

ಕುಂದಾಪುರ; ಭಯ, ಭಕ್ತಿ ಮತ್ತು ಶ್ರದ್ಧೆಯ ಪ್ರತೀಕವಾಗಿ ನಮ್ಮ ಕರಾವಳಿಯಲ್ಲಿ ಆರಾಧಿಸಲ್ಪಡುವ ಪ್ರಕೃತಿ ನಾಗ ದೇವರ ಕಲ್ಪನೆಯಡಿಯಲ್ಲಿ ರಚನೆಗೊಂಡ “ನಾಗಬನ” ಎಂಬ ಶೀರ್ಷಿಕೆಯಡಿ Save Nature ಎಂಬ ಸಂದೇಶವನ್ನು ಸಾರುವ ವಿಶೇಷ ಕಲಾಕೃತಿ ಕೋಟೇಶ್ವರದ ಹಳೆ ಅಳಿವೆ ಕಡಲ ಕಿನಾರೆಯಲ್ಲಿ ಆಕರ್ಷಿಸಲ್ಪಟ್ಟಿತು.
ಕಲಾವಿದ್ಯಾರ್ಥಿಗಳಾದ ಅದ್ವಿತ್ ಶಂಕರ್ , ಸಾತ್ವಿಕ್ ಕೆ.ಆರ್, ಪ್ರಣತಿ ಪ್ರಶಾಂತ್ ಭಟ್, ಸಮನ್ವಿ, ಅದ್ವಿತ್ ಕುಮಾರ್ ಆರ್. ಸುನೇರಿ ಹೆಗ್ಡೆ, ವಿದ್ಯಾ ರಾಣಿ ಕೇಂದ್ರದ ಮಾರ್ಗದರ್ಶಕ ಹರೀಶ್ ಸಾಗಾ ತರಬೇತಿಯಲ್ಲಿ 12 ಅಡಿ ಅಗಲದ ವಿಸ್ತೀರ್ಣದಲ್ಲಿ ರಚಿಸಲ್ಪಟ್ಟಿದೆ.


