“ಗೌರವದಿಂದ ಬೆಳಕಿನಡೆ ನಡೆಯಬೇಕು, ಸಹಿಷ್ಣತೆಯಿಂದಲ್ಲ”- ದೀಪಾವಳಿ ಸಂಭ್ರಮದಲ್ಲಿ : ಬಿಷಪ್ ಪೀಟರ್ ಪಾಲ್ ಸಲ್ಡಾನ್ಹಾ

Report: Fr Anil Fernandes, CCC Pics by Stanly Bantwal, Editor:Bernarad Dcosta

ಅ.24: “ಅಂತರ್ಧರ್ಮ ಹಿನ್ನೆಲೆಯಲ್ಲಿ ಬದುಕುವ ಸಾಮರ್ಥ್ಯ. ಒಗ್ಗಟ್ಟು, ಏಕತೆ ಮತ್ತು ಸೌಹಾರ್ದತೆಯನ್ನು ತರುವ ಪ್ರಯತ್ನ ನಡೆಯಬೇಕು. ವೈವಿಧ್ಯತೆಗಳು ಮತ್ತು ಗೌರವ, ಪ್ರೀತಿ ಮತ್ತು ವಿಶ್ವಾಸದ ಮನೋಭಾವದಲ್ಲಿ ವ್ಯತ್ಯಾಸಗಳು ಇಂದು ಹೆಚ್ಚು ಅಗತ್ಯವಿದೆ. ಆದರೆ ಇಂದು ನಾವು ಒಬ್ಬರನ್ನೊಬ್ಬರು ಸಹಿಸುವುದಿಲ್ಲ. ನಾವು ಪರಸ್ಪರ ಗೌರವಿಸಬೇಕು. ಗೌರವ, ಸಹಿಷ್ಣುತೆಗಿಂತ ಮುಖ್ಯವಾದುದು. ದೀಪಾವಳಿಯ ಆಚರಣೆಯು ಪ್ರತಿಯೊಬ್ಬರಿಗೂ ಅವಕಾಶ ಸೃಷ್ಟಿಸುತ್ತದೆ. ನಾವು ಇತರರ ಬಗ್ಗೆ ಗೌರವದಿಂದ ಇರಬೇಕೆಂದು ಕರೆ ನೀಡುತ್ತದೆ” ಎಂದು ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ಡಾ.ಪೀಟರ್ ಪೌಲ್ ಸಲ್ಡಾನ್ಹಾ ಸಂದೇಶ ನೀಡಿದರು.

     ಅವರು ಮದರ್ ಥೆರೇಸಾ ವಿಚಾರ ವೇದಿಕೆ, ಮಂಗಳೂರು, ಸಂದೇಶ ಕಲಾಕೇಂದ್ರದಲ್ಲಿ ಸೋಮವಾರ, ಅಕ್ಟೋಬರ್ 24, 2022 ರಂದು ಆಯೋಜಿಸಿದ ಬೆಳಕಿನ ಹಬ್ಬ ದೀಪಾವಳಿ ಸಂಭ್ರಮದ  ಉದ್ಘಾಟನಾ ಸಂದೇಶದಲ್ಲಿ ಹೇಳಿದರು. ಸಂಜೆ ಹೊತ್ತು ನಡೆದ ಕಾರ್ಯಕ್ರಮದಲ್ಲಿ ಅವರು “ನಾವು ಸುತ್ತಮುತ್ತಲಿನ ಎಲ್ಲ ಜನರನ್ನು ನಮ್ಮ ಸಹೋದರ ಸಹೋದರಿಯರೆಂದು ಗುರುತಿಸಿ  ಗೌರವದಿಂದ ಕಂಡಾಗ ನಾವು ಪ್ರಪಂಚದ ನಿಜವಾದ ಬೆಳಕಾಗುತ್ತೇವೆ. ನಾವು ಒಂದು ಕುಟುಂಬಕ್ಕೆ ಸೇರಿದವರು. ಅವನು/ಅವಳು ಅಥವಾ ಅವರು ಯಾರು ಎಂದು ಪ್ರಶ್ನಿಸುವ ಬದಲು, ನಾವು ಅವಳು/ಅವನು ಅವರು ನಮ್ಮವರು, ಅವರು ನಮ್ಮ ಕುಟುಂಬ, ನಮ್ಮ ಸಂಬಂಧಿಕರು, ನಮ್ಮ ಸ್ನೇಹಿತರು ಎಂದು ಉತ್ತರಿಸುವಂತಿರಬೇಕು. “ನಾವು” ಎಂಬ ಸಂಸ್ಕೃತಿ ಅಳವಡಿಸಿಕೊಂಡರೆ, ನಮ್ಮ ದೀಪಾವಳಿ ಆಚರಣೆ ನಿಜವಾದ ಆಚರಣೆಯಾಗುತ್ತದೆ ಮತ್ತು ಅರ್ಥಪೂರ್ಣವಾಗಿಸುತ್ತದೆ.” “ಬೆಳಕಿನ ಹಾದಿಯಲ್ಲಿ ನಡೆಯುವ ಜನರ ಜೀವನ ಕಲೆ ನಮ್ಮದಾಗಬೇಕು. ಬೆಳಕಿನಲ್ಲಿ

 “ಬೆಳಕಿನಲ್ಲಿ ನಡೆಯುವ ಜನರ ಜೀವನ ಕಲೆ,  ಕತ್ತಲಲ್ಲಿ ನಡೆಯುವ ಜೀವನ ಕಲೆಕಿಂತ ಮೀರಿಸುತ್ತದೆ, ಅದು ನಮ್ಮ ಸಂಸ್ಕೃತಿ, ಧರ್ಮದ ಶ್ರೇಷ್ಠತೆಯನ್ನು ತೋರಿಸುತ್ತದೆ. ಹಾಗೂ ಇತರರೊಂದಿಗೆ,  ಭಾವೈಕತೆ, ಒಗ್ಗಟ್ಟು, ಶಾಂತಿಯುತ ಮತ್ತು ಸಾಮರಸ್ಯದ ಜೀವನಕ್ಕೆ ಹಾಗೂ ಮತ್ತು ಮಾನವೀಯತೆಗೆ ಸಹಾಯ ಮಾಡುವುದು” ” ಎಂದು ಬಿಷಪ್ ಪೀಟರ್ ಹೇಳಿದರು. ಪ್ರತಿಯೊಬ್ಬ ವ್ಯಕ್ತಿಯು ಅಂತರ್ಗತವಾಗಿ ದೇವರ ಬೆಳಕಿನ ಕಿರಣವನ್ನು ಹೊಂದಿದ್ದು ಅದು ದೇವರ ಬೆಳಕಿನಲ್ಲಿ ನಡೆಯಲು ಕೊಡುಗೆ ನೀಡುತ್ತದೆ. ಜನರ ಸಾಮಾನ್ಯ ಒಳಿತಿಗಾಗಿ ನಾವು ಇತರರನ್ನು ಆತ್ಮವಿಶ್ವಾಸದಿಂದ ಪ್ರೀತಿಸಿದಾಗ ಅದು ಬೆಳಕಿನಂತೆ ಪ್ರಜ್ವಲಿಸುತ್ತದೆ, ಇತರ ಧರ್ಮಗಳ ಮೇಲಿನ ಸಂಕೋಚತನ, ಬಿಟ್ಟು ಬಾಳಿದರೆ ಕತ್ತಲೆಯಲ್ಲಿ ಬೆಳಕು ಬೆಳಗುತ್ತದೆ” ಎಂದು ಬಿಷಪ್ ಪೀಟರ್ ಹೇಳಿದರು.

     ಮಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ.ಪಿ.ಸುಬ್ರಹ್ಮಣ್ಯ ಯಡಪಡಿತ್ತಾಯ ಮಾತನಾಡಿ  “ಹಂಚಿಕೊಳ್ಳುವಿಕೆ, ಇತರ ಧರ್ಮಗಳ ಕಡೆಗೆ ಮ್ರದು ಮನಸ್ಸು, ಹೃದಯ ಮುಕ್ತತೆ ಮತ್ತು ಮಾನವೀಯತೆಯನ್ನು ಎತ್ತಿ ಹಿಡಿಯುವ, ಪ್ರೀತಿ ಮತ್ತು ಒಗ್ಗಟ್ಟಿನ ಸಂಸ್ಕೃತಿ, ದೀಪಾವಳಿ ಆಚರಣೆಯ ಮೂಲವಾಗಿದೆ’ ಎಂದು ಹೇಳಿದರು. ವಿಜಯ ಕರ್ನಾಟಕ ದಿನಪತ್ರಿಕೆಯ ಮುಖ್ಯ ವರದಿಗಾರ ಮೊಹಮ್ಮದ್ ಆರೀಫ್ ಮಾತನಾಡಿ, ‘ಬೆಳಕಿನ ಹಬ್ಬವನ್ನು ಅನ್ಯ ಧರ್ಮದವರೊಂದಿಗೆ ಆಚರಿಸಿದಾಗ ಬೆಳಕಿನ ಶಕ್ತಿ ಹೆಚ್ಚುತ್ತದೆ, ಅಸೂಯೆ, ಕ್ರೋಧ, ಬಡತನ ಕತ್ತಲೆಯ ಪ್ರತೀಕವಾದರೆ, ಪ್ರೀತಿ, ಪರಸ್ಪರ ಸಹಕಾರ ಬೆಳಕಿನ ಪ್ರತೀಕ ಎಂದರು.

   ಸಾಮರಸ್ಯ ಸಂಸ್ಥೆ ಮಂಗಳೂರು ಅಧ್ಯಕ್ಷೆ ಶ್ರೀಮತಿ ಮಂಜುಳಾ ನಾಯಕ್ ಮಾತನಾಡಿ ’ಎಲ್ಲ ಧರ್ಮದವರ ಹಬ್ಬ ಹರಿದಿನಗಳನ್ನು ಆಚರಿಸುವ ಸಂಪ್ರದಾಯ, ಸಂಸ್ಕೃತಿ ಇದೆ. ಎಲ್ಲಾ ಜನರು ಶಾಂತಿ ಮತ್ತು ಸೌಹಾರ್ದಯುತ ಸಮಾಜವನ್ನು ಸೃಷ್ಟಿಸಲು ಮುಂದಾಗಾಬೇಕು’ ಎಂದು ಹೇಳಿದರು.

    ಈ ವಿಶೇಷ ಸಂದರ್ಭದಲ್ಲಿ ಸಂತ ಮದರ್ ಥೆರೇಸಾ ವಿಚಾರ ವೇದಿಕೆ, ಮಂಗಳೂರು ಇವರು ಮೇಣದ ಬತ್ತಿ (ಗೂಡುದೀಪ) ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ವಿಜೇತರಿಗೆ ಬಹುಮಾನ ವಿತರಿಸಲಾಯಿತು.ಈ ಕಾರ್ಯಕ್ರಮವನ್ನು ಸ್ವರಾಂಜಲಿ, ಸಂಗೀತ ಶಾಲೆ-ಯೆಕ್ಕೂರು ಮತ್ತು ಲಯನ್ಸ್ ಕ್ಲಬ್ ಆಫ್ ಮಂಗಳೂರು ಬಿಜೈ; ಸರಿಗಮ ಟ್ರಸ್ಟ್ ಸಹಯೋಗದಲ್ಲಿ ಆಯೋಜಿಸಿತ್ತು

    ರೆ.ಫಾ.ಸುದೀಪ್ ಪೌಲ್, ಎಂಎಸ್ಎಫ್ಎಸ್, ನಿರ್ದೇಶಕ ಸಂದೇಶ, ಶ್ರೀ ಸ್ಟ್ಯಾನಿ ಲೋಬೋ, ಅಧ್ಯಕ್ಷರು, ಕೆಥೋಲಿಕ್ ಸಭಾ ಮಂಗಳೂರು, ಸರಿಗಮ ಟ್ರಸ್ಟಿಗಳಾದ ಶ್ರೀ ಸ್ಟ್ಯಾನಿ ಆಲ್ವಾರಿಸ್, ಶ್ರೀ ವಿಜಯ್ ಆಲ್ಫ್ರೆಡ್,  ಶ್ರೀ ಥಾಮಸ್ ಪ್ರಸಾದ್, ಕಾರ್ಯದರ್ಶಿ, ಲಯನ್ಸ್ ಕ್ಲಬ್, ಬಿಜೈ, ಕೆ ಅಶ್ರಫ್ ಮಾಜಿ ಮೇಯರ್ , ಎಂಸಿಸಿ. ಇತರರು ಉಪಸ್ಥಿತರಿದ್ದರು.

      ಸಂತ ಮದರ್ ಥೆರೇಸಾ ವಿಚಾರ ವೇದಿಕೆಯ ಅಧ್ಯಕ್ಷರಾದ ರಾಯ್ ಕ್ಯಾಸ್ತಲಿನೋ ಸ್ವಾಗತಿಸಿದರು.  ಉಪಾಧ್ಯಕ್ಷೆ  ಫ್ಲಾವಿ ಡಿಸೋಜಾ ವಂದಿಸಿದರು. ಕಾರ್ಯದರ್ಶಿ ಸುನೀಲ್ ಕುಮಾರ್ ಬಜಾಲ್ ಕಾರ್ಯಕ್ರಮ ನಿರೂಪಿಸಿದರು.

     ಔಪಚಾರಿಕ ಕಾರ್ಯಕ್ರಮದ ನಂತರ ಸ್ವರಾಂಜಲಿ ಸಂಗೀತ ಶಾಲೆ-ಯೆಕ್ಕೂರು, ಫಾ| ವಾಲ್ಟರ್ ಅಲ್ಬುಕರ್ಕ್ ಮೆಮೋರಿಯಲ್ ಗಾಯನ ಪಂಗಡ, ಮಂಗಳೂರು. ಮತ್ತು ಕಲಾ ಸರಸ್ವತಿ ನಾಟ್ಯಾಲಯದಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.