ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ 13 ನೇ ವಾರ್ಷಿಕ ಮಹಾ ಸಭೆ ಉಪಾಧ್ಯಕ್ಷ ರಾದ ಕಿರಣ್ ಜಿ. ಗೌರಯ್ಯ ಅಧ್ಯಕ್ಷತೆ ಯಲ್ಲಿ ಜರುಗಿತು

ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ 13 ನೇ ವಾರ್ಷಿಕ ಮಹಾ ಸಭೆಯು ತಾರೀಖು 27-09-2022 ರಂದು 4-30ಕ್ಕೆ ಸರಕಾರಿ ಪದವಿ ಪೂರ್ವ ಕಾಲೇಜು ಕುಂದಾಪುರ ಇಲ್ಲಿ ಉಪಾಧ್ಯಕ್ಷ ರಾದ ಕಿರಣ್ ಜಿ. ಗೌರಯ್ಯ ಇವರ ಅಧ್ಯಕ್ಷತೆ ಯಲ್ಲಿ ಜರುಗಿತು. ಸಭೆಯಲ್ಲಿ70 ಜನ ಸದಸ್ಯರು ಹಾಜರಿದ್ದರು. ರಕ್ತ ಕೇಂದ್ರದ ಸಿಭಂದಿಗಳಿಂದ ಪ್ರಾರ್ಥನೆ ಯೊಂದಿಗೆ ಆರಂಭವಾಯಿತು. ಉಪಸಭಾಪತಿ ಡಾ. ಉಮೇಶ್ ಪುತ್ರನ್ ಇವರು ಸ್ವಾಗತಿಸಿದರು. ಸಭಾಪತಿ ಎಸ್. ಜಯಕರ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯದರ್ಶಿ ವೈ. ಸೀತಾರಾಮ ಶೆಟ್ಟಿ ವಾರ್ಷಿಕ ವರದಿ ಮಂಡಿಸಿದರು. ಖಜಾಂಚಿ ಶಿವರಾಮ ಶೆಟ್ಟಿ ವಾರ್ಷಿಕ ಲೆಕ್ಕ ಪತ್ರ ಮತ್ತು ಮುಂದಿನ ವರ್ಷದ ಅಂದಾಜು ಆಯವ್ಯಯ ಪತ್ರ ಮಂಡಿಸಿದರು. ಮುಂದಿನ ಮೂರು ವರ್ಷದ ಅವದಿಗೆ CA ಶಾಂತಾರಾಮ್ ನಾಯಕ್ ಇವರನ್ನು ಲೆಕ್ಕ ಪರಿಶೋಧಕರಾಗಿ ಸಭೆಯು ಸರ್ವಾನುಮತದಿಂದ ಆಯ್ಕೆ ಮಾಡಿತು. ಕೆಳಗಿನ ಹತ್ತು ಮಂದಿ ಕಾರ್ಯಕಾರಿ ಸದಸ್ಯರು ಗಳು ಸರ್ವಾನುಮತದಿಂದ ಆಯ್ಕೆ ಆದರು.
ಎಸ್. ಜಯಕರ ಶೆಟ್ಟಿ
ಡಾ. ಉಮೇಶ್ ಪುತ್ರನ್
ಶಿವರಾಮ ಶೆಟ್ಟಿ
ವೈ. ಸೀತಾರಾಮ ಶೆಟ್ಟಿ
ಗಣೇಶ್ ಆಚಾರ್ಯ
ಡಾ. ಸೋನಿ ಡಿಕೋಸ್ಟಾ
ಶಾಂತಾರಾಮ್ ಪ್ರಭು
ಸೀತಾರಾಮ ನಕ್ಕತ್ತಾಯ
ಎ. ಮುತ್ತಯ್ಯ ಶೆಟ್ಟಿ
ಸತ್ಯನಾರಾಯಣ ಪುರಾಣಿಕ್.
ಕಾರ್ಯದರ್ಷಿ ಯವರ ಧನ್ಯವಾದ ಸಮರ್ಪಣೆ ಮತ್ತು ಲಘು ಉಪಹಾರ ದೊಂದಿಗೆ ಮಹಾ ಸಭೆ ಮುಕ್ತಾಯ ಗೊಂಡಿತು.