಾರ್ಯ ಉಪಸ್ಥಿತರಿದ್ದರು.