

ಕುಂದಾಪುರ, ಮಾರ್ಚ್ 12; ಕುಂದಾಪುರ ರೋಜರಿ ಮಾತಾ ಚರ್ಚಿನಲ್ಲಿ ಸುಪ್ರಸಿದ್ದ ಪ್ರವಚನಗಾರ, ಧರ್ಮೋಪದೇಶಕ ಧರ್ಮಗುರು ವಂ। ಫ್ರಾಂಕ್ಲಿನ್ ಡಿಸೋಜಾ ಇವರ ಪಂಗಡದಿಂದ ಮೂರು ದಿನಗಳ ಧ್ಯಾನಕೂಟ ನಡೆಯಿತು. ಮಾರ್ಚ್ 9, 2026 ರಂದು ಆರಂಭವಾದ ಧ್ಯಾನಕೂಟಕ್ಕೆ ಚರ್ಚಿನ ಧರ್ಮಗುರು ಅ।ವಂ।ಪೌಲ್ ರೇಗೊ ಸ್ವಾಗತಿಸಿದರು.
ಮೊದಲ ದಿನದ ಧ್ಯಾನಕೂಟದಲ್ಲಿ “ದೇವರ ವಾಕ್ಯವು ಗುಣಪಡಿಸುವಿಕೆಯನ್ನು ತರುತ್ತದೆ” ಪವಿತ್ರ ಪುಸ್ತಕದ ಗ್ರಂಥದ ವಾಕ್ಯಗಳ ಮೇಲೆ ಪ್ರವಚನ ನೀಡಲಾಯಿತು. ದೇವರ ವಾಕ್ಯದ ಶಕ್ತಿ ಮತ್ತು ಪ್ರಾಮುಖ್ಯತೆಯನ್ನು ಕೇಂದ್ರೀಕರಿಸುತ್ತದೆ, ಜೊತೆಗೆ ಪಶ್ಚಾತ್ತಾಪ ಮತ್ತು ಅದರ ಮೂಲಕ ಗುಣಪಡಿಸುವಿಕೆಯನ್ನು ಕೇಂದ್ರೀಕರಿಸುತ್ತದೆ ಎಂದು ತಿಳಿಸಿದರು. ಆರಾಧನೆ ಮತ್ತು ಗುಣಪಡಿಸುವ ಪ್ರಾರ್ಥನೆಗಳು ನಡೆದವು. ಅಸೌಕ್ಯದವರ ಮೇಲೆ ತಲೆ ಮೇಲೆ ಕೈಯಿಟ್ಟು ಪ್ರಾರ್ಥಿಸಲಾಯಿತು.
ಎರಡನೇ ದಿನದ ಧ್ಯಾನಕೂಟದಲ್ಲಿ ಪಶ್ಚಾತ್ತಾಪವು ಗುಣಪಡಿಸುವಿಕೆಗೆ ಕಾರಣವಾಗುತ್ತದೆ ಎಂಬ ವಿಷಯದ ಕುರಿತು ಪ್ರವಚನ ನೀಡಿದರು. ಉತ್ತಮ ತಪ್ಪೊಪ್ಪಿಗೆಗೆ ತಯಾರಿಯಾಗಿ ನೆನಪಿಸಿಕೊಳ್ಳುವುದು, ಪಶ್ಚಾತ್ತಾಪಪಡುವುದು, ಸಮನ್ವಯಗೊಳಿಸುವುದು, ನವೀಕರಿಸುವುದು ಮತ್ತು ಸಂತೋಷಪಡುವುದು, ಪವಿತ್ರ ಪುಸ್ತಕದ ಗ್ರಂಥದ ವಾಕ್ಯಗಳ ಮೇಲೆ ಒತ್ತಿ ಹೇಳಿದರು. ಪಶ್ಚಾತ್ತಾಪದ ಮೇಲೆ ಕೇಂದ್ರೀಕರಿಸುವ ಸ್ತೋತ್ರವನ್ನು ಹಾಡಲಾಯಿತು.
ಮೂರನೇ ದಿನದಲ್ಲಿ ದೇವರ ಸ್ತುತಿ ಮತ್ತು ಆರಾಧನೆ ನಡೆಯಿತು. “ಬೈಬಲ್ನ ಆಶೀರ್ವಾದಗಳನ್ನು ಹೇಗೆ ಸಕ್ರಿಯಗೊಳಿಸುವುದು ದೇವರು, ದಶಾಂಶಗಳು, ಪೋಷಕರು ಮತ್ತು ದಂಪತಿಗಳ ಕುರಿತು ಮಾತನಾಡಿದರು. ಯುವಜನರಿಗಾಗಿ ಮತ್ತು ಸಣ್ಣ ಮಕ್ಕಳಿಗಾಗಿ ವಿಶೇಷ ಪ್ರಾರ್ಥನೆ ನಡೆಸಲಾಯಿತು. ಪವಿತ್ರ ಜಲದಿಂದ ಪ್ರೋಕ್ಷಣೆ ಮಾಡಾಲಾಯಿತು. ಪ್ರತಿ ದಿನ ಧ್ಯಾನಪಂಗಡದ ಸಹೋದರ ವಿಲಿಯಮ್ ಡಿ’ಸೋಜಾ ಸಂಗೀತ ಮತ್ತು ಭಕ್ತಿ ಗೀತೆಗಳ ಜೊತೆ ಸ್ತುತಿ ಮತ್ತು ಆರಾಧನೆಯನ್ನು ನೇರವೆರಿಸಿ ಧ್ಯಾನ ಕೂಟದ ಯಶಸ್ವಿಗೆ ಸಹಕರಿಸಿದರು. ಹಾಗೇಯೆ ಚರ್ಚಿನ ಧರ್ಮಗುರು ಅ।ವಂ।ಪೌಲ್ ರೇಗೊ ಪವಿತ್ರ ಬಲಿದಾನದಲ್ಲಿ ಭಾಗವಹಿಸಿ, ಧ್ಯಾನಕೂಟಕ್ಕೆ ಸಹಕರಿಸಿ, ಪಂಗಡಕ್ಕೆ ಧನ್ಯವಾದ ಅರ್ಪಿಸಿದರು. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಧ್ಯಾನಕೂಟ ಯಶಸ್ವಿಯಾಗಿ ಸಂಪನ್ನವಾಯಿತು.

































