ಶ್ರೀನಿವಾಸಪುರ  ಕೊರೊನಾದಿಂದ ಸಂಕಷ್ಟದಲ್ಲಿರುವ ಅಲ್ಪ ಸಂಖ್ಯಾತರಿಗೆ ರಂಜಾನ್‌ಗೆ ದಿನಸಿ ವಿತರಣೆ.

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
ಶ್ರೀನಿವಾಸಪುರ  ಕೊರೊನಾದಿಂದ ಸಂಕಷ್ಟದಲ್ಲಿರುವ ಅಲ್ಪ ಸಂಖ್ಯಾತರಿಗೆ ರಂಜಾನ್‌ಗೆ ದಿನಸಿ ವಿತರಣೆ. 
ಶ್ರೀನಿವಾಸಪುರ : ಕೊರೊನಾದಿಂದ ಸಂಕಷ್ಟದಲ್ಲಿರುವ ಅಲ್ಪ ಸಂಖ್ಯಾತರಿಗೆ ರಂಜಾನ್ ಆಚರಣೆ ಮಾಡಲು ಸಮಾಜ ಸೇವಕ ಹಾಗೂ ನಿರ್ಣಯ ವಾರಪತ್ರಿಕೆ ಸಂಪಾದಕರು ಎಸ್‌. ನಾರಾಯಣಸ್ವಾಮಿ ಬಡ ಕುಟುಂಬಗಳಿಗೆ ದಿನಸಿ ಕಿಟ್ ವಿತರಿಸಿದರು . ಕಿಟ್ ವಿತರಿಸಿ ಮಾತನಾಡಿದ ಅವರು , ಕೊರೊನಾ ಭೀತಿ ಜನರಲ್ಲಿ ಆವರಿಸಿಕೊಂಡಿದೆ . ಕೆಲ ವರು ಜೀವನ ಮಾಡಲು ಕೆಲಸ ಕಾರ್ಯಗಳಿಲ್ಲದೇ ಸಂಕಷ್ಟ ದಲ್ಲಿದ್ದಾರೆ . ಹಾಗಾಗಿ ಅವರಿಗೆ ಒಂದಿಷ್ಟು ಸಹಾಯ ಮಾಡುವ ನಿಟ್ಟಿನಲ್ಲಿ ಅಲ್ಪಸಂಖ್ಯಾತ ಕುಟುಂಬಗಳಿಗೆ ದಿನಸಿ ವಿತರಣೆ ಮಾಡಲಾಗುತ್ತಿದೆ ಎಂದು ವಿವರಿಸಿದರು . ಈ ಸಂದರ್ಭದಲ್ಲಿ ಅನೀಸ್ ಅಹಮ್ಮದ್, ಅಮೀರ್‌ಖಾನ್ , ನಜೀರ್ ಅಹದ್ ಇದರು .