ಕೇಕ್ ನಲ್ಲಿ ಹೆಸರಿನ ಸ್ಪೆಲಿಂಗ್ ಮಿಸ್ಟೇಕ್ ಆಗಿದ್ದಕ್ಕೆ ಬೇಕರಿ ಸಿಬ್ಬಂದಿಗೆ ಚೂರಿಯಿಂದ ಇರಿತ

ಬೆಂಗಳೂರು:ಆರ್ಡರ್‌ ಕೊಟ್ಟ ಕೇಕ್ ನಲ್ಲಿ ಹೆಸರಿನ ಸ್ಪೆಲಿಂಗ್ ಮಿಸ್ಟೇಕ್ ಆಗಿದ್ದಕ್ಕೆ ಬೇಕರಿ ಸಿಬ್ಬಂದಿಗೆ ಚೂರಿಯಿಂದ ಇರಿದ ಬೆಂಗಳೂರು ನಗರದ ತಿರುಮನಹಳ್ಳಿಯ ಬೇಕರಿಯಲ್ಲಿ (ಅ.17) ರಂದು ಬೆಂಗಳೂರು ನಗರದ ತಿರುಮನಹಳ್ಳಿಯ ಬೇಕರಿಯಲ್ಲಿ ನಡೆದಿದೆ. ಚೂರಿಯಿಂದ ಇರಿದ ಆರೋಪಿ ಪರಾರಿಯಾಗಿದ್ದಾನೆ. ಚೂರಿಯಿಂದ ಇರಿತಕ್ಕೊಳಗಾದ ಬೇಕರಿ ಸಿಬ್ಬಂದಿಯ ಹೆಸರು ವಂಶಿ ಎಂದು ತಿಳಿದು ಬಂದಿದೆ. ವಂಶಿಯ ಎರಡು ಕೈಗಳಿಗೆ ಚಾಕುವಿನಿಂದ ಹಲ್ಲೆ ಮಾಡಲಾಗಿದ್ದು, ಗಾಯಾಳು ಬೇಕರಿ ಸಿಬ್ಬಂದಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಮಂಗಳವಾರ ರಾತ್ರಿ 8 ಗಂಟೆಯ ಸುಮಾರಿಗೆ ಬೇಕರಿಗೆ ಬಂದಿದ್ದ ಅಪರಿಚಿತ ವ್ಯಕ್ತಿಯೊಬ್ಬ ಕೇಕ್‌ ಆರ್ಡರ್‌ ಮಾಡಿದ್ದ. ಬಳಿಕ ಕೇಕ್‌ ಕೊಟ್ಟು ಹಣ ಕೇಳಿದಾಗ ಸ್ಟೆಲಿಂಗ್‌ ಸರಿಯಿಲ್ಲವೆಂದು ಎಂದು ಗಲಾಟೆ ಶುರು ಮಾಡಿ, ಕೊನೆಗೆ ಹಣ ಕೇಳುತ್ತಿಯಾ ಎಂದು ಚೂರಿಯಿಂದ ಹಲ್ಲೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ. ಈ ಕುರಿತು ಕೊತ್ತನೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದ್ದು, ಕೃತ್ಯ ಎಸಗಿ ಪರಾರಿಯಾದ ಆರೋಪಿಗಾಗಿ ಶೋಧಕಾರ್ಯ ನಡೆಸಲಾಗಿದೆ ಎಂದು ತಿಳಿದು ಬಂದಿದೆ.