ಬಂಗಾಳ ಕೊಲ್ಲಿಯಲ್ಲಿ ಹಮೂನ್‌ ಚಂಡಮಾರುತ : ತೀವ್ರ ಸ್ವರೂಪ ತಾಳಿದೆ:ಮುಂದಿನ 6 ಗಂಟೆಗಳಲ್ಲಿ ಮತ್ತಷ್ಟು ತೀವ್ರಗೊಳ್ಳಲಿದೆ

ಕೋಲ್ಕತ್ತ: ದೇಶದ ಪೂರ್ವ ಸಾಗರ ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ಹಮೂನ್‌ ಚಂಡಮಾರುತ ತೀವ್ರ ಸ್ವರೂಪ ತಾಳಿದ್ದು, ಮುಂದಿನ 6 ಗಂಟೆಗಳಲ್ಲಿ ಮತ್ತಷ್ಟು ತೀವ್ರಗೊಳ್ಳಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.

ಭಾರತೀಯ ಕರಾವಳಿ ಪ್ರದೇಶದಲ್ಲಿ ಪರಿಣಾಮ ಬೀರುವ ಸಾಧ್ಯತೆ ವಿರಳವಾಗಿದ್ದು, ಗಂಟೆಗೆ 21 ಕಿ.ಮೀ. ವೇಗ ಪಡೆದಿರುವ ಹಮೂನ್‌ ಚಂಡಮಾರುತ ಬಂಗಾಳಕೊಲ್ಲಿಯ ವಾಯುವ್ಯ ದಿಕ್ಕಿನತ್ತ ಚಲಿಸುತ್ತಿದೆ. ಈಶಾನ್ಯದತ್ತ ಚಲಿಸುವಾಗ ಕ್ರಮೇಣ ದುರ್ಬಗೊಳ್ಳಲಿದೆ. ಈ ವೇಳೆ ಗಂಟೆಗೆ 65ರಿಂದ 75 ಕಿ.ಮೀ. ವೇಗದಲ್ಲಿ ಗಾಳಿ ಬೀಸಬಹುದು ಎಂದು ಐಎಂಡಿ ಹೇಳಿದೆ. ಚಂಡಮಾರುತವು ಅಕ್ಟೋಬರ್‌ 25ರ ಸಂಜೆಯ ವೇಳೆಗೆ ಬಾಂಗ್ಲಾದೇಶದ ಕರಾವಳಿ ಖೇಪುಷಾರಾ ಪತ್ತು ಚಿತ್ತಗಾಂಗ್‌ ಪ್ರದೇಶವ ಪಡೆಯಲಿದೆಯೆಂದು ತಿಳಿದು ಬಂದಿದೆ. ಈ ಚಂಡಮಾರುತದ ದೆಸೆಯಿಂದ ಇದು ಭಾರಿ ಮಳೆ, ಗಾಳಿ ಮತ್ತು ಪ್ರತಿಕೂಲ ಹವಾಮಾನಕ್ಕೆ ಕಾರಣವಾಗಬಹುದೆಂದು ತಿಳಿಸಲಾಗಿದೆ. ಇರಾನ್‌ ದೇಶವು ಈ ಚಂಡಮಾರುತಕ್ಕೆ ಹಮೂನ್‌ ಎಂದು ಹೆಸರಿಟ್ಟಿದ್ದು ಇರಾನ್‌ ದೇಶ.