

ಕುಂದಾಪುರ, ಜೂ.8; ಕುಂದಾಪುರ ರೋಜರಿ ಮಾತಾ ಚರ್ಚಿನಲ್ಲಿ ಕುಟುಂಬ ಆಯೋಗದ ಸಹಯೋಗದಲ್ಲಿ ತಾಂಯಂದಿರ ಮಹೋತ್ಸವವನ್ನು ಜೂ.8 ರಂದು ಆಚರಿಸಲಾಯಿತು. ಅಂದು ದಿವ್ಯ ಬಲಿಪೂಜೆಯನ್ನು ರೋಜರಿ ಮಾತಾ ಚರ್ಚಿನ ದರ್ಮಗುರು ಅತೀ ವಂದನೀಯ ಪೌಲ್ ರೇಗೊ ನೆರವೇರಿಸಿ “ತಾಯ್ತನವು ಒಂದು ಅಮೂಲ್ಯ ಭಾಗ್ಯ, ಅದು ಎಲ್ಲರಿಗೂ ಸಿಗುವುದಿಲ್ಲ, ಅಂತಹಾ ಭಾಗ್ಯ ದೊರಕದಿದ್ದರಿಗಾಗಿ ನಾನು ಸದಾ ಪ್ರಾರ್ಥಿಸುತ್ತೇನೆ, ಅವರ ದುಖ ದುಮ್ಮಾನಕ್ಕೆ ನಾವು ಪ್ರಾರ್ಥಿಸೋಣ, ಒರ್ವ ತಾಯಿ ಮಹಾನ ತ್ಯಾಗಿ, ಅವಳ ಪ್ರೀತಿಗೆ ಕೊನೆಯಿಲ್ಲ, ಊಟ ತಿಂಡಿ ಅವಳಿಗೆ ಇಲ್ಲದಿದ್ದರೂ ಮಕ್ಕಳಿಗೆ ಗಂಡನಿಗೆ ಉಣಬಡಿಸುತ್ತಾಳೆ, ತಾಯಿ ಯಾವ ತ್ಯಾಗಕ್ಕೂ ಸಿದ್ದ’ ಎಂದು ತಾಯ್ತನದ ಹೆಗ್ಗಳಿಗೆ ಬಗ್ಗೆ ತಿಳಿಸಿದರು. ಅಂದಿನ ದೇವಸ್ತೂತಿ ಪ್ರಾರ್ಥನೆಗಳನ್ನು ತಾಯಂದಿರು ನೆಡೆಸಿಕೊಟ್ಟರು.
ನಂತರ ನೆಡದ ಸಭಾಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಸಮಾಜ ಸೇವಕಿ, ರಾಜಕೀಯ ಮುಂದಾಳು ಜೂಡಿತ್ ಮೆಂಡೊನ್ಸಾ ತಾಯಂದಿರಿಗೆ ಬೇಕಾದ ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು, ‘ನಮ್ಮ ಮಕ್ಕಳಿಗೆ ನಾವು ಏನನ್ನು ಕಲಿಸಿದ್ದೆವೇಯೊ ಅದಕ್ಕೆ ತಕ್ಕನಂತೆ ಪ್ರತಿಫಲ ಸಿಗುತ್ತೆ. ನಾವು ಗೀಡಗಳಿಗೆ ಯಾವ ವಿಧದ ಗೊಬ್ಬರ ಹಾಕಿದ್ದೇವೋ ಅದರಂತೆ ಫಲ ಸಿಗುತ್ತದೆ. ಮಕ್ಕಳು ಬೆಳೆದ ನಂತರ ತಾಯಂದಿರು, ತಮ್ಮ ಕಾಳಜಿಯನ್ನು ತಾವೇ ಮಾಡಿಕೊಳ್ಳಬೇಕು, ಉತ್ತಮ ಆಹಾರ, ವ್ಯಾಯಮದಿಂದ ನಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕು’ ಎಂದು ಹೇಳಿದರು. ಅತೀ ಹಿರಿಯ ತಾಂಯಂದಿರನ್ನು ಗೌರವಿಸಲಾಯಿತು. ತಾಂಯಂದಿರ ಗುಂಪುಗಳಾನ್ನಾಗಿ ವಿಂಗಡಿಸಿ ವಿವಿಧ ಮನೋರಂಜನ ಆಟಗಳನ್ನು ಆಡಿಸಲಾಯಿತು. ಹಾಡುಗಳನ್ನು ಹಾಡಿಸಲಾಯಿತು. ಕಾರ್ಯಕ್ರಮದಲ್ಲಿ ಪಾಲನಮಂಡಳಿ ಉಪಾಧ್ಯಕ್ಷೆ ಶಾಲೆಟ್ ರೆಬೆಲ್ಲೊ, ಆಯೋಗಗಳ ಸಂಯೋಜಕಿ ಪ್ರೇಮಾ ಡಿಕುನ್ಹಾ ಇತರರು ಉಪಸ್ಥಿತರಿದ್ದರು.
ಮುಖ್ಯ ಅತಿಥಿಯನ್ನು ಪಾಲನಮಂಡಳಿ ಕಾರ್ಯದರ್ಶಿ ಆಶಾ ಕರ್ವಾಲ್ಲೊ ಪರಿಚಯಿಸಿದರು. ಕುಟುಂಬ ಆಯೋಗದ ಸಂಚಾಲಕಿ ಜೂಲಿಯಾನ ಮಿನೇಜೆಸ್ ಸ್ವಾಗತಿಸಿದರು. ಡೆಫೊಡೀಲ್ ಕ್ರಾಸ್ಟೊ ವಂದಿಸಿದರು. ಶೋಭ ವಾಜ್ ನಿರೂಪಿಸಿದರು

























































