ಕುಂದಾಪುರ ಸಂತ ಸಾಬೆಸ್ಟಿಯನ್ ವಾಳೆಯಲ್ಲಿ ಪೋಷಕ ಸಂತರ ಹಬ್ಬ

ಕುಂದಾಪುರ ಸಂತ ಸಾಬೆಸ್ಟಿಯನ್ ವಾಳೆಯಲ್ಲಿ ಪೋಷಕ ಸಂತರ ಹಬ್ಬ

ಕುಂದಾಪುರ, ಜ.21: ಕುಂದಾಪುರ ಸಂತ ಸಾಬೆಸ್ಟಿಯನ್ ವಾಳೆಯಲ್ಲಿ ಪೋಷಕ ಸಂತರ ಹಬ್ಬವನ್ನು ಆಚರಿಸಲಾಯಿತು. ಕುಂದಾಪುರ ಚರ್ಚಿನ ಪ್ರಧಾನ ಧರ್ಮಗುರುಗಳಾದ ಅ|ವಂ|ಸ್ಟ್ಯಾನಿ ತಾವ್ರೊ ‘ಇಂತಹ ಹಬ್ಬಗಳನ್ನು ಆಚರಿಸುವುದರಿಂದ ವಾಳೆಯಯಲ್ಲಿ ಒಗ್ಗಟ್ಟು, ಪ್ರೀತಿ, ವಿಶ್ವಾಸ ಹೆಚ್ಚುತ್ತದೆ, ನಾವು ಯೇಸುವಿನ ತತ್ವದಂತೆ ಇತರರಿಗೆ ಸಹಾಯ ಮಾಡುವ, ಕರುಣೆ ತೋರುವ, ಹಾಗೇ ನಿಮ್ಮ ಪೋಷಕ ಸಂತ ಸೆಬಾಸ್ಟೀಯನ್ ಅವರ ಜೀವನ ನಮಗೆ ಆದರ್ಶವಾಗಲಿ’ ಎಂದು ಶುಭ ಕೋರಿದರು.
ಸಹಾಯಕ ಧರ್ಮಗುರು ರೋಯ್ ಲೋಬೊ ‘ನಾವು ಉಪ್ಪಿನಂತೆ ರುಚಿಯಾಗೋಣ, ಸಮಾಜಕ್ಕೆ ಬೆಳಕಾಗೋಣ’ ಎಂದು ಬೈಬಲ ವಾಕ್ಯವನ್ನು ಉಲ್ಲೇಖಿಸಿದರು. ಪ್ರಾಂಶುಪಾಲ ಧರ್ಮಗುರು ಪ್ರವೀಣ್ ಅಮ್ರತ್ ಮಾರ್ಟಿಸ್, ಪಾಲನ ಮಂಡಳಿ ಉಪಾಧ್ಯಕ್ಷ ಜೇಕಬ್ ಡಿಸೋಜಾ, ಕಾರ್ಯದರ್ಶಿ ಫೆಲ್ಸಿಯಾನ್ ಡಿಸೋಜಾ,  ಕಿರು ಸಮುದಾಯದ ಸಂಚಾಲಕಿ ಎಲಿಜಾಬೆತ್ ಡಿಸೋಜಾ, 18 ಆಯೋಗಗಳ ಸಂಚಾಲಕಿ ಪ್ರೇಮಾ ಡಿಕುನ್ಹಾ, ಉಪಸ್ಥಿತರಿದ್ದು ಶುಭ ಕೋರಿದರು. ಈ ಸಂದರ್ಭದಲ್ಲಿ ಖ್ಯಾತ ಹಾಡುಗಾರ ವಿಲ್ಸನ್ ಒಲಿವೇರಾ ಮತ್ತು ನಿವ್ರತ್ತ ಸರಕಾರಿ ನೌಕರಕುಂದಾಪುರ ಸಂತ ಸಾಬೆಸ್ಟಿಯನ್ ವಾಳೆಯಲ್ಲಿ ಪೋಷಕ ಸಂತರ ಹಬ್ಬ
ವಿಲ್ಫ್ರೆಡ್ ಡಿಸೋಜಾ ಇವರನ್ನು ಸನ್ಮಾನಿಸಲಾಯಿತು, ಉತ್ತರವಾಗಿ ಅವರು ಕ್ರತ್ಜನತೆ ಸಲ್ಲಿಸಿದರು. ಮಕ್ಕಳು ಮತ್ತು ಹಿರಿಯವರು ನ್ರತ್ಯ, ಗಾಯನ, ಹಾಸ್ಯ ರೂಪಕಗಳನ್ನು ಪ್ರದರ್ಶಿಸಿದರು. ವಾಳೆಯ ಪ್ರತಿನಿಧಿ ಪ್ರೆಸಿಲ್ಲಾ ರೆಬೆಲ್ಲೊ ಉಪಸ್ಥಿತರಿದ್ದು, ವಾಳೆಯ ಕಿರು ಸಮುದಾಯದ ಪ್ರೇರಕಿ ಲಿಡಿಯಾ ಡಿಆಲ್ಮೇಡ ವರದಿ ವಾಚಿಸಿದರು, ವಾಳೆಯಾ ಗುರಿಕಾರ ಅಂತೋನಿ ಡಿಆಲ್ಮೇಡಾ ಸ್ವಾಗತಿಸಿದರು. ಪ್ರಾರ್ಥನ ಪ್ರೇರಕಿ ಜೂಲಿಯಾನ ಮಿನೇಜೆಸ್ ಧನ್ಯವಾದಗಳನ್ನು ಅರ್ಪಿಸಿದರು.


ಕುಂದಾಪುರ, ಜ.21: ಕುಂದಾಪುರ ಸಂತ ಸಾಬೆಸ್ಟಿಯನ್ ವಾಳೆಯಲ್ಲಿ ಪೋಷಕ ಸಂತರ ಹಬ್ಬವನ್ನು ಆಚರಿಸಲಾಯಿತು. ಕುಂದಾಪುರ ಚರ್ಚಿನ ಪ್ರಧಾನ ಧರ್ಮಗುರುಗಳಾದ ಅ|ವಂ|ಸ್ಟ್ಯಾನಿ ತಾವ್ರೊ ‘ಇಂತಹ ಹಬ್ಬಗಳನ್ನು ಆಚರಿಸುವುದರಿಂದ ವಾಳೆಯಯಲ್ಲಿ ಒಗ್ಗಟ್ಟು, ಪ್ರೀತಿ, ವಿಶ್ವಾಸ ಹೆಚ್ಚುತ್ತದೆ, ನಾವು ಯೇಸುವಿನ ತತ್ವದಂತೆ ಇತರರಿಗೆ ಸಹಾಯ ಮಾಡುವ, ಕರುಣೆ ತೋರುವ, ಹಾಗೇ ನಿಮ್ಮ ಪೋಷಕ ಸಂತ ಸೆಬಾಸ್ಟೀಯನ್ ಅವರ ಜೀವನ ನಮಗೆ ಆದರ್ಶವಾಗಲಿ’ ಎಂದು ಶುಭ ಕೋರಿದರು.
ಸಹಾಯಕ ಧರ್ಮಗುರು ರೋಯ್ ಲೋಬೊ ‘ನಾವು ಉಪ್ಪಿನಂತೆ ರುಚಿಯಾಗೋಣ, ಸಮಾಜಕ್ಕೆ ಬೆಳಕಾಗೋಣ’ ಎಂದು ಬೈಬಲ ವಾಕ್ಯವನ್ನು ಉಲ್ಲೇಖಿಸಿದರು. ಪ್ರಾಂಶುಪಾಲ ಧರ್ಮಗುರು ಪ್ರವೀಣ್ ಅಮ್ರತ್ ಮಾರ್ಟಿಸ್, ಕಿರು ಸಮುದಾಯದ ಸಂಚಾಲಕಿ ಎಲಿಜಾಬೆತ್ ಡಿಸೋಜಾ, 18 ಆಯೋಗಗಳ ಸಂಚಾಲಕಿ ಪ್ರೇಮಾ ಡಿಕುನ್ಹಾ, ಉಪಸ್ಥಿತರಿದ್ದು ಶುಭ ಕೋರಿದರು. ಈ ಸಂದರ್ಭದಲ್ಲಿ ಖ್ಯಾತ ಹಾಡುಗಾರ ವಿಲ್ಸನ್ ಒಲಿವೇರಾ ಮತ್ತು ನಿವ್ರತ್ತ ಸರಕಾರಿ ನೌಕರ ವಿಲ್ಫ್ರೆಡ್ ಡಿಸೋಜಾ ಇವರನ್ನು ಸನ್ಮಾನಿಸಲಾಯಿತು, ಉತ್ತರವಾಗಿ ಅವರು ಕ್ರತ್ಜನತೆ ಸಲ್ಲಿಸಿದರು. ಮಕ್ಕಳು ಮತ್ತು ಹಿರಿಯವರು ನ್ರತ್ಯ, ಗಾಯನ, ಹಾಸ್ಯ ರೂಪಕಗಳನ್ನು ಪ್ರದರ್ಶಿಸಿದರು. ವಾಳೆಯ ಪ್ರತಿನಿಧಿ ಪ್ರೆಸಿಲ್ಲಾ ರೆಬೆಲ್ಲೊ ಉಪಸ್ಥಿತರಿದ್ದು, ವಾಳೆಯ ಕಿರು ಸಮುದಾಯದ ಪ್ರೇರಕಿ ಲಿಡಿಯಾ ಡಿಆಲ್ಮೇಡ ವರದಿ ವಾಚಿಸಿದರು, ವಾಳೆಯಾ ಗುರಿಕಾರ ಅಂತೋನಿ ಡಿಆಲ್ಮೇಡಾ ಸ್ವಾಗತಿಸಿದರು. ಪ್ರಾರ್ಥನ ಪ್ರೇರಕಿ ಜೂಲಿಯಾನ ಮಿನೇಜೆಸ್ ಧನ್ಯವಾದಗಳನ್ನು ಅರ್ಪಿಸಿದರು.