

ಶ್ರೀನಿವಾಸಪುರ : ಪ್ರತಿ ವರ್ಷ ಮುಂಗಾರು ಮಳೆ ಸೃಷ್ಠಿಸುವ ಅವಾಂತರಗಳನ್ನು ಸಮಪರ್ಕವಾಗಿ ನಿಭಾಯಿಸುವಲ್ಲಿ ಕಂದಾಯ ಅಧಿಕಾರಿಗಳು ವಿಫಲವಾಗಿದ್ದರೆ ಬಲಾಢ್ಯರು ಒತ್ತುವರಿ ಮಾಡಿಕೊಂಡಿರುವ ಸರ್ಕಾರಿ ರಾಜಕಾಲುವೆ ಚರಂಡಿ , ಬಂಡಿ ದಾರಿಗಳನ್ನು ಅಭಿವೃದ್ಧಿ ಪಡಿಸದ ಅಧಿಕಾರಿಗಳ ನಿರ್ಲಕ್ಯದಿಂದ ಕೆರೆಗೆ ಹರಿಯಬೇಕಾದ ಮಳೆನೀರು ರಸ್ತೆಯ ಮೇಲೆ ಹರಿದು ರೈತರ ಬೆಳೆ ಹಾಗೂ ಬಡವರ ಮನೆಗಳಿಗೆ ನುಗ್ಗಿ ಅವಾಂತರಗಳನ್ನು ಸೃಷ್ಠಿಸುತ್ತಿದ್ದರು ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸದೇ ನಿರ್ಲಕ್ಷ್ಯ ವಹಿಸುತ್ತಿರುವ ಅಧಿಕಾರಿಗಳಿಂದ ಬಡವರ ಬದಕು ಬೀದಿಗೆ ಬೀಳುತ್ತಿದ್ದೇ ಎಂದು ರೈತ ಸಂಘದ ರಾಜ್ಯ ಸಂಚಾಲಕ ಬಂಗವಾದಿ ನಾಗರಾಜ್ಗೌಡ ಅಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ರವರು ಒಂದು ವಾರದೊಳಗೆ ಜಿಲ್ಲಾಧ್ಯಂತ ಒತ್ತುವಾರಿಯಾಗಿರುವ ರಾಜಕಾಲುವೆಗಳು ಚರಂಡಿಗಳಿಗೆ ಮುಕ್ತಿ ನೀಡದೆ ಇದ್ದರೆ ಜಿಲ್ಲೆಯ ಎಲ್ಲಾ ಶಾಸಕರ ಕಛೇರಿಗಳ ಮುಂದೆ ಕಾಂಗ್ರೆಸ್ ಸಸ್ಯಗಳನ್ನು ನಾಟಿ ಮಾಡುವ ಹೋರಾಟ ಹಮ್ಮಿಕೊಳ್ಳಲಾಗುವುದೆಂದು ಎಚ್ಚರಿಕೆ ನೀಡಿದರು.
ಜಿಲ್ಲಾದ್ಯಾಂತ ಕಳೆದು ಹೋಗಿರುವ ರಾಜಕಾಲುವೆ ಚರಂಡಿಗಳು ಹಾಗೂ ಸ್ಮಶಾನ ಬಂಡಿರಸ್ತೆಗಳನ್ನು ಹುಡಿಕಿ ಕೊಡಲು ವಿಶೇಷ ತಂಡ ರಚನೆ ಮಾಡಿ ಮುಂಗಾರು ಮಳೆಯಿಂದ ರೈತರ ಬೆಳೆ ಜನಸಾಮಾನ್ಯ ಬದುಕನ್ನು ರಕ್ಷಣೆ ಮಾಡಬೇಕೆಂದು ಪತ್ರಿಕಾ ಹೇಳಿಕೆ ಮುಖಾಂತರ ಮಾನ್ಯ ಜಿಲ್ಲಾಧಿಕಾರಿರವರನ್ನ ಒತ್ತಾಯಿಸಿದರು.
ತಾಲ್ಲೂಕು ಅಧ್ಯಕ್ಷ ತೆರ್ನಹಳ್ಳಿ ಅಂಜಿನಪ್ಪ ಮಾತನಾಡಿ ಮುಂಗಾರು ಮಳೆ ಹೊರ ರಾಜ್ಯಗಳಲ್ಲಿ ಸೃಷ್ಠಿಸುತ್ತಿರುವ ಅವಾಂತರಗಳು ಮಾಧ್ಯಮಗಳಲ್ಲಿ ಅಧಿಕಾರಿಗಳು ವಿಕ್ಷಣೆ ಮಾಡುತ್ತಿದ್ದರು ಜಿಲ್ಲೆಯ ಸಮಸ್ಯೆಗಳನ್ನು ಗಂಭಿರವಾಗಿ ಪರಿಗಣಿಸುತ್ತಿಲ್ಲ ಇತ್ತೀಚಿಗೆ ಸುರಿಯುತ್ತಿರುವ ಮಳೆ ನೀರಿನಿಂದ ರಸ್ತೆಗಳು ಕರೆಕುಂಟೆಗಳಾಗಿ ಕಲುಷಿತ ನೀರು ಬಡವರ ಮನೆಗೆ ನುಗ್ಗಿ ಹಾವು ಚೇಳುಗಳು ವಾಸಮಾಡಬೇಕಾದ ಮಟ್ಟಕ್ಕೆ ಬಡವರ ಬದಕನ್ನು ಬೀದಿಗೆ ತಂದು ಅಧಿಕಾರಿಗಳು ನಿಲ್ಲಿಸಿದ್ದಾರೆಂದು ಕೀಡಿಕಾರಿದರು.
ಮುಂಗಾರು ಮಳೆ ಸೃಷ್ಠಿಸುತ್ತಿರುವ ಅವಾಂತರಗಳನ್ನು ತಪ್ಪಿಸಲು ವಿಶೇಷ ತಂಡ ರಚನೆ ಮಾಡಿ ಶೀತಲಗೊಂಡಿರುವ ಕೆರೆ ಕಟ್ಟೆಗಳನ್ನು ಅಭಿವೃದ್ಧಿ ಮಾಡಿ ಗಿಡ ಗಂಟೆಗಳಿಂದ ತುಂಬಿರುವ ರಾಜ ಕಾಲುವೆಗಳನ್ನು ಅಭಿವೃದ್ಧಿಪಡಿಸಿ ಬಡವರ ಬದುಕು ರೈತರ ಬೆಳೆಯನ್ನು ರಕ್ಷಣೆ ಮಾಡಬೇಕು ಇಲ್ಲಾವಾದರೆ ಕಾಂಗ್ರೆಸ್ ಸಸ್ಯಗಳ ಸಮೇತ ಜನಪ್ರತಿನಿಧಿಗಳ ಮನೆ ಕಛೇರಿ ಮುಂದೆ ನಾಟಿ ಮಾಡುವ ಹೋರಾಟ ಹಮ್ಮಿಕೊಳ್ಳುವ ಎಚ್ಚರಿಕೆಯನ್ನು ಸಭೆಯಲ್ಲಿ ನೀಡಿದರು.
ಈ ಸಭೆಯಲ್ಲಿ ರಾಜ್ಯ ಉಪಾದ್ಯಕ್ಷ ಕೆ. ನಾರಾಯಣಗೌಡ ಜಿಲ್ಲಾಧಕ್ಷ ಈಕಂಬಳ್ಳಿ ಮಂಜುನಾಥ,ಅಲವಾಟ ಶಿವು, ಮಂಗಸಂದ್ರ ತಿಮ್ಮಣ್ಣ, ಸುಪ್ರಿಂ ಚಲ, ರಾಜೇಂದ್ರ ಗೌಡ, ಮುಂತಾದವರು ಇದ್ದರು.



