ಕುಂದಾಪುರ ರೋಜರಿ ಮಾತಾ ಚರ್ಚ್ ಸಭಾ ಭವನದಲ್ಲಿ ಜುಲಾಯ್ 7 ರಂದು ಸ್ವಯಂ ರಕ್ತದಾನ ಶಿಬಿರ :ರಕ್ತದಾನ ಮಾಡಿ ಜೀವ ಉಳಿಸಿ.

JANANUDI NETWORK

ಕುಂದಾಪುರ ರೋಜರಿ ಮಾತಾ ಚರ್ಚ್ ಸಭಾ ಭವನದಲ್ಲಿ ಜುಲಾಯ್ 7 ರಂದು ಸ್ವಯಂ ರಕ್ತದಾನ ಶಿಬಿರ :ರಕ್ತದಾನ ಮಾಡಿ ಜೀವ ಉಳಿಸಿ.


ಕುಂದಾಪುರ, ಜು.2: ಕಥೊಲಿಕ್ ಸಭಾ ಕುಂದಾಪುರ ಘಟಕ ಇದರ ಮುಂದಾಳಾತ್ವದಲ್ಲಿ, ರೋಟರಿ ಕ್ಲಬ್ ಕುಂದಾಪುರ ದಕ್ಷಿಣ ಇವರ ಆಶ್ರಯದಲ್ಲಿ ರೋಜರಿ ಕ್ರೆಡಿಟ್ ಕೋ.ಒಪರೇಟಿವ್ ಸೊಸೈಟಿ ಸಹಭಾಗಿತ್ವದಲ್ಲಿ ಜುಲಾಯ್ 7 ರಂದು ಚರ್ಚ್ ಸಭಾಭವನದಲ್ಲಿ, ಕುಂದಾಪುರ ರೇಡ್ ಕ್ರಾಸ್ ಸಂಸ್ಥೆಯ ಸಹಕಾರದಿಂದ ಸ್ವಯಂ ರಕ್ತದಾನ ಶಿಬಿರ ನಡೆಯುವುದೆಂದು, ಕಥೊಲಿಕ್ ಸಭಾ ಸಂಸ್ಥೆಯ ಅಧ್ಯಾತ್ಮಿಕ ನಿರ್ದೇಶಕ ಕುಂದಾಪುರ ಚರ್ಚಿನ ಪ್ರಧಾನ ಧರ್ಮಗುರು, ವಲಯ ಪ್ರಧಾನರಾದ ಅ|ವಂ|ಸ್ಟ್ಯಾನಿ ತಾವ್ರೊ, ಕಥೊಲಿಕ್ ಸಭಾದ ಅಧ್ಯಕ್ಷ ವಾಲ್ಟರ್ ಡಿಸೋಜಾ, ಕಾರ್ಯಕ್ರಮದ ಸಂಚಾಲಕ, ರೋಜರಿ ಕ್ರೆಡಿಟ್ ಕೋ.ಒಪರೇಟಿವ್ ಸಂಸ್ಥೆಯ ಅಧ್ಯಕ್ಷ ಜಾನ್ಸನ್ ಡಿಆಲ್ಮೇಡಾ, ರೋಟರಿ ಕುಂದಾಪುರ ದಕ್ಷಿಣ, ಇದರ ಅಧ್ಯಕ್ಷ ದೇವರಾಜ್ ಕೆ. ಮತ್ತು ಸದಸ್ಯರು ಹಾಗೂ ಕಥೊಲಿಕ್ ಸಭೆಯ ಪದಾಧಿಕಾರಿಗಳು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.   

      ರಕ್ತದಾನ ಮಾಡಿ ಇನ್ನೊಬರಿಗೆ ಪ್ರಾಣದಾನ ನೀಡುವ ಮಹಾ ಅಮೂಲ್ಯವಾದ ಈ ಕಾರ್ಯಾಕ್ರಮದಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿ ರಕ್ತದಾನ ಮಾಡ ಬೇಕಾಗಿ ವಿನಂತಿಸಿಕೊಂಡಿದ್ದಾರೆ.

      ಈ ರಕ್ತದಾನ ಶಿಬಿರವು ಬೆಳಿಗ್ಗೆ 8 ರಿಂದ ಮಧ್ಯಾನ್ಹ 1 ಗಂಟೆಯ ತನಕ ನಡೆಯಲಿದೆಯೊಂದು ಸಂಘಟಕರು ತಿಳಿಸಿದ್ದಾರೆ. ಈ ರಕ್ತದಾನ ಕಾರ್ಯಕ್ರಮಕ್ಕೆ ಕುಂದಾಪುರ ಚರ್ಚ್ ಕಥೊಲಿಕ್ ಸ್ತ್ರೀ ಸಂಘಟನೆ, ಆರೋಗ್ಯ ಆಯೋಗ, ಭಾರತೀಯ ಕಥೊಲಿಕ್ ಯುವ ಸಂಘಟನೆಗಳು ಸಹಕರಿಸಲಿದ್ದಾರೆಂದು ಸಂಘಟಕರು ತಿಳಿಸಿದ್ದಾರೆ.

ಹಾಗೇ ಕುಂದಾಪುರದ ರೇಡ್ ಕ್ರಾಸ್ ಸಂಸ್ಥೆ ‘ರಕ್ತದಾನ ಮಾಡಿ ಜೀವ ಉಳಿಸಿ’ ಎಂದು ಸಾರ್ವಜನಿಕರಲ್ಲಿ ಕಳಕಳಿಯ ಮನವಿ ಮಾಡಿಕೊಂಡಿದೆ.