ರೋಜರಿ ಕ್ರೆಡಿಟ್ ಸೊಸೈಟಿಯ 8ನೇ ಶಾಖೆ ಶಿರ್ವಾದ ಬಹ್ರೇನ್ ಟವರನಲ್ಲಿ ಉದ್ಘಾಟನೆ

JANANUDI.COM NETWORK

 

 

ರೋಜರಿ ಕ್ರೆಡಿಟ್ ಸೊಸೈಟಿಯ 8ನೇ ಶಾಖೆ ಶಿರ್ವಾದ ಬಹ್ರೇನ್ ಟವರನಲ್ಲಿ ಉದ್ಘಾಟನೆ

 

 

 

ಕುಂದಾಪುರ, ಜೂ.8: ‘ದೇಶದಲ್ಲಿ ಆರ್ಥಿಕ ಸಂಕಷ್ಟ ಎದುರುರಾಗಿದ್ದು, ಈ ಪರಿಸರದಲ್ಲಿ ಎಷ್ಟೆಲ್ಲಾ ಬ್ಯಾಂಕುಗಳು ಇದ್ದರೂ, ಸಹಕಾರಿ ಕ್ಷೇತ್ರದಲ್ಲಿ ಖ್ಯಾತಿ ಗಳಿಸಿದ ರೋಜರಿ ಕ್ರೆಡಿಟ್ ಕೋ – ಆಪರೆಟೀವ್ ಸೊಸೈಟಿಯ ಶಾಖೆ ಶಿರ್ವಾದಲ್ಲಿ ಆರಂಭಗೊಳ್ಳಲು ರೋಜರಿ ಕ್ರೆಡಿಟ್ ಸಂಸ್ಥೆಯ ಅಧ್ಯಕ್ಷ ಜಾನ್ಸನ್ ಡಿಆಲ್ಮೇಡಾ ಯಶಸ್ವಿಯಾಗಿದ್ದಾರೆ. ಸಹಕಾರಿ ಸಂಸ್ಥೆಗಳಿಂದ ಜನರ ಅಭಿವ್ರದ್ದಿಗೆ ಉತ್ತಮ ಸಹಕಾರ ನೀಡುತ್ತಾ ಬಂದಿದೆ, ಈ ಪರಿಸರದಲ್ಲಿ ಆರಂಭಗೊಂಡ ಈ ಸಂಸ್ಥೆ ಅಭಿವ್ರದ್ದಿ ಪಥದಲ್ಲಿ ಸಾಗಿ ಜನರಿಗೆ ಉತ್ತಮ ಸೇವೆ ನೀಡಲಿ’ ಎಂದು ಶಿರ್ವಾ ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಡೆನಿಸ್ ಡೆಸಾ ರೋಜರಿ ಶಾಖೆಯನ್ನು ಆಶಿರ್ವದಿಸಿದರು.
ಶಾಖೆಯನ್ನು ಉದ್ಘಾಟಿಸಿದ ರೋಜರಿ ಕ್ರೆಡಿಟ್ ಸಂಸ್ಥೆಯ ಅಧ್ಯಕ್ಷ ಜಾನ್ಸನ್ ಡಿಆಲ್ಮೇಡಾ ‘ನಾವು ಇಲ್ಲಿ ಮುಂಚಿತವಾಗಿ ಶಾಖೆ ಆರಂಭಗೊಳಿಸಲು ಯೋಚಿಸಿದ್ದೆವು ಆದರೆ ಲಾಕ್ ಡೌನ್ ಇದಿದ್ದರಿಂದ ಹಿಂದಕ್ಕೆ ಬಿತ್ತು, ಈ ಶಾಖೆ ಉದ್ಘಾಟನೆ ಗೊಳ್ಳುವಾಗ ಒಳ್ಳೆಯ ಸಭಾ ಕಾರ್ಯಕ್ರಮ ಹಮ್ಮಿಕೊಳ್ಳಲು ಚಿಂತನೆ ಮಾಡಿದ್ದೆವು, ಆದರೆ ಲಾಖ್ ಡೌನ್ ಇದ್ದ ಕಾರಣ ಸರಳ ಕಾರ್ಯಕ್ರಮ ಮಾಡುತ್ತಿದ್ದೆವೆ, ಈ ಕಾರ್ಯಕ್ರಮಕ್ಕೆ ಬಂದ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸುತ್ತೆನೆ’ ಎನ್ನುತ್ತಾ ರೋಜರಿ ಕ್ರೆಡಿಟ್ ಸಂಸ್ಥೆ ಉತ್ತಮ ಸೇವೆ ನೀಡುತ್ತದೆ’ ಎಂದು ಭರವಶೆ ನೀಡಿದರು.
ಈ ಸಂದರ್ಭ ಸಂಸ್ಥೆಯ ಉಪಾಧ್ಯಕ್ಷ ಕಿರಣ್ ಲೋಬೊ, ನಿರ್ದೇಶಕರಾದ ಫಿಲಿಪ್ ಡಿಕೋಸ್ತಾ, ಜೇಕಬ್ ಡಿಸೋಜಾ, ವಿನೋದ್ ಕ್ರಾಸ್ತಾ, ಬ್ಯಾಪ್ಟಿಸ್ಟ್ ಡಯಾಸ್, ಓಝ್ಲಿನ್ ರೆಬೆಲ್ಲೊ, ಶಾಂತಿ ಕರ್ವಾಲ್ಲೊ, ಡಯಾನ ಡಿಆಲ್ಮೇಡಾ, ಶಾಂತಿ ಡಾಯಸ್, ಸಂತೋಷ್ ಡಿಸಿಲ್ವಾ, ಪ್ರಕಾಶ್ ಲೋಬೊ, ವಿಲ್ಪ್ರೆಡ್ ಮಿನೇಜಸ್, ಟೆರೆನ್ಸ್ ಸುವಾರಿಸ್, ತಿಯೋದರ್ ಒಲಿವೆರಾ, ಮುಖ್ಯ ಕಾರ್ಯನಿರ್ವಹಣ ಅಧಿಕಾರಿ ಪಾಸ್ಕಲ್ ಡಿಸೋಜಾ, ಶಾಖೆಯ ಸಭಾಪತಿ ವಿಲ್ಸನ್ ಡಿಸೋಜಾ, ಮತ್ತು ಸೊಸೈಟಿ ಸಿಬಂದಿಗಳು ಮತ್ತು ಆಮಂತ್ರಿತರು ಹಾಜರಿದ್ದರು.