ಬೆಳ್ಮಣ್ಣು ಜೇಸಿಐಗೆ ಅತ್ಯುತ್ತಮ ಘಟಕಾಧ್ಯಕ್ಷೆ ಪ್ರಶಸ್ತಿ

ವರದಿ: ವಾಲ್ಟರ್ ಮೊಂತೇರೊ

ಬೆಳ್ಮಣ್ಣು ಜೇಸಿಐಗೆ ಅತ್ಯುತ್ತಮ ಘಟಕಾಧ್ಯಕ್ಷೆ ಪ್ರಶಸ್ತಿ

ಭಾರತೀಯ ಜೇಸಿಐನ ಉಡುಪಿ, ದಕ್ಷಿಣಕನ್ನಡ, ಉತ್ತರಕನ್ನಡ ಜಿಲ್ಲೆಗಳನ್ನೊಳಗೊಂಡ ವಲಯ 15ರ ಪ್ರತಿಷ್ಠಿತ ಘಟಕ ಜೇಸಿಐ ಬೆಳ್ಮಣ್ಣಿಗೆ ಪುತ್ತೂರಿನಲ್ಲಿ ಜರಗಿದ ಮಧ್ಯಂತರ ವಲಯ ಸಮ್ಮೇಳನ “ಮುಂಗಾರು” ಸಮಾರಂಭದಲ್ಲಿ ಅತ್ಯುತ್ತಮ ಘಟಕಾಧ್ಯಕ್ಷೆ, ಅತ್ಯುತ್ತಮ ಸೆಷ್ಪಲ್ ಪ್ರೋಜೆಕ್ಟ್ ಪ್ರಶಸ್ತಿ, ಸಿಲ್ವರ್ ಲೋಮ್ ಆವಾರ್ಡ್ ಸೇರಿದಂತೆ ಅಭಿವೃದ್ಧಿ ಮತ್ತು ಬೆಳವಣಿಗೆ ವಿಭಾಗ, ತರಬೇತಿ ವಿಭಾಗದ ಹತ್ತು ಹಲವು ವಿಶೇಷ ಮನ್ನಣೆಗಳನ್ನು ವಲಯಾಧ್ಯಕ್ಷರಾದ ಅಶೋಕ್ ಚೂಂತಾರ್ ಬೆಳ್ಮಣ್ಣು ಜೇಸಿಐನ ಅಧ್ಯಕ್ಷೆ ಶ್ವೇತಾ ಸುಭಾಸ್‍ರವರಿಗೆ ಪ್ರಶಸ್ತಿ ನೀಡಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ನಿಕಟ ಪೂರ್ವ ವಲಯಾಧ್ಯಕ್ಷ ರಾಕೇಶ್ ಕುಂಜೂರ್, ವಲಯ ಉಪಾಧ್ಯಕ್ಷ ದೇವೇಂದ್ರ ನಾಯಕ್, ವಲಯಾಧಿಕಾರಿ ಸುಭಾಸ್ ಕುಮಾರ್, ಬೆಳ್ಮಣ್ಣು ಜೇಸಿಐನ ಪೂರ್ವಾಧ್ಯಕ್ಷ ದಿನೇಶ್ ಸುವರ್ಣ, ಕಾರ್ಯದರ್ಶಿ ಸರಿತಾ ದಿನೇಶ್ ಸುವರ್ಣ, ಉಪಾಧ್ಯಕ್ಷ ಅಬ್ಬನಡ್ಕ ಸತೀಶ್ ಪೂಜಾರಿ, ಜೇಸಿರೇಟ್ ಪೂರ್ವಾಧ್ಯಕ್ಷೆ ಅಮಿತಾ ರವಿರಾಜ್ ಶೆಟ್ಟಿ, ಜೂನಿಯರ್ ಜೇಸಿ ಅಧ್ಯಕ್ಷ ದಿಕ್ಷೀತ್ ದೇವಾಡಿಗ ಮೊದಲಾದವರಿದ್ದರು.