ಇಂಟರ್‌ನೆಟ್ ಆಫ್ ಥಿಂಗ್ಸ್‌ನಲ್ಲಿ ಸೈಬರ್ ಭದ್ರತೆಯ ಪ್ರಾಮುಖ್ಯತೆ- ಎಂಐಟಿ ಕುಂದಾಪುರ

ಐಇಇಇ ವಿದ್ಯಾರ್ಥಿ ಶಾಖೆ ಎಂಐಟಿ ಕುಂದಾಪುರ ಇವರಿಂದ ಇಂಟರ್‌ನೆಟ್ ಆಫ್ ಥಿಂಗ್ಸ್‌ನಲ್ಲಿ ಸೈಬರ್ ಭದ್ರತೆಯ ಪ್ರಾಮುಖ್ಯತೆ ಕುರಿತು ತಜ್ಞರ ಭಾಷಣವನ್ನು ಏರ್ಪಡಿಸಲಾಗಿತ್ತು. ಎಂ.ಐ.ಟಿ, ಮಣಿಪಾಲದ ಡಿಸ್ & ಸಿಎ ಡಿಪಾರ್ಟ್ಮೆಂಟ್ ಸಹಾಯಕ ಪ್ರೊಫೆಸರ್ ಡಾ.ವಿದ್ಯಾ ರಾವ್ ಅವರು ಸಂಪನ್ಮೂಲ ವ್ಯಕ್ತಿಯಾಗಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಸೈಬರ್ ಸೆಕ್ಯುರಿಟಿ ಮತ್ತು ಇಂಟರ್ನೆಟ್ ಆಫ್ ಥಿಂಗ್ಸ್ ಕ್ಷೇತ್ರದಲ್ಲಿ ಪ್ರಸ್ತುತ ಮತ್ತು ಭವಿಷ್ಯದ ಸವಾಲುಗಳನ್ನು ವಿವರಿಸಿದರು. ಪ್ರಾಂಶುಪಾಲ ಡಾ.ಅಬ್ದುಲ್ ಕರೀಂ, ಉಪಪ್ರಾಂಶುಪಾಲ ಪ್ರೊ.ಮೆಲ್ವಿನ್ ಡಿಸೋಜಾ, ಬಿ.ಬಿ ನಿರ್ದೇಶಕ ಡಾ.ರಾಮಕೃಷ್ಣ ಹೆಗಡೆ, ಐಇಇಇ ಸಂಯೋಜಕ ಪ್ರೊ.ವರುಣ್ ಕುಮಾರ್, ಪ್ರೊ.ಬಾಲನಾಗೇಶ್ವರ್, ಸೂಕ್ಷ್ಮ ಅಡಿಗ ಉಪಸ್ಥಿತರಿದ್ದರು. ಕು.ಪಾತಿಮಾ ಕಾರ್ಯಕ್ರಮ ನಿರ್ವಹಿಸಿದರು.