ನೇತಾಜಿ ಚಾರಿಟೇಬಲ್ ಟ್ರಸ್ಟ್: ಭಾರತ ರತ್ನ ಡಾ. ಸರ್ವೇಪಲ್ಲಿ ರಾಧಾಕೃಷ್ಣ ರವರ ಜಯಂತಿ

ಶ್ರೀನಿವಾಸಪುರ : ಭಾರತ ರತ್ನ ಡಾ. ಸರ್ವೇಪಲ್ಲಿ ರಾಧಾಕೃಷ್ಣ ರವರ ಜಯಂತಿಯ ನೆನಪಿನಲ್ಲಿ ನೇತಾಜಿ ಚಾರಿಟೇಬಲ್ ಟ್ರಸ್ಟ್ ಶ್ರೀನಿವಾಸಪುರ ರವರಿಂದ ಪಟ್ಟಣದ ಕರ್ನಾಟಕ ಮಾದರಿ ಉನ್ನತೀಕೃತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಈ ವೇಳೆ ಮಾತನಾಡಿದ ಶಾಲಾ ಮುಖ್ಯ ಶಿಕ್ಷಕ ಬೈರೆಗೌಡ ಶಿಕ್ಷಕ ವೃತ್ತಿಯಲ್ಲಿ ಉನ್ನತ ಹೆಸರನ್ನು ಪಡೆದು ಭಾರತರತ್ನ ಪುರಸಕೃತರಾದ ರಾಧಾಕೃಷ್ಣ ರವರ ಜನ್ಮ ದಿನಾಚರಣೆಯ ಅಂಗವಾಗಿ ಇಂದು ಕಾರ್ಯಕ್ರಮ ಹಮ್ಮಿಕೊಂಡಿದ್ದು, ಈಗಿನ ದಿನಗಳಲ್ಲಿ ಪ್ರತಿಭೆಗಳುಳ್ಳವರು ಸನ್ಮಾಗಳನ್ನು ಪಡೆಯಬೇಕಿದ್ದರೆ ಸರ್ಕಾರದ ಮಟ್ಟದಲ್ಲಿ ಅರ್ಜಿ ಹಾಕಿಕೊಳ್ಳುವ ಸ್ಥಿತಿ ನಿರ್ಮಾಣವಾಗಿ, ವಿಶೇಷವಾದ ಸೇವೆ ಸಲ್ಲಿಸುತ್ತಿರುವ ಶಿಕ್ಷಕರನ್ನು ನೇತಾಜಿ ಚಾರಿಟೇಬಲ್ ಟ್ರಸ್ಟ್ ನವರು ಗುರುತಿಸಿ ಸನ್ಮಾನಿಸಿ ಗೌರವವಿಸುತ್ತಿರುವುದು ಬಹಳ ಅರ್ಥಗರ್ಭಿತವಾಗಿದೆ.
ಇಂತಹ ಟ್ರಸ್ಟಿಗಳಿಂದ ಇನ್ನಷ್ಟು ಸೇವೆ ಮಾಡಲು ಇಚ್ಛೆಸುವ ಹಲವಾರಿಗೆ ಪ್ರೇರೇಪವಾಗಲಿ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳು ಹಾಗೂ ಶಿಕ್ಷಕರಾದ ಬೈರಾರೆಡ್ಡಿ, ಎಂ. ಬೈರೇಗೌಡ, ಅರುಣ್ ಕುಮಾರ್, ಕಲಾಶಂಕರ್, ಶಿಕ್ಷಕಣ ಕ್ಷೇತ್ರಕ್ಕೆ ವಿಶೇಷ ಕೊಡುಗೆ ನೀಡಿದ ಶಿಕ್ಷಕರು, ನೇತಾಜಿ ಟ್ರಸ್ಟ್ ನ ಅಧ್ಯಕ್ಷರಾದ ನಾಗೇಂದ್ರರಾವ್, ಡಾ. ವೆಂಕಟಾಚಲ, ಕೋಟೇಶ್, ಕೃಷ್ಣಾರೆಡ್ಡಿ ಸುಶುಭಾಶ್, ಸುನಿಲ್, ಗಂಗಾಧರ್ ಹಾಗೂ ಟ್ರಸ್ಟ್ ನ ಪದಾಧಿಕಾರಿಗಳು ಇದ್ದರು.