ಆಲಿಕಲ್ಲು ಮಳೆಗೆ ಜನಜೀವನ ಅಸ್ತವ್ಯಸ್ತ

ಕೋಲಾರ:- ತಾಲ್ಲೂಕಿನಾದ್ಯಂತ ಬಿದ್ದ ಆಲಿಕಲ್ಲು ಮಳೆಯಿಂದ ಸತತ ಎರಡು ತಿಂಗಳಿಂದ ಬೆಂಕಿಯ ಕಾವಲಿಯಾಗಿದ್ದ ಇಳೆ ತಂಪಾದರೂ, ಅನೇಕ ಕಡೆ ಟಮೋಟೋ,ಮಾವುಮತ್ತಿತರ ಬೆಳೆಗಳಿಗೆ ಹಾನಿಯಾದ ವರದಿಯಾಗಿದೆ.
ಸಂಜೆ ಸುಮಾರು 5-30ರ ಸುಮಾರಿಗೆ ಆರಂಭಗೊಂಡ ಮಳೆ ಕೇವಲ 20 ನಿಮಿಷ ಸುರಿಯಿತಾದರೂ ಮಳೆಯ ರಭಸ ಹಾಗೂ ಆಲಿಕಲ್ಲಿಗೆ ಜನಜೀವನ ಅಸ್ತವ್ಯಸ್ತಗೊಂಡಿತು.
ಮಳೆ ಜತೆಗೆ ಬಿರುಗಾಳಿ ಬೀಸಿದ್ದರಿಂದಾಗಿ ಗಾಳಿಯ ಹೊಡೆತಕ್ಕೆ ಅನೇಕ ಕಡೆ ತೋಟಗಾರಿಕಾ ಬೆಳೆಗಳು ನಾಶವಾಗಿದೆ, ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದ್ದು, ಜನಜೀವನ ಸಂಕಷ್ಟಕ್ಕೀಡಾಯಿತು.