

ಶ್ರೀನಿವಾಸಪುರ : ಸಂತೆ ಎಂಬುದು ಕೊಂಡುಕೊಳ್ಳುವ ಸ್ಥಳವಾದರೂ ಅದು ಕೇವಲ ವ್ಯಾಪಾರ ವ್ಯವಹಾರಕ್ಕೆಷ್ಟೇ ಸೀಮಿತವಾಗಿರಲಿಲ್ಲ . ಸಂತೆ ಎಂಬ ವ್ಯಾವಹಾರಿಕ ಜಗತ್ತಿನ ನಡುವೆ ಉತ್ತಮವಾದ ಸಂಬಂದಗಳು ಮಾನವೀಯ ಮೌಲ್ಯಗಳು ಸಹ ಉಸಿರಾಡುತ್ತಿರುತ್ತವೆ ಎಂದು ಪ್ರಾಂಶುಪಾಲ ಕೆ.ಎನ್.ರಾಮಾಂಜನೇಯ ಅಭಿಪ್ರಾಯಪಟ್ಟರು.
ಪಟ್ಟಣದ ಸಾಯಿವಿಜಯ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ವಿಭಾಗದ ವತಿಯಿಂದ ಮಂಗಳವಾರ ನಡೆದ ಮೆಗಾ ಸೇಲ್ಸ್ ಡೇ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ವಿದ್ಯಾರ್ಥಿಗಳು ಪಠ್ಯದೊಂದಿಗೆ ಯಾವ ರೀತಿಯಾದ ಸ್ವಾಲಂಬಿ ಜೀವನ ನಡೆಸಬಹುದು ಎಂಬುದಕ್ಕೆ ಸೇಲ್ಸ್ಡೇ ಪ್ರಾಯೋಗಿಕವಾಗಿ ಅನುಭವ ಸಿಗುತ್ತದೆ. ಕಾಲೇಜು ಕಾರಿಡಾರ್ ಎಂದಿನಂತೆ ವಿದ್ಯಾರ್ಥಿಗಳ ಹರಟೆ ಸೀಮಿತವಾಗದೆ, ಅದರ ತುಂಬೆಲ್ಲಾ ಬಾಯಲ್ಲಿ ನೀರೂರಿಸುವ ತಿಂಡಿ ತಿನುಸುಗಳೇ , ವಿದ್ಯಾರ್ಥಿ ಜೀವನದಲ್ಲಿ ಪಠ್ಯ ಜತೆಗೆ ಇಂತಹ ಪಠ್ಯೇತರ ಚಟುವಟಿಕೆಗಳು ಅವಿಸ್ಮರಣೀಯಾಗಿತ್ತು.
ಉಪನ್ಯಾಸಕರಾದ ರೇವಣ್ಣ.ಜೆ, ವೆಂಕಟರಮಣಾರೆಡ್ಡಿ, ಹರೀಶ್ಕುಮಾರ್, ಅಭಿಷೇಕ್, ರಘುಪತಿ, ಸುಪ್ರಜಾ, ಬಿ.ರಮೇಶ್, ನರೇಶ್, ಸುದಾ, ಮಾದವಿಲತಾ ನಾಗಮಣಿ ಇದ್ದರು.