
ಮೂಡ್ಲಕಟ್ಟೆ ತಾಂತ್ರಿಕ ಮಹಾವಿದ್ಯಾಲಯ ಆಯೋಜಿಸಿದ ರಾಜ್ಯಮಟ್ಟದ ಎರಡು ದಿನಗಳ ಅಂತರ್ ಕಾಲೇಜು ತಾಂತ್ರಿಕ ಮತ್ತು ಸಾಂಸ್ಕೃತಿಕ ಸ್ಪರ್ಧಾಕೂಟ ಬಹಳ ವಿಜೃಂಭಣೆಯಿಂದ ಮುಕ್ತಾಯ ಗೊಂಡಿತು. ಐ ಎಂ ಜೆ ವಿದ್ಯಾಸಂಸ್ಥೆಗಳ ಛೇರ್ಮನ್ ರಾದ ಶ್ರೀಯುತ ಸಿದ್ದಾರ್ಥ ಜೆ ಶೆಟ್ಟಿ ಯವರು ಟ್ರೋಫಿ ಬಿಡುಗಡೆಮಾಡಿ ಚಾಲನೆ ಕೊಟ್ಟ ಈ ಸ್ಪರ್ಧಾಕೂಟದಲ್ಲಿ ರಾಜ್ಯದ ವಿವಿದ ಪದವಿ ಕಾಲೇಜುಗಳ ವಿದ್ಯಾರ್ಥಿಗಳು ತಾಂತ್ರಿಕ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ತಮ್ಮ ಪ್ರತಿಭೆಯನ್ನ ಪ್ರದರ್ಶಿಸಿ ಎಲ್ಲಾ ಪ್ರೇಕ್ಷಕರನ್ನು ರಂಜಿಸಿದರು. ಎಲ್ಲಾ ವಿಭಾಗದ ವಿಜೇತರಿಗೆ ನಗದು ಬಹುಮಾನದ ಜೊತೆ […]

ಕೋಲಾರ,ಏ.04: ಕೆಜಿಎಫ್ನ ಡಾ.ತಿಮ್ಮಯ್ಯ ತಾಂತ್ರಿಕ ವಿದ್ಯಾಲಯದಲ್ಲಿ 2025-26ನೇ ಸಾಲಿನ ಸಿಇಟಿ ಪರೀಕ್ಷೆಗೆ ಪಿಯುಸಿ ವಿದ್ಯಾರ್ಥಿಗಳನ್ನು ಸನ್ನದ್ದಗೊಳಿಸಲು ಉಚಿತ ಅಣುಕು ಸಿಇಟಿ ಪರೀಕ್ಷೆಯನ್ನು ಏಫ್ರಿಲ್ 6 ರ ಭಾನುವಾರ ಬೆಳಿಗ್ಗೆ 10 ರಿಂದ 1 ಗಂಟೆಯವರೆಗೆ ಹಮ್ಮಿಕೊಳ್ಳಲಾಗುವುದೆಂದು ಪ್ರಾಂಶುಪಾಲ ಸೈಯದ್ ಅರಿಫ್ ತಿಳಿಸಿದ್ದಾರೆ.ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಎಲ್ಲ ತಾಲೂಕುಗಳಿಂದ ಬರುವ ವಿದ್ಯಾರ್ಥಿಗಳು ಅಣುಕು ಸಿಇಟಿ ಟೆಸ್ಟ್ಗೆ ತಮ್ಮ ಹೆಸರುಗಳನ್ನು ನೊಂದಯಿಸಿಕೊಂಡು ಭಾನುವಾರ ಪರೀಕ್ಷೆ ಬರೆಯಲು ಅನ್ಲೈನ್ ಮೂಲಕ ತಮ್ಮ ಹೆಸರುಗಳನ್ನು ಕಾಲೇಜಿನ ತಿತಿತಿ.ಜಡಿಣಣiಣ.eಜu.iಟಿ ವೆಬ್ಸೈಟ್ ಅಥವಾ ಕಾಲೇಜಿನಲ್ಲಿ […]

ಶ್ರೀನಿವಾಸಪುರ.ಏ.4. ಬೆಲೆ ಕುಸಿತದಿಂದ ಕಂಗಾಲಾಗಿರುವ ಟೊಮೇಟೊ ಆಲೂಗಡ್ಡೆ ಪ್ರತಿ ಕೆಜಿಗೆ 10 ರೂ ಬೆಂಬಲ ಬೆಲೆ ಘೋಷಣೆ ಮಾಡಿ ಸಂಕಷ್ಟದಲ್ಲಿರುವ ರೈತರ ರಕ್ಷಣೆ ಮಾಡಬೇಕೆಂದು ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಪತ್ರಿಕಾ ಹೇಳಿಕೆ ಮುಖಾಂತರ ತೋಟಗಾರಿಕೆ ಮಂತ್ರಿಗಳನ್ನು ಒತ್ತಾಯಿಸಿದರು.ವ್ಯವಸಾಯ ಮನೆ ಮಕ್ಕಳೆಲ್ಲಾ ದುಡಿದು ದುಡಿದು ಉಪವಾಸ ಸಾಯ ಎಂಬ ಗಾಧೆಯಂತೆ ರೈತನ ಬದುಕು ನೀರಿನ ಮೇಲೆ ಗುಳ್ಳೆ ಇದ್ದಂತಾಗಿದೆ. ಬೆಳೆ ಇದ್ದರೆ ಬೆಲೆಯಿಲ್ಲ, ಬೆಲೆಯಿದ್ದರೆ ಬೆಳೆಯಿಲ್ಲದಂತಾಗಿದೆ. ಆದರೂ ಸರಕಾರ ರೈತರ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಕೃಷಿ ಆಧಾರಿತ […]

ಬ್ರಹ್ಮಾವರ; ಕರ್ನಾಟಕದ ಹೋಲಿ ಟ್ರಿನಿಟಿ ಪ್ರಾಂತ್ಯದ ಕ್ಯಾಪುಚಿನ್ಗಳು ಏಪ್ರಿಲ್ 3, 2025 ರಂದು ಬ್ರಹ್ಮಾವರದ ಹೋಲಿ ಫ್ಯಾಮಿಲಿ ಚರ್ಚ್ನಲ್ಲಿ ದೇವರ ಸೇವಕ ಫಾದರ್ ಆಲ್ಫ್ರೆಡ್ ರೋಚ್, OFM ಕಾಪುಚಿನ್ ಅವರ ಜನ್ಮ ಶತಮಾನೋತ್ಸವದ ಸಮಾರೋಪ ಸಮಾರಂಭವನ್ನು ಆಯೋಜಿಸಿದ್ದರು. ಈ ಗಂಭೀರ ಸಂದರ್ಭದಲ್ಲಿ ವಿವಿಧ ಪ್ಯಾರಿಷ್ಗಳಿಂದ ಬಂದ ಸನ್ಯಾಸಿಗಳು, ಪಾದ್ರಿಗಳು, ಧಾರ್ಮಿಕ ಮತ್ತು ನಿಷ್ಠಾವಂತರು ಭಾಗವಹಿಸಿ, ಫಾದರ್ ಆಲ್ಫ್ರೆಡ್ ರೋಚ್ ಅವರ ಜೀವನ ಮತ್ತು ಪರಂಪರೆಗೆ ಗೌರವ ಸಲ್ಲಿಸಿದರು. ಕರ್ನಾಟಕದ ಹೋಲಿ ಟ್ರಿನಿಟಿ ಪ್ರಾಂತ್ಯದ ಪ್ರಾಂತೀಯ OFM ಕಾಪುಚಿನ್ […]

ಏಪ್ರಿಲ್ 03, 2025 ರಂದು MRTC ಯಲ್ಲಿ ಅಗತ್ಯವಿರುವ ಮಕ್ಕಳು, ಪೋಷಕರು ಮತ್ತು ಸಾರ್ವಜನಿಕರಿಗಾಗಿ ಫಿಸಿಯೋಥೆರಪಿ, ಸ್ಪೀಚ್ ಥೆರಪಿ ಮತ್ತು ಕೌನ್ಸೆಲಿಂಗ್ ಶಿಬಿರವನ್ನು ನಡೆಸಲಾಯಿತು. ಸಂಸ್ಥಾಪಕ ವ್ಯವಸ್ಥಾಪಕ ಟ್ರಸ್ಟಿ ಡಾ. ಎಡ್ವರ್ಡ್ ಲೋಬೊ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅಗತ್ಯವಿರುವ ಮಕ್ಕಳಿಗೆ ಮನೆ ಬಾಗಿಲಿಗೆ ಅಗತ್ಯವಿರುವ ಚಿಕಿತ್ಸೆ ಮತ್ತು ಚಿಕಿತ್ಸೆಯನ್ನು ಸಾಧ್ಯವಾಗಿಸುವಲ್ಲಿ ಕೇಂದ್ರದ ಪ್ರಯತ್ನಗಳನ್ನು ವಿವರಿಸಿದರು ಮತ್ತು ಪೋಷಕರು ಅದನ್ನು ಬಳಸಿಕೊಳ್ಳುವಂತೆ ಕರೆ ನೀಡಿದರು. ಟ್ರಸ್ಟ್ನ ಕಾರ್ಯದರ್ಶಿ ಶ್ರೀ ಜೋಸೆಫ್ ನೊರೊನ್ಹಾ ಈ ಸಂದರ್ಭದಲ್ಲಿ ಸೂಕ್ತವಾಗಿ ಮಾತನಾಡಿದರು ಮತ್ತು ಮಕ್ಕಳ […]

ಗಂಗೊಳ್ಳಿ; ಧರ್ಮಾಚರಣೆ ಆಯೋಗದ ಮುಂದಾಳತ್ವದಲ್ಲಿ ಮಾರ್ಚ್ 30 ಭಾನುವಾರದಂದು ಧರ್ಮಾಚರಣೆ ಸಮಿತಿಯ ಸದಸ್ಯರಿಗೆ ತರಬೇತಿ ಮತ್ತು ಧರ್ಮಾಚರಣೆಯ ಪ್ರಮುಖ ವಿಷಯಗಳ ಬಗ್ಗೆ ತರಬೇತಿಯನ್ನು ಏರ್ಪಡಿಸಲಾಯಿತು. ಸಂಪನ್ಮೂಲ ವ್ಯಕ್ತಿಯಾಗಿ ಉಡುಪಿ ಧರ್ಮ ಪ್ರಾಂತ್ಯದ ಧರ್ಮಾಚರಣೆ ಆಯೋಗದ ನಿರ್ದೇಶಕರಾದ ವಂದನಿಯ ಗುರು ವಿಲ್ಸನ್ ಡಿಸೋಜರವರು ಹಾಜರಿದ್ದರು. ಇಗರ್ಜಿಯ ಧರ್ಮ ಗುರುಗಳಾದ ವಂದನೀಯ ಗುರು ಥಾಮಸ್ ರೋಶನ್ ಡಿಸೋಜರವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಆಯೋಗದ ಸಂಚಾಲಕಿ ಶ್ರೀಮತಿ ಜೆನ್ನಿ ಬುತ್ತೇಲ್ಲೊರವರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ವಿವನ್ ರೆಬೆರೊರವರು ವಂದಿಸಿದರು.

ಕುಂದಾಪುರ ;ಸ್ಥಳೀಯ ಯುಬಿಯಂಸಿ ಆಂಗ್ಲ ಮಾಧ್ಯಮ ಶಾಲೆ ಮತ್ತು ಸಿ ಎಸ್ ಐ ಕೃಪಾ ವಿದ್ಯಾಲಯ, ಇಲ್ಲಿ ವಿದ್ಯಾರ್ಥಿಗಳಿಗಾಗಿ ವಿವಿಧ ರೀತಿಯ ಚಟುವಟಿಕೆಗಳಿಂದ ಕೂಡಿದ 5 ದಿನಗಳ ಶಿಬಿರವು 01/04/2025 ರಂದು ಶ್ರೀಮತಿ ಸವಿತಾ ಇವರ ಸಂಯೋಜನೆ ಹಾಗೂ ಅವರ ತಂಡದ ಮೂಲಕ ಆರಂಭವಾಯಿತು. ಕಾರ್ಯಕ್ರಮಗಳು ಶ್ರೀ ದೀಪಕ್ ತಾಂಡವ ನೃತ್ಯ ಶಾಲೆ ಇವರು ಹಾಗೂ ಗಣ್ಯರ ಸಹಕಾರದೊಂದಿಗೆ ದೀಪ ಬೆಳಗಿ ಉದ್ಘಾಟನೆಗೊಂಡಿತು.ಶ್ರೀಮತಿ ಐರಿನ್ ಸಾಲಿನ್ಸ್,ಸಂಚಾಲಕರು,ಸಿಎಸ್ಐ ಕೃಪಾ ದೇವಾಲಯದ ಧರ್ಮಗುರು ಇಮ್ಯಾನ್ಯುಯಲ್ ಜೈಕರ್ , ಮುಖ್ಯ ಶಿಕ್ಷಕಿ […]

ಕಾಪು;ಎ.೪ ಉದ್ಯಾವರ ಗುಡ್ಡೆಅಂಗಡಿ ರಾಷ್ಟ್ರೀಯ ಹೆದ್ದಾರಿಯಲ್ಲಿಇಂದು ಬೆಳಿಗ್ಗೆ 8.30 ಕ್ಕೆ ಎರಡು ಕಾರುಗಳ ನಡುವೆ ಅಪಘಾತವಾಗಿದ್ದು, ಎರಡು ಕಾರುಗಳು ತೀವ್ರ ಜಖಂ ಗೊಡಿದು, ಒರ್ವ ಪ್ರಯಾಣಿಕನಿಗೆ ಗಾಯಾಳಾಗಿದ್ದು ಆತನನ್ನು ಆಸ್ಪತ್ರೆಗೆ ದಾಖಲು ಪಡಿಸಲಾಗಿದೆ. ಒಂದು ಕಾರು ನಿಂತುಗೊಂಡಿದ್ದು, ಆ ವೇಳೆ ನಿಂತಿದ ಕಾರಿಗೆ ಹಿಂಬದಿಯಿಂದ ಮತ್ತೊಂದು ಕಾರು ಗುದ್ದಿದೆ. ಕಾಪು ಠಾಣೆಯ ಪೊಲೀಸರು, ಸ್ಥಳಕ್ಕೆ ಭೇಟಿ ಮಾಡಿದ್ದಾರೆ, ಹೆಚ್ಚಿನ ಸುದ್ದಿ ಇನ್ನಷ್ಟೆ ತಿಳಿಯಬೇಕಾಗಿದೆ.

ಬಾರ್ಕೂರು, ಏಪ್ರಿಲ್ 1, 2025 – ಹನೇಹಳ್ಳಿಯ ರಾಷ್ಟ್ರೀಯ ಹಿರಿಯ ಪ್ರಾಥಮಿಕ ಶಾಲೆಯಿಂದ ಆಯೋಜಿಸಲಾದ ಬಹುನಿರೀಕ್ಷಿತ ‘ಚಿಣ್ಣರ ಚಿಲುಮೆ ಬೇಸಿಗೆ ಶಿಬಿರ’ ಇಂದು ಬೆಳಿಗ್ಗೆ 10:30 ಕ್ಕೆ ಸುಂದರವಾಗಿ ಅಲಂಕರಿಸಲ್ಪಟ್ಟ ರೋಟರಿ ಭುವನದಲ್ಲಿ ಭವ್ಯ ಉದ್ಘಾಟನೆಯೊಂದಿಗೆ ಪ್ರಾರಂಭವಾಯಿತು. ಏಪ್ರಿಲ್ 1 ರಿಂದ ಏಪ್ರಿಲ್ 4 ರವರೆಗೆ ನಡೆಯುವ ನಾಲ್ಕು ದಿನಗಳ ಶಿಬಿರವು ಮಕ್ಕಳಿಗೆ ಕಲಿಕೆ, ಸೃಜನಶೀಲತೆ ಮತ್ತು ಮೋಜಿನ ಅನುಭವಗಳಿಗೆ ವೇದಿಕೆಯನ್ನು ಒದಗಿಸುವ ಗುರಿಯನ್ನು ಹೊಂದಿದೆ.ಉದ್ಘಾಟನಾ ಸಮಾರಂಭವನ್ನು ಗೌರವಾನ್ವಿತ ಗಣ್ಯರು, ಶಿಕ್ಷಕರು, ಪೋಷಕರು ಮತ್ತು ಉತ್ಸಾಹಿ ವಿದ್ಯಾರ್ಥಿಗಳು […]