

ಶ್ರೀನಿವಾಸಪುರ : ಇತ್ತೀಚಿನ ದಿನಗಳಲ್ಲಿ ಪರಿಸರದಲ್ಲಿ ನಾವು ಉಸಿರಾಡಲು ಶುದ್ದಗಾಳಿ ಇಲ್ಲದೆ ರಾಸಾಯನಿಕ ವಿಷ ಮಿಶ್ರಿತ ಗಾಳಿಯನ್ನು ಉಸಿರಾಡುವಂತಾಗಿದೆ . ಎಂದು ಪುರಸಭೆ ಅಧ್ಯಕ್ಷ ಬಿ.ಆರ್.ಭಾಸ್ಕರ್ ಅಭಿಪ್ರಾಯಪಟ್ಟರು.
ಪಟ್ಟಣದ ಪುರಸಭೆವತಿಯಿಂದ ಗುರುವಾರ ಅಂತರಾಷ್ಟ್ರೀಯ ಪರಿಸರ ದಿನಾಚರಣೆ ಅಂಗವಾಗಿ ಪರಿಸರ ಉಳಿಸಲು ಜಾಗೃತಿ ಜಾಥ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಇವುಗಳನ್ನು ತಡೆಗಟ್ಟಲು ಪ್ರತಿ ಮನೆಗಳ ಸುತ್ತಮುತ್ತ ಮಗುವಿಗೊಂದು ಸಸಿಯಂತೆ ನೆಟ್ಟು, ಮರಗಳಾಗಿಸಿ, ವನವಾಗಿಸುವುದರೊಂದಿಗೆ ಮುಂದಿನ ಪೀಳಿಗೆಗಾಗಿ ಶುದ್ದವಾದ ಗಾಳಿಯನ್ನು ನೀಡುವುದು ನಮ್ಮಲ್ಲೆರ ಆದ್ಯ ಕರ್ತವ್ಯವೆಂದರು .
ಯಾವುದೇ ಕಾರಣಕ್ಕೂ ಪ್ಲಾಸ್ಟಿಕ್ ಬಳಸುವುದು ನಿಷೇದ ಮಾಡಬೇಕು. ಪರಿಸರ ಉಳಿಸುವ ವಿಚಾರವಾಗಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ, ನಿಮ್ಮ ಪೋಷಕರಲ್ಲಿ ಪ್ಲಾಸ್ಟಿಕ್ನ ದುಷ್ಪಾರಿಣಾಮಗಳ ಬಗ್ಗೆ ಅರಿವು ಮೂಡಿಸಿ ಎಂದರು.
ಕೋಚಿಮುಲ್ ಮಾಜಿ ಅಧ್ಯಕ್ಷ ಎನ್.ಜಿ.ಬ್ಯಾಟಪ್ಪ ಮಾತನಾಡಿ ಬೆಂಗಳೂರು, ಕೋಲಾರದಿಂದ ಪಟ್ಟಣಕ್ಕೆ ಬರುವವರು ಬಂದ ತಕ್ಷಣ ಪಟ್ಟಣದ ಸೌಂದರ್ಯ ವನ್ನು ನೋಡುತ್ತಾರೆ ಇದರಿಂದ ಹೊರಗಿನವರು ಪಟ್ಟಣದಲ್ಲಿ ಸೌಂದರ್ಯಕ್ಕೆ ಮನಸೋತು ಪಟ್ಟಣದ ಬಗ್ಗೆ ಒಳ್ಳೇಯ ಮಾತಗಳನ್ನು ಆಡುತ್ತಾರೆ ಎಂದರು.
ಪುರಸಭೆ ಉಪಾಧ್ಯಕ್ಷೆ ಸುನಿತ ಮಾತನಾಡಿ ಇಂದಿನ ದಿನಗಳಲ್ಲಿ ಪ್ರಕೃತಿಯ ಮಹತ್ವದ ಅರಿವು ನಮಗೆ ಹೆಚ್ಚು ಹೆಚ್ಚು ಅರ್ಥವಾಗುತ್ತಿದೆ. ಹಾಗಾಗಿ ನಾವು ಇತರೆ ಜನರಲ್ಲಿ ಇನ್ನಷ್ಟು ಜಾಗೃತಿ ಮೂಡಿಸುವ ಅಗತ್ಯವಿದೆ. ನಮ್ಮ ಮಕ್ಕಳು ಮುಂದಿನ ಪೀಳಿಗೆಗೆ ಪರಿಸರವನ್ನು ರಕ್ಷಿಸಿಕೊಳ್ಳಬೇಕಾದವರು. ಅವರಿಗೂ ಪರಿಸರದ ಕಾಳಜಿಯನ್ನು ಅರ್ಥ ಮಾಡಿಸುವ ಅಗತ್ಯ ಹೆಚ್ಚಿದೆ ಎಂದರು.
ಜಾಗೃತಿ ಜಾಥ ಕಾರ್ಯಕ್ರಮದಲ್ಲಿ ಸರ್ಕಾರಿ ಹಾಗು ಖಾಸಗಿ ಶಾಲೆಗಳ ವಿದ್ಯಾರ್ಥಿಗಳು ಪಾಲ್ಗುಂಡಿದ್ದರು. ಮುಖ್ಯಾಧಿಕಾರಿ ವಿ.ನಾಗರಾಜ್, ಸದಸ್ಯರಾದ ಸಂಜಯ್ಸಿಂಗ್, ಎನ್ಎನ್ಆರ್ ನಾಗರಾಜ್, ಆನಂದಗೌಡ, ಜಯಲಕ್ಷ್ಮಿ, ಕೆ ಅನೀಸ್ ಅಹ್ಮದ್, ನಾಮನಿದೇರ್ಶಕರಾದ ಹೇಮಂತ್, ಶಿವರಾಜ್, ನರಸಿಂಹಮೂರ್ತಿ, ವ್ಯವಸ್ಥಾಪಕ ನವೀನ್ಚಂದ್ರ, ಕಂದಾಯ ಅಧಿಕಾರಿ ಎನ್.ಶಂಕರ್, ಪರಿಸರ ಅಬಿಯಂತರ ಲಕ್ಷ್ಮೀಶ್, ಆರೋಗ್ಯಾಧಿಕಾರಿ ಸಂತೋಷ, ಸಿಬ್ಬಂದಿಗಳಾದ ಪ್ರತಾಪ್, ಸುರೇಶ್, ಶಾರದ , ಭಾಗ್ಯಮ್ಮ, ಗೌತಮ್, ಚಂದು, ನಾಗೇಶ್, ಸತೀಶ್ ಇದ್ದರು.
