ಹಿರಿಯ ಕಾಂಗ್ರೆಸಿಗ ವಾಸು ಸೇರೆಗಾರ್ರು – ಪ್ರಸಿದ್ದ ವಾಣಿಜದ್ಯೋಮಿ ( ಗಣೇಶ್ ಸ್ಟೋರ್ ಮಾಲಕ ) ನಿಧನ

JANANUDI.COM NETWORK

ಹಿರಿಯ ಕಾಂಗ್ರೆಸಿಗ ವಾಸು ಸೇರೆಗಾರ್ರು – ಪ್ರಸಿದ್ದ ವಾಣಿಜದ್ಯೋಮಿ ( ಗಣೇಶ್ ಸ್ಟೋರ್ ಮಾಲಕ ) ನಿಧನ

ಕುಂದಾಪುರ, ನ.2. ಕುಂದಾಪುರದ ಹಿರಿಯ ಕಾಂಗ್ರೆಸಿಗ ವಾಸು ಸೇರೆಗಾರ್ರು, ಪ್ರಸಿದ್ದ ವಾಣಿಜದ್ಯೋಮಿ ( ಗಣೇಶ್ ಸ್ಟೋರ್ ಮಾಲಕ ) ನಿನ್ನೆ (ನವೆಂಬರ್ 1) ರಾತ್ರಿ 11ಗಂಟೆಗೆ ಅಲ್ಪಕಾಲದ ಅಸೌಖ್ಯದಿಂದ ಮೃತಪಟ್ಟಿರುತ್ತಾರೆ.

ಮೃತ ದೇಹವು ಇಂದು ಮಧ್ಯಾಹ್ನ 2ಗಂಟೆಗೆ ಕುಂದಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿನ ಅವರ ಸ್ವಗ್ರಹಕ್ಕೆ ಆಗಮಿಸಲಿದೆ ಮತ್ತು ಅಂತ್ಯಕ್ರಿಯೆಯು ಸಂಜೆ 4ಗಂಟೆಗೆ ನಡೆಯಲಿದೆ ಎಂದು ಅವರ ಕುಟುಂಬ ಸದಸ್ಯರು ತಿಳಿಸಿದ್ದಾರೆ.

ವಾಸು ಸೇರುಗಾರ್ ಕುಂದಾಪುರದ ಹಿರಿಯ ರಾಜಕಾರಣಿ ವಿನ್ನಿಫ್ರೆಡ್ ಫೆರ್ನಾಂಡಿಸ್ ಅವರ ಸಮಕಾಲೀನರಾಗಿದ್ದು ಪುರಸಭೆಯ ಸದಸ್ಯರಾಗಿದ್ದರು. ಕಾಂಗ್ರೆಸ್ ಪಕ್ಷದ ಕಟ್ಟಾಳುವಾಗಿದ್ದರು. 25ಕ್ಕೂ ಹೆಚ್ಚು ವರ್ಷಗಳಿಂದ ಸೀತಾರಾಮಚಂದ್ರ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರಾಗಿದ್ದರು. ಅವರ ಗಣೇಶ್ ಸ್ಟೋರ್ಸ್ ಎಂಬ ಅಂಗಡಿ ಕುಂದಾಪುರದಲ್ಲಿ ಪ್ರಸಿದ್ಧ ಕಿರಾಣಿ ಅಂಗಡಿಗಳಲ್ಲಿ ಒಂದಾಗಿದೆ. ಮೃತರು 4 ಪುತ್ರರು, 3 ಪುತ್ರಿಯರು ಮತ್ತು ಅಪಾರ ಅಭಿಮಾನಿ ಬಳಗವನ್ನು ಅಗಲಿದ್ದಾರೆ.