ಧರ್ಮಸ್ಥಳ ಸೇವಾ ಸಹಕಾರಿ ಬ್ಯಾಂಕ್ ಮುಖ್ಯ ನಿರ್ವಹಣ ಅಧಿಕಾರಿ ರವೀಂದ್ರನ್ ಡಿ ನಿಧನ – ನೇಣು ಬಿಗಿದ ಸ್ಥಿಯಲ್ಲಿ ಪತ್ತೆ

JANANUDI.COM NETWORK

ಧರ್ಮಸ್ಥಳ, ಮೇ. 3; ಧರ್ಮಸ್ಥಳ ಸೇವಾ ಸಹಕಾರಿ ಬ್ಯಾಂಕ್ ಮುಖ್ಯ ನಿರ್ವಹಣ ಅಧಿಕಾರಿ ರವೀಂದ್ರನ್ ಡಿ (57) ಇವರು ಮೇ 3 ರಂದು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇವರು ಇಂದು ಸೋಮವಾರ ಬೆಳಿಗ್ಗೆ 7.30 ಕ್ಕೆ ಕಚೇರಿಗೆ ಬಂದು ತಮ್ಮ ಹಾಜರಿಯನ್ನು ನಮೂದಿಸಿ, ಆದರೆ ಇಂದು ಮದ್ಯಾನ್ಹ ಸಂಘದ ಅಟಲ್ ಜಿ ಸಭಾಭವನದಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಅವರ ಮ್ರತ ಶರೀರ ಪತ್ತೆಯಾಗಿದೆ.
ಮ್ರತರು ಪತ್ನಿ ಮತ್ತು ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ. ಘಟನಾ ಸ್ಥಳಕ್ಕೆ ಮಾಜಿ ಶಾಸಕ ವಸಂತ ಬಂಗೇರಾ ಭೇಟಿ ನಿಡಿದ್ದು,ಅವರು ಸಮಗ್ರ ತನಿಕೆಗೆ ಆಗ್ರಹಿಸಿದ್ದಾರೆ