ಬೆರೆಳಚ್ಚು ಹುದ್ದೆಯಲ್ಲಿ 20 ವರ್ಷ ಸೇವೆ ಸಲ್ಲಿಸಿ ಬಡ್ತಿ ಹೊಂದಿದ ವಿ. ರಾಧಮ್ಮ ರವರಿಗೆ ಸ.ಪ್ರ.ದ.ಕಾಲೇಜಿ ಕಾಲೇಜಿಂದ ಬೀಳ್ಕೊಡುಗೆ

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

ಶ್ರೀನಿವಾಸಪುರ : ಸ.ಪ್ರ.ದ.ಕಾಲೇಜಿನಲ್ಲಿ ಬೆರಳಚ್ಚು ಹುದ್ದೆಯಲ್ಲಿ 20 ವರ್ಷ ಸೇವೆ ಸಲ್ಲಿಸಿ   ಬೆಂಗಳೂರು ಕಮಿಷನರ್ ಕಛೇರಿಗೆ ಬಡ್ತಿ ಹೊಂದಿದ ವಿ. ರಾಧಮ್ಮ ರವರಿಗೆ ಕಾಲೇಜು ವತಿಯಿಂದ ಬೀಳ್ಕೊಡುಗೆ ಸರಳ ಕಾರ್ಯಕ್ರಮದಲ್ಲಿ  ಶಾಲು ಹೊದಿಸಿ ನೆನಪಿನ ಕಾಣಿಕೆ ನೀಡುವ ಮೂಲಕ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ರಾಜಮ್ಮ ರವರು ಕೆಲಸ ಮಾಡುವ ಸಮಯದಲ್ಲಿ  ಒತ್ತಡದ ಕೆಲಸದ ನಡುವೆ ತಾಳ್ಮೆಯಿಂದ  ಕಾಲೇಜು ಕೆಲಸಗಳನ್ನು ಮಾಡಿಕೊಡುತ್ತಿದ್ದ ಬಗ್ಗೆ ಗುಣಗಾನ ಮಾಡಲಾಯಿತು.
ಕಾರ್ಯಕ್ರಮದಲ್ಲಿಪ್ರಾಂಶುಪಾಲ ಕೆ. ವಿ. ವೆಂಕಟೇಶ್, ಉಪನ್ಯಾಸಕರಾದ  ವಿ. ನಾಗಪ್ಪ,ಮ್ಯಾನೇಜರ್ ವಿಜಯಕುಮಾರ್,
ಪದ್ಮ, ರಾಮಕೃಷ್ಣಯ್ಯ, ರಮೇಶ್, ಮಂಜುಳ, ರವಿಕುಮಾರ್, ಮೃತ್ಯುಂಜಯ ಇತರರು ಮಾತನಾಡಿದರು.
ಅದೇ ರೀತಿ ಸನ್ಮಾನ ಸ್ವೀಕರಿಸಿ ವಿ. ರಾದಮ್ಮ ರವರು ಮಾತನಾಡಿ ಕೆಲಸ ಮಾಡುವ ಸಮಯದಲ್ಲಿ ಒಳ್ಳೆಯ  ಸಹಕಾರ ನೀಡಿದ ಕಾಲೇಜಿನ ಎಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸಿದರು.