ಗ್ರೇಸಿ ಟೀಚರ್ ಇವರಿಗೆ ನುಡಿನಮನ

JANANUDI.COM NETWORK

ಗ್ರೇಸಿ ಟೀಚರ್ ಇವರಿಗೆ ನುಡಿನಮನ

 

 

ಕುಂದಾಪುರ, ಡಿ.3: ತಿಂಗಳ ಹಿಂದೆ ಇಹಲೋಕ ತ್ಯಜಿಸಿದ, ಶಿಷ್ಯರ ಅಚ್ಚುಮೆಚ್ಚಿನ ಶಿಕ್ಷಯಾಗಿ, ಅಪಾರ ಶಿಷ್ಯ ವ್ರಂದ ಪಡೆದುಕೊಂಡ ಗ್ರೇಸಿ ಟೀಚರ್ ಇವರ ಶ್ರದ್ದಾಂಜಲಿ ಕಾರ್ಯಕ್ರಮ ಕುಂದಾಪುರದ ಕಲಾಮಂದಿರದಲ್ಲಿ ಡಿ.3 ರಂದು ಜರುಗಿತು. ಟೀಚರ್ ಡೇಜಿ ಮೆಂಡೊನ್ಸಾ ನುಡಿನಮನಗಳನ್ನು ಅರ್ಪಿಸಿದರು.
ಈ ಸಂದರ್ಭದಲ್ಲಿ ಕುಂದಾಪುರ, ಗಂಗೊಳ್ಳಿ ಮುಂತಾದ ಕ್ರೈಸ್ತ ಬಂಧುಗಳು, ಹಾಗೂ ಎಸ್.ವಿ ಶಾಲಾ ಆಡಳಿತ ಮಂಡಳಿಯ ಸಂಚಾಲಕರಾದ ಎಚ್.ಗಣೇಶ್ ಕಾಮತ್,ಸದಾಶಿವ ನಾಯಕ್, ಎಸ್.ವಿ. ಕಾಲೇಜಿನ ಪ್ರಾಂಶುಪಾಲರು, ಶಿಕ್ಷಕ ವ್ರಂದ, ರೋಟರಿ ಕ್ಲಬಿನ ಸದಾನಂದ ಛಾತ್ರ, ಶಾಂತಾರಾಮ್ ಪ್ರಭು, ಕುಂದಪ್ರಭ ಸಂಪಾದಕರಾದ ಯು.ಎಸ್.ಶೆಣೈ. ಮುಂತಾದ ಗಣ್ಯರು ಉಪಸ್ಥಿತರಿದ್ದರು. ಶ್ರದ್ದಾಂಜಲಿಯ ಮೊದಲು ಕುಂದಾಪುರ ಚರ್ಚಿನಲ್ಲಿ ಗ್ರೇಸಿ ಟಿಚರ್ ಆತ್ಮದ ಶಾಂತಿಗಾಗಿ ಪವಿತ್ರ ಬಲಿದಾನವನ್ನು ಫಾ|ಸ್ಟ್ಯಾನಿ ತಾವ್ರೊ, ಫರ್ಡಿನಾಂಡ್ ಗೊನ್ಸಾಲ್ವಿಸ್, ಫಾ|ವಿಜಯ್ ಡಿಸೋಜಾ, ಫಾ|ಜೊವೆಲ್ ಒಲಿವೇರಾ ಅರ್ಪಿಸಿದರು. ಗ್ರೇಸಿ ಟೀಚರ್ ಪತಿ ತಿಮೋತಿ ಡಿಆಲ್ಮೇಡಾ, ಪುತ್ರ ಜೋನ್ಸನ್ ಡಿಆಲ್ಮೇಡಾ, ಮೂವರು ಪುತ್ರಿಯರು, ಗ್ರೇಸಿ ಟೇಚರ್ ಸಹೋದರಿಯರು ಉಪಸ್ಥಿತರಿದ್ದರು. ರಮಾನಂದ್ ಕಾರಂತ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.