ಕೋಲಾರ ಜಿಲ್ಲಾದ್ಯಂತ ಒತ್ತುವರಿ ಆಗಿರುವ ಅರಣ್ಯ ಭೂಮಿ ಹಗರಣವನ್ನು ಸಿ.ಬಿ.ಐಗೆ ಒಪ್ಪಿಸುವಂತೆ ಒತ್ತಾಯಿಸಿ ಜು.26 ರ ಬುದವಾರ ಅರಣ್ಯ ಇಲಾಖೆ ಮುತ್ತಿಗೆಗೆ ತಿರ್ಮಾನ

ಶ್ರೀನಿವಾಸಪುರ, ಜು.23: ಜಿಲ್ಲಾದ್ಯಂತ ಒತ್ತುವರಿ ಆಗಿರುವ ಅರಣ್ಯ ಭೂಮಿ ಹಗರಣವನ್ನು ಸಿ.ಬಿ.ಐಗೆ ಒಪ್ಪಿಸುವಂತೆ ಅರಣ್ಯ ಸಚಿವರನ್ನು ಒತ್ತಾಯಿಸಿ ಜು.26 ರ ಬುದವಾರ ಅರಣ್ಯ ಇಲಾಖೆ ಮುತ್ತಿಗೆ ಹಾಕಲು ತೆರ್ನಹಳ್ಳಿ ಪ್ರಗತಿಪರ ರೈತ ತಾಲ್ಲೂಕದ್ಯಕ್ಷ ಆಂಜಿನಪ್ಪರವರ ತೋಟದಲ್ಲಿ ಕರೆದಿದ್ದ ರೈತ ಸಂಘದ ಸಭೆಯಲ್ಲಿ ತಿರ್ಮಾನಿಸಲಾಯಿತು.
ಅರಣ್ಯ ರಕ್ಷಕರೇ ಅರಣ್ಯ ಭಕ್ಷಕರಾದರೆ ಇನ್ನೂ ಸರ್ಕಾರದ ಅರಣ್ಯ ಭೂಮಿಯನ್ನು ಉಳಿಸುವವರು ಯಾರು? ಒಂದು ಕಡೆ ಸಾವಿರಾರು ಎಕರೆ ಅರಣ್ಯ ಭೂಮಿ ಒತ್ತುವರಿ ಮತ್ತೊಂದು ಕಡೆ ಅರಣ್ಯದಲ್ಲಿ ಬೆಳೆದಿರುವ ಮರಗಳ ಆಕ್ರಮ ಕಟಾವು ದಂದೆಗೆ ಕಡಿವಾಣ ಇಲ್ಲವೇ ಎಂದು ರೈತ ಸಂಘದ ರಾಜ್ಯ ಸಂಚಾಲಕ ಬಂಗವಾದಿ ನಾಗರಾಜ್‍ಗೌಡ ಅರಣ್ಯ ಇಲಾಖೆ ಆಕ್ರಮದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಶ್ರೀನಿವಾಸಪುರ ತಾಲ್ಲೂಕಿನಾದ್ಯಂತ 3725 ಎಕರೆ ಅರಣ್ಯ ಭೂಮಿಯನ್ನು ಬಲಾಡ್ಯರು ಶ್ರೀಮಂತರು, ರಾಜಕೀಯ ವ್ಯಕ್ತಿಗಳು ರಾಜಾರೋಷವಾಗಿ 100 ಎಕರೆಯಂತೆ ತಮಗೆ ಇಷ್ಟ ಬಂದ ಕಡೆ ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿಕೊಂಡು ನಕಲಿ ದಾಖಲೆಗಳನ್ನು ಕಂದಾಯ ಅಧಿಕಾರಿಗಳು ಸೃಷ್ಠಿಸಿ ಸರ್ವೇ ಅಧಿಕಾರಿಗಳು ನಕ್ಷೆಯನ್ನು ತಯಾರಿಸಿ ಅರಣ್ಯ ಅಧಿಕಾರಿಗಳು ನಿಯತ್ತಾಗಿ ದಾಖಲೆಗಳನ್ನು ಒತ್ತುವರಿದಾರರ ಮನೆಗೆ ತಲುಪಿಸುತ್ತಿರುವುದು ದುರಾದೃಷ್ಟಕರ ಎಂದು ಅಧಿಕಾರಿಗಳ ಭ್ರಷ್ಟಚಾರತೆ ವಿರುದ್ದ ಕಿಡಿ ಕಾರಿದರು.
ಸಣ್ಣ ರೈತ ತನ್ನ ಜಮೀನಿನ ಪಕ್ಕದಲ್ಲಿ ಒಂದು ಹೆಜ್ಜೆ ಅರಣ್ಯ ಭೂಮಿಯಲ್ಲಿ ಇಟ್ಟರೆ ಅದನ್ನೇ ದೊಡ್ಡ ಸುದ್ದಿಯೆಂದು ನೂರಾರು ಅರಣ್ಯ ರಕ್ಷಕರು ಮತ್ತು ಪೋಲಿಸರು ಸುತ್ತುವರೆದು ರೈತರಿಗೆ ಪ್ರತಿನಿತ್ಯ ಕಿರುಕುಳ ನೀಡುವ ಅರಣ್ಯ ಅಧಿಕಾರಿಗಳೇ ಸಾವಿರಾರು ಎಕರೆ ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿಕೊಂಡು ನಕಲಿ ದಾಖಲೆ ಸೃಷ್ಠಿಸಿ ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ ಕೋಟಿ ಕೋಟಿ ಸಾಲವನ್ನು ಪಡೆದಿರುವ ಭೂ ಒತ್ತುವರಿದಾರರ ವಿರುದ್ದ ಕ್ರಮ ಕೈಗೊಳ್ಳಲು ಹಿಂದೇಟು ಏಕೆ ಎಂದು ಪ್ರಶ್ನೆ ಮಾಡುವ ಜೊತೆಗೆ ಸರ್ಕಾರದಿಂದ ಲಕ್ಷ ಲಕ್ಷ ಪಡೆಯುವ ಅಧಿಕಾರಿಗಳೇ ಮಾಜಿ ಶಾಸಕರಾದ ರಮೇಶ್‍ಕುಮಾರ್ ಅರಣ್ಯ ಭೂ ಒತ್ತುವರಿ ಜೊತೆಗೆ ಬಲಾಡ್ಯರ 3725 ಎಕರೆ ಭೂಮಿಯನ್ನು ತೆರೆವುಗೊಳಿಸಿ ನಿಮ್ಮ ತಾಕತ್ತು ಬಲಾಡ್ಯರ ಮೇಲೆ ತೋರಿಸಿ ಎಂದು ಸವಾಲು ಹಾಕಿದರು.
ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ ಏಷ್ಯಾದ ಎರಡನೇ ಅತಿ ದೊಡ್ಡ ಮಾರುಕಟ್ಟೆಗೆ ಜಾಗಕ್ಕೆ 50 ಎಕರೆ ಅರಣ್ಯ ಭೂಮಿ ನೀಡಲು ಕೇಂದ್ರ ಸರ್ಕಾರದ ಅರಣ್ಯ ಸಚಿವರ ಮೇಲೆ ಬೆರಳು ತೋರಿಸುವ ಅಧಿಕಾರಿಗಳೇ ಸಾವಿರಾರು ಎಕರೆ ಭೂ ಒತ್ತುವರಿ ನಿಮ್ಮ ಕಣ್ಣಿಗೆ ಕಾಣಿಸುತ್ತಿಲ್ಲವೇ? ಇಲ್ಲ ತಾವೇ ಕೋಟಿ ಕೋಟಿ ಹಣಕ್ಕೆ ಅರಣ್ಯ ಭೂಮಿಯನ್ನು ಮಾರಾಟ ಮಾಡಿದ್ದೀರೇಯೆ? ಇದು ಜಿಲ್ಲೆಯ ನೊಂದ ರೈತರ ಪ್ರಶ್ನೆ ಆಗಿದೆ ಎಂದರು.
ಒಂದು ಕಡೆ ಅರಣ್ಯ ಭೂಮಿ ಒತ್ತುವರಿ ಮತ್ತೊಂದು ಕಡೆ ಅರಣ್ಯದಲ್ಲಿ ಬೆಳೆದಿರುವ ಬೆಳೆಬಾಳುವ ಆಕ್ರ್ಲಿಪಾರಂ ಆಕ್ರಮ ಮಾರಾಟ ದಂದೆ ಮತ್ತೊಂದೆಡೆ ಅರಣ್ಯ ಭೂಮಿಯಲ್ಲಿ ಅಕ್ರಮ ಗಣಿಗಾರಿಕೆ ಮಾಡುವ ವ್ಯಕ್ತಿಗಳಿಗೆ ಪರೋಕ್ಷವಾಗಿ ಬೆಂಬಲ ನೀಡುತ್ತಿರುವ ಹಿನ್ನಲೆ ಏನೂ ಅರಣ್ಯ ಇಲಾಖೆಯಲ್ಲಿ ಹೆಜ್ಜೆ ಹೆಜ್ಜೆಗೂ ನಡೆಯುತ್ತಿರುವ ಆಕ್ರಮ ಭ್ರಷ್ಟಚಾರತೆಗೆ ಕುಮ್ಮಕ್ಕು ಯಾರು ಈ ದಂದೆಗಳು ತನಿಖೆ ಆಗಲೇಬೇಕು. ತಪ್ಪಿತಸ್ಥ ಅಧಿಕಾರಿಗಳಿಗೆ ಶಿಕ್ಷೆ ಅಮಾನತು ಮಾಡಲೇಬೇಕು. ಸಾವಿರಾರು ಎಕರೆ ಅರಣ್ಯ ಭೂ ಹಗರಣವನ್ನು ಸಿ.ಬಿ.ಐಗೆ ಒಪ್ಪಿಸಲೇ ಬೇಕು ಎಂದು ಜು.26ರ ಬುಧವಾರ ಅರಣ್ಯ ಇಲಾಖೆ ಮುಂದೆ ಕಲ್ಲುಗಳೊಂದಿಗೆ ಹೋರಾಟ ಮಾಡುವ ಮುಖಾಂತರ ನ್ಯಾಯ ಪಡೆಯುವ ತಿರ್ಮಾನವನ್ನು ಸಭೆಯಲ್ಲಿ ಕೈಗೊಳ್ಳಲಾಯಿತು.
ಸಭೆಯಲ್ಲಿ ಜಿಲ್ಲಾದ್ಯಕ್ಷ ಈಕಂಬಳ್ಳಿ ಮಂಜುನಾಥ್, ಪಾರುಕ್‍ಪಾಷ, ವಿಜಯ್‍ಪಾಲ್, ಆಲವಾಟ ಶಿವ, ಸಹದೇವಣ್ಣ, ಶೇಕ್‍ಶಪಿಹುಲ್ಲಾ, ಮುನಿರಾಜು, ಮಂಗಸಂದ್ರ ತಿಮ್ಮಣ್ಣ, ಮೂರಾಂಡಹಳ್ಳಿ ಶಿವಾರೆಡ್ಡಿ, ಬಂಗಾರಿ ಮಂಜು, ಸುನಿಲ್‍ಕುಮಾರ್, ಭಾಸ್ಕರ್, ಮುಂತಾದವರಿದ್ದರು.