ರಮೇಶ್ ಕುಮಾರ್ 4 ಬಾರಿ ಶಾಸಕರಾಗಿ 2 ಬಾರಿ ಸ್ವೀಕರ್ ಆಗಿ ಮಂತ್ರಿಯಾಗಿ ಈ ಪಟ್ಟಣಕ್ಕೆ ನಿಮ್ಮ ಕೊಡುಗೆ ಏನು: ಜಿ.ಕೆ ವೆಂಕಟಶಿವಾರೆಡ್ಡಿ

ಶ್ರೀನಿವಾಸಪುರ: ಮಿಸ್ಟರ್ ರಮೇಶ್ ಕುಮಾರ್ 4 ಬಾರಿ ಶಾಸಕರಾಗಿ 2 ಬಾರಿ ಸ್ವೀಕರ್ ಆಗಿ ಮಂತ್ರಿಯಾಗಿ ಈ ಪಟ್ಟಣಕ್ಕೆ ನಿಮ್ಮ ಕೊಡುಗೆ ಏನೆಂದು ಪ್ರಶ್ನಿಸಿದ ಮಾಜಿ ಶಾಸಕ ಜಿ.ಕೆ ವೆಂಕಟಶಿವಾರೆಡ್ಡಿ.
ಪಟ್ಟಣದ ಅಂಬೇಡ್ಕರ್ ಪಾಳ್ಯ, ಸಂತೆ ಮೈದಾನ, ಹಳೇಪೇಟೆ, ಶಂಕರಮಠ, ರಾಮಕ್ರಷ್ಣಾರಸ್ತೆ, ಕಟ್ಟೆಕೆಳಗಿನಪಾಳ್ಯ, ಮಾರುತಿ ನಗರ, ವಾರ್ಡಗಳಲ್ಲಿ ಅದ್ದೂರಿಯಾಗಿ ಪಟಾಕಿಗಳನ್ನು ಸಿಡಿಸಿ ಪುಷ್ಪಮಾಲೆಗಳನ್ನು ಹಾಕಿ ಜೈ ಕಾರಗಳನ್ನು ಕೂಗುತ್ತಾ ಬರಮಾಡಿಕೊಂಡು ಬೂತ್ ಮಟ್ಟದ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ವೆಂಕಟಶಿವಾರೆಡ್ಡಿ, ಈ ಪಟ್ಟಣದ ಅಭಿವೃದ್ದಿಗೆ ನಿಮ್ಮ ಕೊಡುಗೆ ಏನೂ ಇಲ್ಲಾ ಕೇವಲ ಸುಳ್ಳು ಬರವಸೆಗಳನ್ನು ಹೇಳುತ್ತಾ ಜನರನ್ನು ಮರಳು ಮಾಡುತ್ತಿದ್ದೀಯಾ ಪಟ್ಟಣದಲ್ಲಿ ಸರ್ಕಾರಿ ಆಸ್ಪತ್ರೆ, ಪುರಸಭೆ ಕಾಂಪ್ಲೆಕ್ಸ್, ಕಛೇರಿ, ನೂತನ ಬಸ್ ನಿಲ್ದಾಣ, ನ್ಯಾಯಾಲಯ, ನನ್ನ ಅವದಿಯಲ್ಲಿ ಆಗಿದ್ದು ನನ್ನ ಅಧಿಕಾರ ಅವದಿಯಲ್ಲಿ ಹಗಲಿರುಳು ಶ್ರಮಿಸಿ ಪಟ್ಟಣದ ಎಲ್ಲಾ ವಾರ್ಡಗಳ ಅಭಿವೃದ್ದಿಗಾಗಿ ಕೋಟ್ಯಾಂತರ ರೂಗಳನ್ನು ತಂದಿದ್ದು ನಾನೇ ಎಂದರು.