ಕುಂದಾಪುರ ಪುರುಷರ ದಿನಾಚರಣೆ

JANANUDI.COM NETWORK

 

ಕುಂದಾಪುರ ಪುರುಷರ ದಿನಾಚರಣೆ


ಕುಂದಾಪುರ, ಸೆ.22: ಕುಂದಾಪುರ ರೊಜರಿ ಮಾತಾ ಇಗರ್ಜಿಯಲ್ಲಿ ಪುರುಷರ ದಿನಾಚರಣೆಅಯನ್ನು ಆಚರಿಸಲಾಯಿತು. ದಿವ್ಯ ಬಲಿದಾನವನ್ನು ಅರ್ಪಿಸಿದ ಪ್ರಧಾನ ಯಾಜಕ ಅ|ವಂ|ಧರ್ಮಗುರು ಮಂಗಳೂರು ಮತ್ತು ಉಡುಪಿ ಧರ್ಮಪ್ರಾಂತ್ಯಗಳ ಜ್ಯುಡಿಶಿಯಲ್ ವಿಕಾರ್ ಇವರು ‘ತಂದೆ ತಾಯಿಗಳು ದೈವ ಭೀತ್ಯಿಂದ ಉತ್ತಮರಾಗಿ ಜೀವಿಸಿ ಮಕ್ಕಳಿಗೆ ಆದರ್ಶರಾಗಿರಬೇಕು, ತಂದೆ ಮಕ್ಕಳ ರಕ್ಷಕನಾಬೇಕು, ಮಕ್ಕಳಿಗೆ ಭದ್ರತೆಯನ್ನು ನೀಡಬೇಕು ಅಗತ್ಯ್ತೆಯನ್ನು ಪರಿಹರಿಸಬೇಕುಮ್ ತಂದೆ ಮಕ್ಕಳಿಗೆ ಉತ್ತಮ ಗುರುವಾಗಬೇಕು, ಮಾನವೀಯ ಮೌಲ್ಯಗಳನ್ನು ಕಲಿಸಬೇಕು, ಉತ್ತಮ ಸಂಗಾತಿಯಾಗಬೇಕು, ಹೀಗೆ ಪ್ರಾರ್ಥನೆ ಧರ್ಮ ನೀತಿಗಳನ್ನು ಅನುಸರಿಸಿ ದೇವರ ಇಚ್ಚೆಯಂತೆ ಜೀವಿಸ ಬೇಕು ಎಂದು’ ವಿಶೇಷವಾದ ಸಂದೇಶವನ್ನು ನೀಡಿದರು.
ಕುಂದಾಪುರ ಇಗರ್ಜಿಯ ಪ್ರಧಾನ ಧರ್ಮಗುರು ಅ|ವಂ| ಸ್ಟ್ಯಾನಿ ತಾವ್ರೊ ಬಲಿದಾನದಲ್ಲಿ ಭಾಗಿಯಾಗಿ ಶುಭ ಕೋರಿದರು. ಪ್ರಾಂಶುಪಾಲ ವಂ|ಧರ್ಮಗುರು ಪ್ರವೀಣ್ ಅಮ್ರತ್ ಮಾರ್ಟಿಸ್ ಪವಿತ್ರ ಬಲಿದಾನದಲ್ಲಿ ಭಾಗಿಯಾದರು. ಈ ಕಾರ್ಯಕ್ರಮವನ್ನು ಇಗರ್ಜಿಯ ಕುಟುಂಬ ವಂ|ಧರ್ಮಗುರು ವಿಜಯ್ ಡಿಸೋಜಾ ಉಪಸ್ಥಿತರಿದ್ದರು ಆಯೋಗ ಎರ್ಪಡಿಸಿದ್ದು ಆಯೋಗದ ಸಂಚಾಲಕಿ ಆಶಾ ಕರ್ವಾಲ್ಲೊ ಮತ್ತು ಸದಸ್ಯರು ಹಾಜಾರಿದ್ದ ಈ ಕಾರ್ಯಕ್ರಮದಲ್ಲಿ ಹಲವಾರು ಪುರುಷರು ಭಾಗಿಯಾದರು