ಉಡುಪಿಯಲ್ಲಿ ಕೊಂಕಣಿ ಕವನ ಮತ್ತು ಲೇಖನಗಳ ಪುಸ್ತಕ ಬಿಡುಗಡೆ

JANANUDI.COM NETWORK


ಉಡುಪಿ, ಮಾ.3: ಜಿಲ್ಲಾ ಕೊಂಕಣಿ ಸಾಹಿತ್ಯ, ಕಲಾ ಮತ್ತು ಸಾಂಸ್ಕೃತಿಕ ಸಂಘಟನೆ ಜೆರಾಲ್ಡ್ ಪಿಂಟೋ ಅವರ ಸಂಪಾದಕತ್ವದಲ್ಲಿ ದಿ. ಗ್ರೇಸಿ ಮಾರ್ಟಿನ್ ಶಂಕರಪುರ ಅವರು ಬರೆದ ಕವನ ಮತ್ತು ಲೇಖನಗಳ ಪುಸ್ತಕ ಬಿಡುಗಡೆ ಸಮಾರಂಭ ಉಡುಪಿ ಡೋನ್ ಬಾಸ್ಕೊ ಸಭಾಭವನದಲ್ಲಿ ನಡೆಯಿತು.
ಉಡುಪಿ ಇಗರ್ಜಿಯ ಸಂತ ವಿನ್ಸೆಂಟ್ ಪಾವ್ಲ್ ಸಮಿತಿಯ ಅಧ್ಯಕ್ಷ ಮ್ಯಾಕ್ಸಿಂ ಡಿಸೋಜಾ ಅವರು ಪುಸ್ತಕವನ್ನು ಬಿಡುಗಡೆಗೊಳಿಸಿ ಶುಭ ಹಾರೈಸಿದರು.ಕೊಂಕಣಿ ಸಂಘಟನೆಯ ಜಿಲ್ಲಾ ಅಧ್ಯಕ್ಷ ಲುವಿಸ್ ಡಿಆಲ್ಮೇಡಾ ಸ್ವಾಗತಿಸಿದರು. ಕಾರ್ಯಕ್ರಮ ಸಂಯೋಜಕ ಡಾ|ಜೆರಾಲ್ಡ್ ಪಿಂಟೋ ಪುಸ್ತಕವನ್ನು ಪರಿಚಯಿಸಿದರು. ಕೋಶಾಧಿಕಾರಿ ಆಲ್ಫೊನ್ಸ್ ಡಿಕೋಸ್ಟಾ ಕಾರ್ಯಕ್ರಮ ನಿರೂಪಿಸಿ, ರೋಜಿ ಬಾರೆಟ್ಟೊ ವಂದಿಸಿದರು