ಕುಂದಾಪುರ ವಾಲಿಬಾಲ್ ಅಕಾಡೆಮಿ ವತಿಯಿಂದ ಗಾಂಧೀ ಮೈದಾನದಲ್ಲಿ ವಾಲಿಬಾಲ್ ತರಬೇತಿ ಶಿಬಿರ

ಕುಂದಾಪುರ, ಮೇ 2 : ಕುಂದಾಪುರದ ಎಳೆ ವಯಸ್ಸಿನ ಹುಡುಗರಲ್ಲಿ ಜನಪ್ರಿಯ ಆಟವಾದ ವಾಲಿಬಾಲ್ ನ ಕೌಶಲ್ಯ ವನ್ನು ಕಲಿಯಲು ಕುಂದಾಪುರ ವಾಲಿಬಾಲ್ ಅಕಾಡೆಮಿ ವತಿಯಿಂದ ಮೇ 1 ರಂದು, 1 ತಿಂಗಳ ವರೆಗಿನ ತರಬೇತಿ ಶಿಬಿರ ಗಾಂಧೀ ಮೈದಾನದಲ್ಲಿ ಉದ್ಘಾಟನೆ ಗೊಂಡಿತು . ಸುಮಾರು 35 ಶಿಬಿರಾರ್ಥಿಗಳು ಪಾಲ್ಗೊಳ್ಳುವ ಶಿಬಿರವನ್ನು ನಿವೃತ್ತ ದೈಹಿಕ ಶಿಕ್ಷಕ ಬಾಲಕೃಷ್ಣ ಮಾಸ್ಟರ್ ಬಸ್ರೂರು ಉದ್ಘಾಟಿಸಿದರು. ವೇದಿಕೆಯಲ್ಲಿ ಪೋಲಿಸ್ ಸಿಬ್ಬಂದಿ ರಾಮು ಹೆಗ್ಡೆ, ಅನುಭವಿ ವಾಲಿಬಾಲ್ ಆಟಗಾರರಾದ ಮೆಲ್ವಿನ್ ರೆಬೆಲ್ಲೋ, ಜೋಯ್ .ಜೆ.ಕರ್ವಾಲೋ, ಶ್ರೀಧರ್ ಆಚಾರ್, ಉಪಸ್ಥಿತರಿದ್ದರು. ಕುಂದಾಪುರ ವಾಲಿಬಾಲ್ ಅಕಾಡೆಮಿ ಇಲಿಯಾಸ್.ಬಿ. ಪ್ರಸ್ತಾವನೆ ಗೈದು ಕಾರ್ಯ ಕ್ರಮ ನಿರ್ವಹಿಸಿದರು. ಅಕಾಡೆಮಿಯ ಮುಖ್ಯಸ್ಥ ರಾಷ್ಟ್ರೀಯ ಆಟಗಾರ ಮಹಮ್ಮದ್ ಸಮೀರ್, ಇಲಿಯಾಸ್ .ಬಿ, ಶ್ರೀಧರ್ ಆಚಾರ್, ವಿಖ್ಯಾತ್ ಕಂಡ್ಲೂರ್ ತರಬೇತು ದಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.