ಅ.20 : ಮೌನಾರತಿ ಕವನ ಸಂಕಲನ ಬಿಡುಗಡೆ

JANANUDI.COM NETWORK 

ಅ.20 : ಮೌನಾರತಿ ಕವನ ಸಂಕಲನ ಬಿಡುಗಡೆ

ಕುಂದಾಪುರ, ಶ್ರೀಮತಿ ಸುಮಿತ್ರಾ ಡಿ. ಐತಾಳರ “ಮೌನಾರತಿ ” ಕವನ ಸಂಕಲನ ಅಕ್ಟೋಬರ್ 20 ರಂದು ಆದಿತ್ಯವಾರ ಕುಂದಾಪುರದ ಹೋಟೇಲ್ ಪಾರಿಜಾತದ ಪದ್ಮಾವತಿ ಕಲ್ಯಾಣ ಮಂಟಪದಲ್ಲಿ ಮಧ್ಯಾಹ್ನ 2.30ಕ್ಕೆ ನಡೆಯಲಿದೆ.
ಕುಂದಪ್ರಭ ಆಶ್ರಯದಲ್ಲಿ ನಡೆಯುವ ಈ ಸಮಾರಂಭದ ಉದ್ಘಾಟನೆ ಹಾಗೂ ಪುಸ್ತಕ ಬಿಡುಗಡೆಯನ್ನು ಹಿರಿಯ ಲೇಖಕ ಎ.ಎಸ್.ಎನ್.ಹೆಬ್ಬಾರ್ ನೆರವೇರಿಸಲಿದ್ದಾರೆ.
ಉಡುಪಿ ಜಿಲ್ಲಾ ಕಸಾಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಅಧ್ಯಕ್ಷತೆ ವಹಿಸಲಿದ್ದಾರೆ. ಡಾ.ಉತ್ತಮ್ ಕುಮಾರ್ ಶೆಟ್ಟಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
ನಂತರ ನಡೆಯುವ ಕವಿಗೋಷ್ಠಿ ಅಧ್ಯಕ್ಷತೆಯನ್ನು ಕಸಾಪ ಗೌ.ಕಾರ್ಯದರ್ಶಿ ಡಾ.ಸುಬ್ರಹ್ಮಣ್ಯ ಭಟ್ ಬೈಂದೂರು ವಹಿಸಲಿದ್ದು, ಕವಿಗಳಾದ ಶ್ರೀಮತಿ ಸುಪ್ರಸನ್ನ ನಕ್ಕತ್ತಾಯ, ಪುಂಡಲೀಕ ನಾಯಕ್, ಕೃಷ್ಣ ಡಿ, ಪೂರ್ಣಿಮಾ ಭಟ್, ಹಾಗೂ ಕವನ ಸ್ಪರ್ಧೆಯಲ್ಲಿ ವಿಜೇತರಾದವರು ಕವಿತೆಗಳನ್ನು ಓದಲಿದ್ದಾರೆ.
ಗುರುಪರಂಪರಾ ಸಂಗೀತ ಸಭಾ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ. ಈ ಎಲ್ಲ ಕಾರ್ಯಕ್ರಮಗಳಲ್ಲಿ ಸಾರ್ವಜನಿಕರು ಪಾಲ್ಗೊಳ್ಳಬೇಕೆಂದು ಶ್ರೀಮತಿ ಸುಮಿತ್ರಾ ಐತಾಳ್ ವಿನಂತಿಸಿದ್ದಾರೆ.