ನಟ ಸಂಚಾರಿ ವಿಜಯ್​ ತಮ್ಮ ಇಹ ಸಂಚಾರವನ್ನು ನಿಲ್ಲಿಸಿ ಪರ ಲೋಕದ ಸಂಚಾರ ಕೈಗೊಂಡರು.

JANANUDI.COM NETWORK

ಬೆಂಗಳೂರು. ಜೂ.14: ರಸ್ತೆ ಅಪಘಾತದಿಂದಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸ್ಯಾಂಡಲ್​ವುಡ್​ನ ಪ್ರತಿಭಾನ್ವಿತ ನಟ ಸಂಚಾರಿ ವಿಜಯ್  ತಮ್ಮ ಇಹ ಸಂಚಾರವನ್ನು ನಿಲ್ಲಿಸಿ ಪರ ಲೋಕದ ಸಂಚಾರ ಕೈಗೊಂಡರು.

    ಅವರು ಶನಿವಾರ ರಾತ್ರಿ ನಡೆದ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಸಂಚಾರಿ ವಿಜಯ್​ ಮೆದುಳಿನ ಎಡ ಹಾಗೂ ಬಲ ಭಾಗಕ್ಕೆ ಪೆಟ್ಟಾಗಿತ್ತು. ಶಸ್ತ್ರ ಚಿಕಿತ್ಸೆ ಮಾಡಿದರೂ ಚಿಕಿತ್ಸೆ ಫಲಿಸದೆ ವಿಜಯ್​ ಸಾವನ್ನಪ್ಪಿದ್ದಾರೆ.   ಅಪಘಾತದಲ್ಲಿ ಮೆದುಳಿನ  ಎಡ ಹಾಗೂ ಬಲ ಭಾಗಕ್ಕೆ ತೀವ್ರವಾಗಿ ಪೆಟ್ಟಾಗಿದ್ದು, ಬೆಳಗ್ಗೆ 4.30ಗೆ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಜೊತೆಗೆ  ಅವರಿಗೆ  ಅಗತ್ಯ ಚಿಕಿತ್ಸೆ ನೀಡಿದ್ದರೂ ಸಹ ಅವರು ಸ್ಪಂದಿಸುತ್ತಿರಲಿಲ್ಲ. ಆದರೆ ದೇಹದಲ್ಲಿ ಇತರೆ ಚಟುವಟಿಕೆಗಳು ನಡೆಯುತ್ತಿತ್ತು. ಮೆದುಳು ನಿಷ್ಕ್ರಿಯವಾಗಿತ್ತು ಎಂದಿದ್ದ ವೈದ್ಯರು  ಕುಟುಂಬ ಮೂಲದವರು, ವಿಜಯ್ ಅವರ ಅಂಗಾಂಗ ದಾನ ನೀಡಲು ನಿರ್ದರಿಸಿದ್ದರು.  

      ಅವರ ಅಗಲಿಕ್ಗೆ  ರಾಜಕೀಯ ನಾಯಕರು ಹಾಗೂ ಸಿನಿಮ ರಂಗದ ಸೆಲೆಬ್ರಿಟಿಗಳು ಕಂಬನಿ ಮಿಡಿದಿದ್ದಾರೆ.