ಕುಂದಾಪುರ ಕಥೊಲಿಕ್ ಸಭಾದಿಂದ ವನಮತ್ಸೋವ ಆಚರಣೆ

JANANUDI.COM NETWORK

ಕುಂದಾಪುರ,ಅ.9: ಕುಂದಾಪುರ ಕಥೊಲಿಕ್ ಸಭಾ ಘಟಕದಿಂದ ಅಗೋಸ್ತ್ 9 ರಂದು ಭಾನುವಾರ ಕುಂದಾಪುರ ರೋಜರಿ ಚರ್ಚ್ ಪ್ರಧಾನ ಧರ್ಮಗುರು, ಕಥೊಲಿಕ್ ಸಭೆಯ ಅಧ್ಯಾತ್ಮಿಕ ನಿರ್ದೇಶಕರಾದ ವಂ|ಧರ್ಮಗುರು ಸ್ಟ್ಯಾನಿ ತಾವ್ರೊ ಇವರ ಅಧ್ಯಕ್ಷತೆಯಲ್ಲಿ ಚರ್ಚ್ ಆವರಣದಲ್ಲಿ ಕಥೊಲಿಕ್ ಸಭಾ ಕುಂದಾಪುರದ ಅಧ್ಯಕ್ಷ ಬರ್ನಾಡ್ ಡಿಕೋಸ್ತಾ ಮತ್ತು ಕಾರ್ಯದರ್ಶಿ ಪ್ರೇಮಾ ಡಿಕುನ್ಹಾ ತೆಂಗಿನ ಸಸಿಯನ್ನು ನೆಡುವುದರ ಮೂಲಕ ವನಮತ್ಸೋವ ಆಚಾರಿಸಲಾಯಿತು.
ಕಹೊಲಿಕ್ ಸಂಘಟನೇಯ ಪದಾಧಿಕಾರಿಗಳಿಗೆ ಮತ್ತು ಚರ್ಚ್ ಪಾಲನ ಮಂಡಳಿಯ ಸದಸ್ಯರಿಗೆ ಅವರ ಮನೆಯ ಆವರಣದಲ್ಲಿ ನೆಡಲಿಕ್ಕಾಗಿ ಉತ್ತಮ ದರ್ಜೆಯ 45 ಅಡಿಕೆಸಸಿಗಳನ್ನು ಹಂಚಲಾಯಿತು. ಕಥೊಲಿಕ್ ಸಭೆಯ ಇತರ ಸದಸ್ಯರು ತಮಗೆ ಇಷ್ಟವಾದ ಇತರ ಗೀಡಗಳನ್ನು ಅವರ ಮನೆ ಆವರಣದಲ್ಲಿ ನೆಟ್ಟು ವನಮತ್ಸೋವಕ್ಕೆ ಸ್ಪಂದಿಸಿದರು. ಈ ಸಂದರ್ಭದಲ್ಲಿ. ಸಹಾಯಕ ಧರ್ಮಗುರು ವಂ|ವಿಜಯ್ ಡಿಸೋಜಾ, ಸಂತ ಮೇರಿಸ್ ಪಿ.ಯು.ಕಾಲೇಜಿನ ಪ್ರಾಂಶುಪಾಲ ವಂ|ಪ್ರವೀಣ್ ಅಮ್ರತ್ ಮಾರ್ಟಿಸ್, ಚರ್ಚ್ ಪಾಲನ ಮಂಡಳಿ ಉಪಾಧ್ಯಕ್ಷ ಲುವಿಸ್ ಜೆ ಫೆರ್ನಾಂಡಿಸ್,ಕಾರ್ಯದರ್ಶಿ ಆಶಾ ಕರ್ವಾಲ್ಲೊ,ಕಥೊಲಿಕ್ ಸಭಾ ಪದಾಧಿಕಾರಿಗಳಾದ, ಜೂಲಿಯೆಟ್ ಪಾಯ್ಸ್, ವಾಲ್ಟರ್ ಡಿಸೋಜಾ,ಶೈಲಾ ಡಿಆಲ್ಮೇಡಾ,ವಿನೋದ್ ಕ್ರಾಸ್ಟೊ, ವಿನಯಾ ಡಿಕೋಸ್ತಾ, ಜೋನ್ಸನ್ ಡಿಆಲ್ಮೇಡಾ, ಡಾ|ಸೋನಿ ಡಿಕೋಸ್ತಾ,ಮೈಕಲ್ ಗೊನ್ಸಾಲ್ವಿಸ್,ಉಲ್ಲಾಸ್ ಕ್ರಾಸ್ತಾ, ಮಾರ್ಕ್ ಡಿಸೋಜಾ ಮತ್ತಿತರು ಉಪಸ್ಥಿತರಿದ್ದರು.